ಬ್ರೇಕಿಂಗ್ ನ್ಯೂಸ್
22-07-22 09:47 pm HK News Desk ದೇಶ - ವಿದೇಶ
ವಯನಾಡ್, ಜುಲೈ 22: ಕೇರಳದಲ್ಲಿ ಒಂದೆಡೆ ಮಂಕಿ ಪಾಕ್ಸ್ ಭೀತಿ ಮೂಡಿಸಿದ್ದರೆ, ಮತ್ತೊಂದೆಡೆ ವಯನಾಡ್ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರವೂ ಕಾಣಿಸಿಕೊಂಡಿದೆ. ರೋಗದ ಬಗ್ಗೆ ಸ್ಯಾಂಪಲನ್ನು ಭೋಪಾಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಆಫ್ರಿಕನ್ ಹಂದಿ ಜ್ವರ ಖಚಿತವಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಕಳೆದ ವಾರ ಹಂದಿ ಫಾರ್ಮ್ ನಲ್ಲಿ ಐದು ಹಂದಿಗಳು ದಿಢೀರ್ ಆಗಿ ಸಾವು ಕಂಡಿದ್ದರಿಂದ ಪಶು ಚಿಕಿತ್ಸಾಲಯದ ವೈದ್ಯರು ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಹಂದಿ ಜ್ವರ ಖಚಿತವಾಗುತ್ತಲೇ ಎರಡು ಕಿಮೀ ಸುತ್ತಲಿನ ಹಂದಿ ಫಾರ್ಮ್ ಗಳಲ್ಲಿರುವ ಎಲ್ಲ ಹಂದಿಗಳನ್ನು ಕೊಲ್ಲಲು ಆರೋಗ್ಯ ಇಲಾಖೆ ಸೂಚಿಸಿದೆ. ಆಸುಪಾಸಿನಲ್ಲಿ ಮೂರು ಫಾರ್ಮ್ ಗಳಿದ್ದು ಅದರಲ್ಲಿ 300ರಷ್ಟು ಹಂದಿಗಳಿದ್ದು ಅವನ್ನು ಶುಕ್ರವಾರವೇ ಕೊಂದು ಮುಗಿಸಲು ಆದೇಶ ಮಾಡಲಾಗಿದೆ.
ಹಂದಿ ಜ್ವರ ಮಾನವನಿಗೆ ಹರಡುವುದು ಅಪರೂಪ. ಆದರೆ, ಕೆಲವು ಸಂದರ್ಭಗಳಲ್ಲಿ ಜ್ವರ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ವಯನಾಡ್ ಮತ್ತು ಕೋಝಿಕ್ಕೋಡ್ ಜಿಲ್ಲೆಯಲ್ಲಿ ಎಲರ್ಟ್ ಮಾಡಲಾಗಿದೆ. ರೋಗದ ಶಂಕೆಯಲ್ಲಿ ಎರಡು ವಾರಗಳ ಹಿಂದೆಯೇ ಹಂದಿ ಮಾಂಸ ಹೊರ ರಾಜ್ಯಗಳಿಗೆ ಸಾಗಾಟ ಮಾಡುವುದಕ್ಕೆ ರಾಜ್ಯ ಸರಕಾರ ನಿಷೇಧ ವಿಧಿಸಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಹಂದಿ ಮತ್ತು ಬೀಫ್ ಮಾಂಸವನ್ನು ಆಹಾರವಾಗಿ ಬಳಸುವ ಮೊದಲು ಚೆನ್ನಾಗಿ ಬೇಯಿಸಬೇಕು ಎಂದು ಜನರಿಗೆ ಸೂಚನೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹಂದಿ ಜ್ವರವು ಪ್ರಾಣಿಗಳಲ್ಲಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಮನುಷ್ಯನಿಗೆ ಹರಡಿ ಸಮಸ್ಯೆ ಆಗುವುದಕ್ಕಿಂತಲೂ ಹಂದಿಯಿಂದ ಇತರ ಪ್ರಾಣಿಗಳಿಗೆ ಹರಡಿ ದೊಡ್ಡ ಮಟ್ಟದಲ್ಲಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಹಂದಿ ಫಾರ್ಮ್ ಗಳಿಗೆ ಇದರಿಂದ ದೊಡ್ಡ ಹೊಡೆತ ಬೀಳುತ್ತದೆ ಎಂದು ಹೇಳಿದೆ.
African swine fever found in Kerala’s Wayanad, mass culling of pigs soonTwo districts of north Kerala have been put on high alert after African swine fever was detected in pigs in Wayanad on Friday, health officials said.
11-10-25 11:03 pm
Bangalore Correspondent
ಮೂವರು ಮಕ್ಕಳ ಮಮ್ಮಿಗೆ ಇನ್ನೊಬ್ಬನ ಜೊತೆ ಲವ್ವಿ ಡವ್ವ...
11-10-25 10:05 am
ಮುಂದಿನ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್...
10-10-25 07:06 pm
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
11-10-25 12:52 pm
HK News Desk
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
11-10-25 10:24 pm
Mangalore Correspondent
Malayalam actor Jayakrishnan Arrest, Mangalor...
11-10-25 07:18 pm
Karkala Suicide Case, Abishek Death Note: ನನ್...
11-10-25 05:52 pm
Muslim Terrorist, Mangalore, Jayakrishnan Ker...
11-10-25 11:11 am
ಮುಡಾ ಲೇಔಟ್ ; ಕುಂಜತ್ತ್ ಬೈಲಿನಲ್ಲಿ ಅವೈಜ್ಞಾನಿಕ ರೀ...
10-10-25 06:52 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm