ಭಾರೀ ಸಿಡಿಲು ಮಳೆಗೆ ನಲುಗಿದ ಸಿಲಿಕಾನ್ ಸಿಟಿ ; ರಸ್ತೆಯಲ್ಲಿ ತುಂಬಿ ನಿಂತ ಮಳೆನೀರು, ವಾಹನ ಸವಾರರ ಪರದಾಟ 

18-05-22 11:31 am       Bangalore Correspondent   ಕರ್ನಾಟಕ

​​​​​ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ರಾತ್ರಿ ವರುಣ ಅಬ್ಬರಿಸಿದ್ದಾನೆ. ಸತತ ಮೂರು ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲಾ ನೀರು ತುಂಬಿಕೊಂಡು ನದಿಗಳಾಗಿದ್ದು ವಾಹನಗಳು ತೇಲಾಡುವ ಸ್ಥಿತಿ ಉಂಟಾಗಿತ್ತು.

ಬೆಂಗಳೂರು, ಮೇ 18 : ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ರಾತ್ರಿ ವರುಣ ಅಬ್ಬರಿಸಿದ್ದಾನೆ. ಸತತ ಮೂರು ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲಾ ನೀರು ತುಂಬಿಕೊಂಡು ನದಿಗಳಾಗಿದ್ದು ವಾಹನಗಳು ತೇಲಾಡುವ ಸ್ಥಿತಿ ಉಂಟಾಗಿತ್ತು.

ಗುಡುಗು, ಸಿಡಿಲಿನೊಂದಿಗೆ ರಾತ್ರಿ 8 ರಿಂದ 10 ಗಂಟೆ ವರೆಗೂ ನಿರಂತರ ಮಳೆಯಾಗಿದ್ದು ಬೆಂಗಳೂರು ನಗರದ ಜನರು ಬೆಚ್ಚಿ ಬಿದ್ದಿದ್ದಾರೆ. 
ರಸ್ತೆಗಳು ಜಲಾವೃತಗೊಂಡ ಕಾರಣ ವಾಹನ ಸವಾರರು ಪರದಾಡಿದ್ದಾರೆ. ಕಾರುಗಳು ಮಳೆ ನೀರಿನಲ್ಲಿ ಅರ್ಧಕ್ಕೆ ಮುಳುಗಡೆಯಾಗಿ ಕೆಟ್ಟು ನಿಲ್ಲುವಂತಾಗಿತ್ತು. ನಾಯಂಡಹಳ್ಳಿ, ಶೇಷಾದ್ರಿಪುರಂ, ಯಶವಂತಪುರ ಭಾಗದಲ್ಲಿ ರಸ್ತೆಗಳು ನೀರಿನಿಂದ ಆವೃತವಾಗಿತ್ತು. 

Bengaluru's Yelahanka Flooded After Heavy Rains; Civic Body Blames Code  Violation, Residents Refute

ಭಾರತೀಯ ಹವಾಮಾನ ಇಲಾಖೆ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ರಾಜಧಾನಿ ಬೆಂಗಳೂರಲ್ಲೂ ಮಳೆಯ ಆರ್ಭಟ ಮುಂದುವರೆಯಲಿದೆ.

Bengaluru: BBMP junks underpasses, to build flyovers instead | Bengaluru  News - Times of India

ರಸ್ತೆಯಲ್ಲಿ ಕೆಟ್ಟು ನಿಂತ ಕಾರುಗಳು 

Another spell of rain leaves Bengaluru in misery | Deccan Herald

ರಾತ್ರಿ ವೇಳೆ ದಿಢೀರ್ ಸುರಿದ ಮಳೆಗೆ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡಿತ್ತು. ಭಾರೀ ಮಳೆಗೆ ರಾಜಕಾಲುವೆ ತುಂಬಿ ಹರಿದು ರಸ್ತೆಯೇ ರಾಜಕಾಲುವೆಯಾಗಿತ್ತು. ರಸ್ತೆಯಲ್ಲಿ ಸಾಗುತ್ತಿದ್ದ ಕಾರುಗಳು ಕೆಟ್ಟು ನಿಂತಿದ್ದರಿಂದ ಸಾರ್ವಜನಿಕರು ಸೇರಿ ದೂಡಿ ದಾಟಿಸುತ್ತಿದ್ದರು. ಚಾಲಕರೇ ಕಾರನ್ನು ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

As heavy rains drown Bengaluru, lack of proper infrastructure adds to  commuters' problems-India News , Firstpost

ಯಶವಂತ ಪುರದಲ್ಲೂ ಭಾರೀ ಮಳೆಯಾದ ಪರಿಣಾಮದಿಂದಾಗಿ ಬಸ್ ನಿಲ್ದಾಣ ಬಳಿಯ ಅಂಡರ್ ಪಾಸ್‌ನಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಜನರು ಮಳೆಯಿಂದ ರಕ್ಷಣೆ ಪಡೆಯಲು ಫ್ಲೈ ಓವರ್ ಕೆಳಗೆ ನಿಂತಿದ್ದರು. ಯಶವಂತಪುರ, ಮತ್ತಿಕೆರೆ ಸುತ್ತ-ಮುತ್ತ ಮಳೆ ಅವಾಂತರವನ್ನೇ ಸೃಷ್ಟಿಸಿದೆ.

Heavy rains lashed Bengaluru on Tuesday evening which led to waterlogging in many parts of the city. The torrential rains, which were accompanied by lightning and thunder, started in the evening and intensified by night. It caused traffic snarls in Hebbal, Silk Board. Mysuru Road and Bommnahalli.Vehicles were stuck in the traffic for hours as some areas witnessed knee-deep water. Social media was flooded with the clips of inundated roads.