ಬ್ರೇಕಿಂಗ್ ನ್ಯೂಸ್
22-12-21 01:08 pm HK Desk news ಕರ್ನಾಟಕ
ಚಿಕ್ಕಬಳ್ಳಾಪುರ, ಡಿ.22 : ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲು, ಬೋಗಪರ್ತಿ, ಪೆರೇಸಂದ್ರ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ. ಬೆಳಗ್ಗೆ ಏಳು ಗಂಟೆ ಸುಮಾರಿಗೆ ಎರಡು ಬಾರಿ ಭೂಕಂಪ ದಾಖಲಾಗಿರುವುದನ್ನು ಭೂಕಂಪ ಮಾಪಕ ಕೇಂದ್ರ ದೃಢಪಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ 13 ಕಿಮೀ ಉತ್ತರಕ್ಕೆ ಭೂಕಂಪದ ಕೇಂದ್ರ ಬಿಂದು ಇರುವುದಾಗಿ ಮತ್ತು ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆ ದಾಖಲಾಗಿರುವ ಬಗ್ಗೆ ಹೇಳಿದೆ. ಬೆಳಗ್ಗೆ ಕಂಪನದ ಅನುಭವ ಆಗುತ್ತಲೇ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಬೆಳಗ್ಗೆ 7ರಿಂದ 7.30ರ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿಗಳಲ್ಲಿ ಏನೋ ಸ್ಫೋಟ ಆಗಿರುವ ಶಬ್ದವೂ ಕೇಳಿಬಂದಿತ್ತು. ಭಾರೀ ಶಬ್ದ ಕೇಳಿದ್ದು, ಜನರಿಗೆ ಕಂಪನದ ಅನುಭವವೂ ಆಗಿದೆ. ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಅದನ್ನಗಾರಹಳ್ಳಿ, ರೆಡ್ಡಿಗೊಲ್ಲವಾರಹಳ್ಳಿ, ಪೆರೇಸಂದ್ರ ಗ್ರಾಮದ ಸುತ್ತಮುತ್ತ ಸ್ಫೋಟದ ಶಬ್ದ ಕೇಳಿಬಂದಿದೆ.
ಈ ರೀತಿ ಶಬ್ದ ಕೇಳಿರುವುದನ್ನು ಸ್ಥಳೀಯ ಕೆಲವರು ನೀರಿಲ್ಲದೆ ಒಣಗಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ಏರ್ ಬ್ಲಾಸ್ಟ್ ಆಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ಸಮಯಗಳಿಂದ ನೀರು ಇಲ್ಲದೆ ಒಣಗಿ ಹೋಗಿದ್ದ ಬೋರ್ ವೆಲ್ ಗಳಲ್ಲಿ ಗಾಳಿ ನಿಂತಿತ್ತು. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆಯಾಗಿದ್ದು, ಅಂತರ್ಜಲ ಹೆಚ್ಚಾಗಿದ್ದರಿಂದ ಜಲ ಮರುಪೂರಣ ಆಗಿ ಏರ್ ಬ್ಲಾಸ್ಟ್ ಆಗಿರುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ. ಈ ರೀತಿಯ ಶಬ್ದ ಹಿಂದೆಯೂ ಕೇಳಿಬಂದಿತ್ತು.
ಆದರೆ ಈ ಬಾರಿ ಇದೇ ಸಂದರ್ಭದಲ್ಲಿ ಭೂಕಂಪ ಆಗಿರುವುದನ್ನೂ ಭೂಗರ್ಭ ಶಾಸ್ತ್ರಜ್ಞರು ದೃಢಪಡಿಸಿದ್ದಾರೆ. ಕಲಬುರಗಿ, ಬೀದರ್ ಭಾಗದ ಕೆಲವೆಡೆಯೂ ಇದೇ ರೀತಿ ಕಂಪನದ ಅನುಭವ ಆಗಿತ್ತು. ಪದೇ ಪದೇ ಭಾರೀ ಸ್ಫೋಟದ ಸದ್ದು ಕೇಳಿದ್ದ ಬಗ್ಗೆ ತಜ್ಞರು ತೆರಳಿ ಅಧ್ಯಯನ ನಡೆಸಿದ್ದರು. ಭೂಕಂಪನ ಅಲ್ಲ ಎನ್ನುವ ವರದಿ ನೀಡಿದ್ದರು. ಆದರೆ, ಈಗ ಚಿಕ್ಕಬಳ್ಳಾಪುರದಲ್ಲಿಯೂ ಭಾರೀ ಮಳೆಯ ಬಳಿಕ ಅದೇ ರೀತಿಯ ಅನುಭವ ಆಗಿರುವುದು ಆತಂಕ ಮೂಡಿಸಿದೆ.
Chikkaballapura district, which is 61 km away from Bengaluru, was hit by two 3.3 magnitude earthquakes on Wednesday morning. The second one happened 5 minutes after the first.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am