ಬ್ರೇಕಿಂಗ್ ನ್ಯೂಸ್
19-04-22 08:06 pm HK Desk news ಕರ್ನಾಟಕ
ವಿಜಯಪುರ, ಎ.19: ಹುಬ್ಬಳ್ಳಿ ಗಲಾಟೆಯಲ್ಲಿ ಆರ್ ಎಸ್ ಎಸ್ ಮುರ್ದಾಬಾದ್, ಐಎಸ್ಐ ಜಿಂದಾಬಾದ್ ಘೋಷಣೆ ವಿಡಿಯೋ ಕಂಡುಬಂದಿದ್ದು ಇದರ ಹಿಂದೆ ದೊಡ್ಡ ಷಡ್ಯಂತ್ರ ಇರುವ ಶಂಕೆಯಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮುಗ್ಧ, ಅಮಾಯಕ ಜನರನ್ನು ಬಂಧಿಸಬಾರದು ಅಂತ ಒಬ್ಬರು ನಾಯಕರು ಟ್ವಿಟ್ ಮಾಡ್ತಾರೆ ಎಂದು ಎಚ್ ಡಿ ಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಯತ್ನಾಳ್, ಅಮಾಯಕರು ಅಂತ ಇವರಿಗೆ ರಾತ್ರಿ ಕನಸು ಬಿದ್ದಿತ್ತಾ..? ಮುಸ್ಲಿಂ ವೋಟಿನ ಸಲುವಾಗಿ ದೇಶ ಮಾರಾಟಕ್ಕೆ ತಯಾರಾಗಿದ್ದಾರೆ. ಮುಂದಿನ ಬಾರಿ ಮುಸ್ಲಿಂ ವೋಟಿನಿಂದಷ್ಟೇ ಆಯ್ಕೆಯಾಗಿ ಬರ್ತೀರಾ..? ತಾಕತ್, ಧಮ್ ಇದ್ದರೆ ಆಯ್ಕೆಯಾಗಿ ಬನ್ನಿ ನೋಡೋಣ ಅಂತ ಸವಾಲು ಹಾಕಿದರು.

ಹಿಂದೂಗಳು ಯಾಕೆ ನಿಮಗೆ ವೋಟ್ ಹಾಕಬೇಕು. ನೀವು ಹಿಂದೂಗಳ ಮನೆ, ದೇಗುಲ ಮೇಲೆ ಕಲ್ಲು ಹೊಡೆದಿರುವ ಬಗ್ಗೆ ಖಂಡಿಸುವುದಿಲ್ಲ. ಪೊಲೀಸರ ಮೇಲೆ ಹಲ್ಲೆ ಮಾಡಿರೋದನ್ನು ಖಂಡಿಸುವುದಿಲ್ಲ. ನಾಳೆ ನಿಮ್ಮ ಸರ್ಕಾರ ಬಂದ್ರೆ ಪೊಲೀಸರಿಗೆ ಏನು ರಕ್ಷಣೆ ಕೊಡ್ತೀರಿ. ಅವರು ಹೇಳಿದ್ದಂತೆ ಸರ್ಕಾರ ನಡೆಸ್ತೀರಾ. ಈ ಎಲ್ಲಾ ಘಟನೆಗಳಿಂದ ನಿಮ್ಮ ಬಣ್ಣ ಬಯಲಾಗುತ್ತಿದೆ.

ನನ್ನ ಮಗನಿಗೆ ಗುಳಗಿ ಕೊಡಬೇಕು ಅಂತ ಅಳ್ತಾರೆ. ಇದು ನಾಟಕ ಅಂತ ಗೊತ್ತಿದೆ. ಇವರು ಯಾವಾಗ ಅಳತ್ತಾರೋ ಯಾವಾಗ ಕುತ್ತಿಗೆ ಕೊಯ್ತಾರೋ ಗೊತ್ತಿಲ್ಲ. ಕಾಶ್ಮೀರ ಫೈಲ್ ಸಿನಮಾ ಸತ್ಯ ಘಟನೆ. ಅದರಲ್ಲಿ ಸ್ವಲ್ಪ ಅಷ್ಟೇ ತೋರಿಸಿದ್ದಾರೆ. ಮುಸ್ಲಿಮರು ಶೇಕಡಾ 50 ರಷ್ಟಾದರೆ ಒಬ್ಬ ಹಿಂದೂವನ್ನು ಜೀವನ ಮಾಡೋಕೆ ಬಿಡಲ್ಲ. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಏನಿದೆ ಗೊತ್ತಿಲ್ಲವೇ.. ಇದರ ಬಗ್ಗೆ ಒಮ್ಮೆಯಾದರೂ ಸಿದ್ದರಾಮಯ್ಯ, ಡಿಕೆಶಿ ಮಾತನಾಡ್ತಾರೆಯೇ.. ಮುಸ್ಲಿಮರು ಶೇಕಡಾ 50 ರಷ್ಟಾದರೆ ಯಾವ ಡಿಕೆಶಿ, ಸಿದ್ದರಾಮಯ್ಯ, ಎಂಬಿ ಪಾಟೀಲ್, ಕುಮಾರಣ್ಣಗೂ ವೋಟ್ ಹಾಕಲ್ಲ ಅವರು ಎಂದು ಹೇಳಿದರು.

ಆರೆಸ್ಸೆಸ್ ಇರೋದ್ರಿಂದ ದೇಶ ಉಳಿದಿದೆ, ಜನ ಸುರಕ್ಷಿತ ಇದ್ದಾರೆ !
ಆರ್ ಎಸ್ ಎಸ್ ಇರೋದ್ರಿಂದ ದೇಶ ಉಳಿದಿದೆ. ಆರ್ ಎಸ್ ಎಸ್ ಕಾರಣದಿಂದ ಹಿಂದೂಗಳು ಸುರಕ್ಷಿತವಾಗಿದ್ದಾರೆ. ದೇಶದಲ್ಲಿ ಆರ್ ಎಸ್ ಎಸ್ ಇರದಿರುತ್ತಿದ್ದರೆ, ನಮ್ಮ ದೇಶದಲ್ಲಿ ನೆಹರುನಂತಹ ಅಯೋಗ್ಯ ಪ್ರಧಾನ ಮಂತ್ರಿ ಇರುತ್ತಿದ್ದರು. ಅಂಥವರ ವಿರುದ್ಧ ಹೋರಾಟ ಮಾಡಿದ ಪರಿಣಾಮ ನಮ್ಮ ದೇಶದಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ, ಆರ್ ಎಸ್ ಎಸ್ ಮೂಲದವರೇ ಬಂದಿದ್ದಾರೆ. ಇದರಿಂದ ಜಗತ್ತಿನಲ್ಲಿ ಭಾರತ ಮೂರನೇ ಶಕ್ತಿಯಾಗಿದೆ. ಇಲ್ಲಾ ಅಂದ್ರೆ ಇವರ ಕೈಯಲ್ಲಿ ಕೊಟ್ಟಿದ್ದರೆ, ನೆಹರು ಕುಟುಂಬದ ಕೈಯಲ್ಲಿ ಕೊಟ್ಟಿದ್ದರೆ ರಾಹುಲ್ ಗಾಂಧಿ ಹ್ಯಾಂಗ್ ಅದಾನಲ್ಲ ನೋಡಿರಲ್ಲ. ಬಟಾಟೆಯಿಂದ ಬಂಗಾರ ತೆಗೀತಿನಿ ಅಂತಿದಾನೆ ರಾಹುಲ್ ಗಾಂಧಿ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.
Yatnal slams HD Kumaraswami on Hindu Muslim riot in Hubli.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm