ಬ್ರೇಕಿಂಗ್ ನ್ಯೂಸ್
17-10-20 07:29 am Headline Karnataka News Network ದೇಶ - ವಿದೇಶ
ಜಮ್ಮು-ಕಾಶ್ಮೀರ, ಅಕ್ಟೋಬರ್ .17 : ಜಮ್ಮು ಕಾಶ್ಮೀರದಲ್ಲಿ ಜನರು ಉಗ್ರರ ಸಖ್ಯ ಬಿಟ್ಟು ಮುಖ್ಯವಾಹಿನಿಗೆ ಬರಬೇಕು. ಅದಕ್ಕಾಗಿ ಸರಕಾರದ ಜೊತೆ ಕೈಜೋಡಿಸಬೇಕೆಂದು ಅಲ್ಲಿ ಅಭಿಯಾನಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿಯೇ ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದ ಭಯೋತ್ಪಾದಕನ ಮಗನೊಬ್ಬ ಮುಖ್ಯ ವಾಹಿನಿಗೆ ಬಂದು ಕೆಎಎಸ್ ಅಧಿಕಾರಿಯಾಗುವ ಮೂಲಕ ದೇಶದ ಗಮನ ಸೆಳೆದಿದ್ದಾನೆ.
ಜಮ್ಮ-ಕಾಶ್ಮೀರದ ದೋಡಾ ಜಿಲ್ಲೆಯ ಗುಂಡ್ನಾ ಗ್ರಾಮ ಎಂದರೆ ಹಿಂದೆ ಭಯೋತ್ಪಾದಕರೇ ತುಂಬಿಕೊಂಡಿದ್ದ ಪ್ರದೇಶವಾಗಿತ್ತು. ಇದೇ ಏರಿಯಾದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಹಲವು ಉಗ್ರರು ಸಾವಿಗೀಡಾಗಿದ್ದರು. ಈ ಪೈಕಿ ಒಬ್ಬ ಉಗ್ರನ ಪುತ್ರ ಅಬ್ದುಲ್ಲಾ ಎಂಬಾತನನ್ನು ಶ್ರೀನಗರದ ಅನಾಥಾಶ್ರಮದಲ್ಲಿ ಬೆಳಸಲಾಗಿತ್ತು. ಸಾಕಷ್ಟು ಸವಾಲುಗಳನ್ನು ಮೆಟ್ಟಿ ನಿಂತು ಸೇನಾಧಿಕಾರಿಗಳ ಪ್ರೋತ್ಸಾಹ ಪಡೆದ ಯುವಕ ಈಗ ಸರಕಾರದ ಕೆಎಎಸ್ ಎಕ್ಸಾಂ ಬರೆದು ಅಧಿಕಾರಿಯಾಗಿದ್ದಾನೆ.
ಆಲಿಗಢ ಮುಸ್ಲಿಂ ವಿವಿಯಲ್ಲಿ ಪದವಿ ಪಡೆದಿದ್ದ ಅಬ್ದುಲ್ಲಾ ಕೆಎಎಸ್ ಪಾಸ್ ಮಾಡಿದ್ದು ಜಮ್ಮು ಕಾಶ್ಮೀರದಲ್ಲಿ ಇತರೇ ಮಂದಿಗೆ ದೊಡ್ಡ ಪ್ರೇರಣೆಯಾಗಲಿದೆ ಎನ್ನಲಾಗುತ್ತಿದೆ. ಈತನ ಸಾಧನೆಯಿಂದ ಉತ್ತೇಜಿತರಾದ ಭಾರತೀಯ ಸೇನೆ ಕಾರ್ಯಕ್ರಮ ಹಮ್ಮಿಕೊಂಡು ಅಬ್ದುಲ್ಲಾ ಅವರನ್ನು ವಿಶೇಷವಾಗಿ ಸನ್ಮಾನಿಸಿ, ಕಾಶ್ಮೀರದ ಯುವಜನರು ಸರಕಾರಿ ಅಧಿಕಾರಿಯಾಗಲು ಮುಂದೆ ಬರುವಂತೆ ಕರೆ ನೀಡಿದೆ.
ಇದೆ ವೇಳೆ ಮಾತನಾಡಿದ ಅಬ್ದುಲ್ಲಾ, ಬಾಲ್ಯದಿಂದಲೂ ತುಂಬ ಸವಾಲುಗಳನ್ನು ಮೆಟ್ಟಿಕೊಂಡು ಮುಂದೆ ಬಂದಿದ್ದೇನೆ. ಕಷ್ಟಗಳು ಎದುರಾದರೂ, ಅಧಿಕಾರಿ ಆಗಬೇಕೆಂಬ ಗುರಿಯನ್ನು ಬಿಟ್ಟು ಕೊಡಲಿಲ್ಲ. ಉಗ್ರವಾದದಿಂದ ಮುಕ್ತವಾದ ಪ್ರದೇಶಗಳಲ್ಲಿ ಯುವ ಜನಾಂಗಕ್ಕೆ ಸಾಕಷ್ಟು ಅವಕಾಶಗಳಿದ್ದು ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಕಠಿಣ ಪರಿಶ್ರಮ ಹೇಗೆ ವ್ಯಕ್ತಿಯ ಜೀವನವನ್ನು ಬದಲಿಸಬಹುದು ಎಂಬುದಕ್ಕೆ ಘಾಜಿ ಅಬ್ದುಲ್ಲಾ ಉತ್ತಮ ಉದಾಹರಣೆ ಎಂದು ಸೇನಾ ವಕ್ತಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:13 pm
Mangalore Correspondent
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
Mangalore, Suhas Shetty Murder, Anti Communia...
03-05-25 02:58 pm
Mangalore Suhas Shetty Murder, Instagram, Pol...
02-05-25 10:47 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm