ಬ್ರೇಕಿಂಗ್ ನ್ಯೂಸ್
17-10-20 06:10 pm Headline Karnataka News Network ದೇಶ - ವಿದೇಶ
ಮುಂಬೈ, ಅಕ್ಟೋಬರ್ 17: ಸಾಮಾನ್ಯವಾಗಿ ಆನ್ ಲೈನ್ ಮಾರ್ಕೆಟ್ ನಲ್ಲಿ ಒಮ್ಮೆ ಕಳಕೊಂಡ ವಸ್ತುವನ್ನು ಮರಳಿ ಪಡೆಯೋದು ತುಂಬ ಕಷ್ಟದ ಕೆಲಸ. ಆದರೆ, ಇಲ್ಲೊಬ್ಬ ಅಮೆಜಾನ್ ಮುಖ್ಯಸ್ಥನಿಗೇ ಮೈಲ್ ಹಾಕಿ ತನ್ನ ಕಳವಾದ ವಸ್ತುವನ್ನು ಮರಳಿ ಪಡೆದಿದ್ದಾನೆ.
ಮುಂಬೈ ನಿವಾಸಿ ಓಂಕಾರ್ ಹನ್ಮಾಂಟೆ, ಅಮೆಜಾನ್ ಮೂಲಕ ತನ್ನ ಅಜ್ಜಿಗೆ ಫೋನ್ ಒಂದನ್ನು ಖರೀದಿಸಿದ್ದರು. ಆದರೆ ಫೋನ್ ಅವರ ಕೈ ಸೇರದೆ ವಿತರಣೆ ಮಾಡುವ ಯುವಕನ ಅಜಾಗರೂಕತೆಯಿಂದ ಫೋನ್ ಕಳವಾಗಿತ್ತು. ಈ ಬಗ್ಗೆ ಅಮೆಜಾನ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಓಂಕಾರ್, ಅಮೆಜಾನ್ ಸಿಇಓ ಬೆಜೋಸ್ ಅವರಿಗೆ ಇಮೇಲ್ ಮಾಡಿ ಸಮಸ್ಯೆ ಹೇಳಿಕೊಂಡಿದ್ದ.
ಅಮೆಜಾನ್ನಿಂದ ಆರ್ಡರ್ ಮಾಡಿದ ಫೋನ್ ಅನ್ನು ನನಗೆ ಹಸ್ತಾಂತರಿಸಿಲ್ಲ. ಸೊಸೈಟಿ ಗೇಟ್ ಬಳಿ ಆರ್ಡರ್ ಇಟ್ಟುಹೋಗಿದ್ದು , ಕಳ್ಳರು ಅದನ್ನು ಕದ್ದಿದ್ದಾರೆ. ವಿತರಣೆಯ ಬಗ್ಗೆ ನನಗೆ ಕರೆಯನ್ನೂ ಮಾಡಿಲ್ಲ. ವಿತರಣೆ ಮಾಡಿದ್ದ ಆರ್ಡರ್ ಅನ್ನು ಕಳವಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ನಿಮ್ಮ ಆನ್ ಲೈನ್ ಮಾರುಕಟ್ಟೆಯಿಂದ ಖರೀದಿಸುವ ಮುನ್ನ ಎರಡು ಬಾರಿ ಯೋಚಿಸುತ್ತೇನೆ ಎಂದು ಪತ್ರ ಬರೆದಿದ್ದ.
ಅಮೆಜಾನ್ ಸಿಇಒ ಜೆಫ್ ಬೆಜೋಸ್ ಗ್ರಾಹಕರ ಮೇಲ್ಗಳನ್ನು ಓದುತ್ತಾರೆ. ಗ್ರಾಹಕರಿಗೆ ನೇರವಾಗಿ ಪ್ರತ್ಯುತ್ತರ ನೀಡದಿದ್ದರೂ, ಅವರು ಉಸ್ತುವಾರಿ ಅಧಿಕಾರಿಗಳಿಗೆ ರವಾನಿಸುತ್ತಾರೆ. ಆದರೆ, ಓಂಕಾರ್ ಗೆ ಅಮೆಜಾನ್ ರಿಲೇಶನ್ ಶಿಪ್ ತಂಡದಿಂದ ಉತ್ತರ ಬಂದಿತ್ತು. ಓಂಕಾರ್ ಈ ಹಿಂದೆ ಒದಗಿಸಿದ್ದ ಕಳ್ಳತನದ ಪುರಾವೆಗಳನ್ನು ಅಮೆಜಾನ್ ಅಧಿಕಾರಿಗಳು ಪರಿಶೀಲಿಸಿದಾಗ, ಫೋನ್ ಸರಿಯಾದ ವಿಳಾಸಕ್ಕೆ ತಲುಪಿತ್ತು. ಆದರೆ ಪಾರ್ಸೆಲ್ ಅನ್ನು ಪ್ರವೇಶ ದ್ವಾರದಲ್ಲಿ ಬಿಟ್ಚಿದ್ದರಿಂದ ಅದು ಮಾಲೀಕರ ಕೈಗೆ ಸಿಗಲಿಲ್ಲ. ಸಿಸಿಟಿವಿ ದೃಶ್ಯದಲ್ಲಿ ಫೋನ್ ಕದ್ದಿರುವುದು ಸಾಬೀತಾಗಿದ್ದರಿಂದ ಅಮೆಜಾನ್ ಫೋನಿನ ಪೂರ್ತಿ ಹಣವನ್ನು ವಾಪಾಸ್ ಮಾಡಿದೆ.
Recently when a customer from Mumbai wrote to Amazon founder Bezos about a missing package, within days Amazon executives contacted him and settled his issue.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 11:11 pm
Mangalore Correspondent
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm