ಬ್ರೇಕಿಂಗ್ ನ್ಯೂಸ್
28-03-22 07:25 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.28: ಪಾಕಿಸ್ಥಾನದ ರಿಪಬ್ಲಿಕ್ ಡೇ ಹಿನ್ನೆಲೆಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕ್ಕೊಂಡಿದ್ದ ಬಾಗಲಕೋಟ ಮೂಲದ 25 ವರ್ಷದ ಮುಸ್ಲಿಮ್ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ರಸಾ ವಿದ್ಯಾರ್ಥಿನಿಯೂ ಆಗಿರುವ ಬಾಗಲಕೋಟ ಜಿಲ್ಲೆಯ ಮುಧೋಳ್ ನಗರದ ನಿವಾಸಿ ಕುತುಮಾ ಶೇಖ್ ಬಂಧಿತ ವಿದ್ಯಾರ್ಥಿನಿ. ಮಾರ್ಚ್ 23ರ ಪಾಕಿಸ್ಥಾನದ ರಿಪಬ್ಲಿಕ್ ಡೇಯ ದಿನ ಈಕೆ ತನ್ನ ಮೊಬೈಲಿನಲ್ಲಿ ಉರ್ದು ಭಾಷೆಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕ್ಕೊಂಡಿದ್ದಳು. ‘’ಅಲ್ಲಾ ಹರ್ ಮುಲ್ಕ್ ಮೇ ಇತ್ತಿಹಾದ್.. ಅಮನ್, ಸುಕೂನ್, ಅತಾ ಫಾರ್ಮಾ ಮೌಲಾ...’’ ಹೀಗೆಂದು ಪಾಕಿಸ್ಥಾನದ ಪರವಾಗಿ ಬರೆದಿದ್ದಾಳೆಂದು ಪೊಲೀಸ್ ದೂರು ದಾಖಲಾಗಿತ್ತು.
‘’ಓ ಅಲ್ಲಾ.. ಎಲ್ಲ ದೇಶಗಳಿಗೂ ಶಾಂತಿ, ಸೌಹಾರ್ದತೆಯಿಂದ ಇರಲೆಂದು ಆಶೀರ್ವದಿಸು..’’ ಎಂಬುದು ಆಕೆ ಬರೆದಿರುವ ಪದಗಳ ಕನ್ನಡ ಅನುವಾದ ಆಗಿದ್ದು ನಿರ್ದಿಷ್ಟವಾಗಿ ಪಾಕಿಸ್ಥಾನದ ಪದ ಉಲ್ಲೇಖ ಆಗಿರಲಿಲ್ಲ. ಆದರೆ ಈ ಸ್ಟೇಟಸ್ ವೈರಲ್ ಆಗುತ್ತಿದ್ದಂತೆ ಸಂಘಟನೆಯೊಂದರ ಕಾರ್ಯಕರ್ತ ಅರುಣ್ ಕುಮಾರ್ ಭಜಂತ್ರಿ ಎಂಬಾತ ಮುಧೋಳ ಠಾಣೆಗೆ ದೂರು ನೀಡಿದ್ದು ಈ ಸ್ಟೇಟಸ್ ಮೂಲಕ ಸಾಮರಸ್ಯ ಕದಡುವ ಯತ್ನ ಮಾಡಿದ್ದಾಗಿ ದೂರಿದ್ದ. ಯುವತಿ ವಿರುದ್ಧ ಪೊಲೀಸರು ಸೆಕ್ಷನ್ 153 (ಎ) ಮತ್ತು 505 (2) ಅಡಿ ಪ್ರಕರಣ ದಾಖಲಿಸಿದ್ದು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕುತುಮಾ ಶೇಖ್ ಳನ್ನು ಮಾ.24ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಮರುದಿನವೇ ಆಕೆಗೆ ನ್ಯಾಯಾಲಯದ ಮೂಲಕ ಜಾಮೀನು ದೊರಕಿತ್ತು. ಪಾಕಿಸ್ಥಾನದ ರಿಪಬ್ಲಿಡ್ ಡೇ ದಿನವನ್ನು ಆಚರಿಸುವುದು ಆಕೆಯ ಉದ್ದೇಶ ಆಗಿತ್ತು. ಆ ಬಗ್ಗೆ ನಾವು ಕೂಡಲೇ ಸ್ಪಂದಿಸದಿದ್ದರೆ, ಪ್ರತಿಭಟನೆ, ಗಲಭೆಗಳಿಗೆ ಕಾರಣವಾಗುತ್ತಿತ್ತು. ಹಾಗಾಗಿ ಕೂಡಲೇ ಆಕೆಯ ವಿರುದ್ಧ ಕ್ರಮ ಜರುಗಿಸಿದ್ದೆವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
A 25-year-old woman was arrested in Karnataka's Bagalkot district on Monday for allegedly posting a Whatsapp status that wished Pakistan on its Republic Day, according to the superintendent of police. The woman, Kuthma Sheikh, is a Mudhol native and a student at a neighbouring madrasa.According to authorities, she wrote in Urdu on her WhatsApp status on March 23, Pakistan's Republic Day, “Allah Har Mulk me Ittihaad…Aman...Sukoon…Ata Farma Maula." Which translates to "May God bless every nation with peace, unity, and harmony."
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm