ಬ್ರೇಕಿಂಗ್ ನ್ಯೂಸ್
15-10-20 03:08 pm Headline Karnataka News Network ದೇಶ - ವಿದೇಶ
ಪೋಲೆಂಡ್, ಅಕ್ಟೋಬರ್ 15: ಎರಡನೇ ಮಹಾಯುದ್ಧದ ಕಾಲಕ್ಕೆ ಸೇರಿದ ಐದು ಟನ್ ಸಾಮರ್ಥ್ಯದ ಬಾಂಬ್ ಒಂದನ್ನು ಪೋಲೆಂಡ್ ನ ಬಾಲ್ಟಿಕ್ ಸಮುದ್ರ ಮಧ್ಯೆ ನೀರಿನಡಿಯಲ್ಲಿ ಸ್ಫೋಟಿಸಿ, ನಿಷ್ಕ್ರಿಯಗೊಳಿಸಲಾಗಿದೆ.
'ಟಾಲ್ಬಾಯ್' ಅಡ್ಡನಾಮದ ಈ ಬಾಂಬಿಗೆ 'ಭೂಕಂಪನದ ಬಾಂಬ್' ಎಂದು ಕರೆಯಲಾಗುತ್ತಿದ್ದು, 1945ರಲ್ಲಿ ನಾಝಿ ಸಮರನೌಕೆಯ ಮೇಲೆ ರಾಯಲ್ ವಾಯುಪಡೆ ಈ ಬಾಂಬನ್ನು ಹಾಕಿತ್ತು. ಆದರೆ, ಬಾಂಬ್ ಸ್ಫೋಟಗೊಳ್ಳದೆ ಹಾಗೇ ಉಳಿದಿತ್ತು. ಆಬಳಿಕ ವಾಯುವ್ಯ ಪೋಲೆಂಡ್ನ ಬಂದರು ನಗರವಾದ ಸ್ವಿನೌಜ್ಸಿ ಬಳಿ ಹೂಳೆತ್ತುವ ಸಂದರ್ಭದಲ್ಲಿ ಈ ಬಾಂಬ್ ಕಂಡುಬಂದಿತ್ತು.



ಆರು ಮಿಟರ್ಗಿಂತ ಉದ್ದವಿದ್ದ ಈ ಬಾಂಬ್ನಲ್ಲಿ 2.4 ಟನ್ ಸ್ಪೋಟಕಗಳಿದ್ದವು. ಇದು 3.6 ಟನ್ ಟಿಎನ್ ಟಿ ಸ್ಫೋಟಕಕ್ಕೆ ಸಮ ಎನ್ನಲಾಗಿತ್ತು. ಬಾಂಬ್ ಪತ್ತೆಯಾದ ಜಾಗದ ಪಕ್ಕದಲ್ಲೇ ಸೇತುವೆ ಇದ್ದುದರಿಂದ ಈ ಬಾಂಬ್ ಅನ್ನು ಸುಲಭದಲ್ಲಿ ನಿಷ್ಕ್ರೀಯಗೊಳಿಸುವ ಸಾಧ್ಯತೆ ಇರಲಿಲ್ಲ.
ಹೀಗಾಗಿ ಸ್ಪೋಟಕಗಳನ್ನು ಯಾವುದೇ ಸ್ಫೋಟ ಆಗದಂತೆ ಹಾಗೇ ಸುಟ್ಟುಬಿಡುವ ತಂತ್ರವನ್ನು ನೌಕಾಪಡೆ ಅನುಸರಿಸಿದೆ. ರಿಮೋಟ್ ನಿಯಂತ್ರಕದಿಂದ ಶೆಲ್ ಒಳಗೆ ಉರಿಯುವ ಪ್ರಕ್ರಿಯೆಯನ್ನು ನಿಯಂತ್ರಿಸಲಾಗಿದೆ.
ಇದಕ್ಕಾಗಿ ಸುಮಾರು 2.5 ಕಿಲೋಮೀಟರ್ ಪ್ರದೇಶದ 750 ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಸುತ್ತ 16 ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಲಮಾರ್ಗಗಳಲ್ಲಿ ಸಮುದ್ರ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
Biggest World War Two bomb found in Poland explodes under water while being defused https://t.co/oucLfGyTDA pic.twitter.com/T2Zdbzqumk
— Reuters (@Reuters) October 14, 2020
A British World War II bomb exploded while being made safe underwater by navy demolition specialists in northwestern Poland on. No one was injured states report.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm