ಬ್ರೇಕಿಂಗ್ ನ್ಯೂಸ್
30-03-22 01:10 pm HK Desk news ಕರ್ನಾಟಕ
ಮಂಡ್ಯ, ಮಾ.30: ಕೊಲ್ಲೂರಿನಲ್ಲಿ ಟಿಪ್ಪು ಹೆಸರಿನಲ್ಲಿ ಸಲಾಂ ಆರತಿ ಮಾಡುವುದಕ್ಕೆ ಆಕ್ಷೇಪ ಕೇಳಿಬಂದ ಬೆನ್ನಲ್ಲೇ ಮಂಡ್ಯದ ಮೇಲುಕೋಟೆಯಲ್ಲೂ ಸಲಾಂ ಪೂಜಾ ಪದ್ಧತಿ ಇರುವುದು ಬೆಳಕಿಗೆ ಬಂದಿದೆ. ಮೇಲುಕೋಟೆ ಚೆಲುವನಾರಾಯಣ ದೇವಾಲಯದಲ್ಲಿ ಪ್ರತಿನಿತ್ಯ ದೀವಟಿಗೆ ಸಲಾಂ ಹೆಸರಿನಲ್ಲಿ ಟಿಪ್ಪು ಸ್ಮರಣೆ ನಡೆಯುತ್ತಿದ್ದು ಇದರ ಹೆಸರು ಬದಲಿಸಬೇಕೆಂದು ಹಿಂದು ಸಂಘಟನೆಗಳು ಆಕ್ಷೇಪ ಎತ್ತಿವೆ.
ಮೇಲುಕೋಟೆ ಚೆಲುವನಾರಾಯಣ ದೇವಸ್ಥಾನಕ್ಕೆ ಮೈಸೂರಿನ ರಾಜನಾಗಿದ್ದ ಟಿಪ್ಪು ಅಭಯ ನೀಡಿದ್ದ ಎಂಬ ನೆಪದಲ್ಲಿ ಆತನ ಹೆಸರಿನಲ್ಲಿ ದೀವಟಿಗೆ ಸಲಾಂ ಎಂದು ಪ್ರತಿನಿತ್ಯ ಪೂಜೆ ನಡೆಯುತ್ತದೆ. ಹಿಂದಿನಿಂದಲೂ ಪಾರಂಪರಿಕವಾಗಿ ನಡೆದು ಬಂದಿದ್ದ ಸಂಧ್ಯಾರತಿಯನ್ನೇ ದೀವಟಿಗೆ ಸಲಾಂ ಎಂದು ಟಿಪ್ಪು ಕಾಲದಲ್ಲಿ ಆತನ ಅಣತಿಯಂತೆ ಬದಲಾವಣೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇದೀಗ ಕೊಲ್ಲೂರಿನಲ್ಲಿ ಸಲಾಂ ಆರತಿ ಹೆಸರು ಬದಲಿಸಬೇಕೆಂಬ ಆಗ್ರಹ ಕೇಳಿಬಂದ ಬೆನ್ನಲ್ಲೇ ಮಂಡ್ಯ ಜಿಲ್ಲೆಯ ಹಿಂದು ಸಂಘಟನೆಗಳ ನಾಯಕರು, ಧಾರ್ಮಿಕ ಪರಿಷತ್ ನಾಯಕರು ಮೇಲುಕೋಟೆಯ ದೀವಟಿಗೆ ಸಲಾಂ ಆರತಿಯನ್ನು ಒಂದೋ ನಿಲ್ಲಿಸಬೇಕು, ಇಲ್ಲವೇ ಅದರ ಹೆಸರು ಬದಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು, ಹೆಸರು ಬದಲಾವಣೆಗೆ ಒತ್ತಾಯಿಸಿದ್ದಾರೆ. ಹಿಂದು ಸಂಪ್ರದಾಯದಲ್ಲಿ ಸಲಾಂ ಹೆಸರಿನ ಆರತಿಗೆ ಅವಕಾಶ ಇಲ್ಲ. ಅನ್ಯಧರ್ಮದ ದೇವರು, ರಾಜನ ಹೆಸರಿನಲ್ಲಿ ಪೂಜೆ ನಡೆಸೋದು ಬೇಡ. ಹಾಗಾಗಿ ದೀವಟಿಗೆ ಸಲಾಂ ಎನ್ನುವ ಪೂಜಾ ಪದ್ಧತಿಯನ್ನು ಬದಲಿಸುವಂತೆ ಒತ್ತಾಯ ಮಾಡಿದ್ದಾರೆ.
Salam Mangalarati ritual at Mandya temple requested to be cancelled after Kollur temple.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm