ಬ್ರೇಕಿಂಗ್ ನ್ಯೂಸ್
16-12-21 02:45 pm HK Desk news ಕರ್ನಾಟಕ
Photo credits : Headline Karnataka
ಬಾಗಲಕೋಟೆ, ಡಿ.16 : ಪ್ರಶಸ್ತಿಗಳ ರಾಜ, ಬೆಟ್ಟದ ಹುಲಿ ಎಂದೇ ಹೆಸರಾಗಿದ್ದ ಅಭಿಮಾನಿಗಳ ಪಾಲಿನ ನೆಚ್ಚಿನ ಟಗರು ಅನಾರೋಗ್ಯದಿಂದ ಸಾವು ಕಂಡಿದ್ದು ನೂರಾರು ಜನರು ಸೇರಿ ಶವಯಾತ್ರೆ ಮೆರವಣಿಗೆ ನಡೆಸಿದ್ದಾರೆ.
ಆಕರ್ಷಕವಾಗಿದ್ದ ಟಗರನ್ನು ಐದು ಲಕ್ಷ ರೂ. ಕೊಟ್ಟು ಖರೀದಿಸಲಾಗಿತ್ತು. ಮಾಲೀಕ ಅದನ್ನು ಖರೀದಿಸಿ ಮನೆ ಮಗನಂತೆ ನೋಡಿಕೊಂಡಿದ್ದಲ್ಲದೆ ವಿವಿಧ ಕಡೆಗಳಲ್ಲಿ ಸ್ಪರ್ಧೆಗೆ ಕೊಂಡೊಯ್ದು ಜನಮೆಚ್ಚುಗೆ ಪಡೆದಿದ್ದ. ಅನಾರೋಗ್ಯದಿಂದ ಟಗರು ದಿಢೀರ್ ಆಗಿ ಸತ್ತಿದ್ದಕ್ಕೆ ಮಾಲೀಕ ಪಾಂಡು ಗೋಳಾಡಿ ಅತ್ತಿದ್ದಾನೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಪಾಂಡು ಟಗರನ್ನು 7 ವರ್ಷಗಳ ಹಿಂದೆ 5 ಲಕ್ಷ ರೂ. ಕೊಟ್ಟು ಖರೀದಿಸಿದ್ದ. ಪ್ರತಿ ಬಾರಿ ಟಗರಿನ ಕಾಳಗದಲ್ಲಿ ಈ ಬೆಟ್ಟದ ಹುಲಿಯದ್ದೆ ದರ್ಬಾರ್ ಆಗಿತ್ತು. ಜನರು ಪಂಥ ಕಟ್ಟಿ ಗೆದ್ದು ಈ ಟಗರಿನ ಅಭಿಮಾನಿಗಳಾಗಿದ್ದರು. ಮೈಸೂರು ದಸರಾ ಸೇರಿ ರಾಜ್ಯ ಮತ್ತು ಹೊರ ರಾಜ್ಯಗಳ ಟಗರಿನ ಕಾಳಗದಲ್ಲಿ ಬೆಟ್ಟದ ಹುಲಿ ಭಾರೀ ಹೆಸರು ಮಾಡಿತ್ತು.
ಈವರೆಗೆ 80 ಕ್ಕೂ ಅಧಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಟಗರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತನ್ನದೇ ಅಭಿಮಾನಿಗಳನ್ನು ಹೊಂದಿತ್ತು. ಟಗರು ಸತ್ತ ಸುದ್ದಿ ಕೇಳಿ ಕಲಹಳ್ಳಿಗೆ ಬಂದ ನೂರಾರು ಅಭಿಮಾನಿಗಳು ಆಗಮಿಸಿದ್ದು ಕಣ್ಣೀರಿಟ್ಟಿದ್ದಾರೆ.

ಗ್ರಾಮದಲ್ಲಿ ಮೃತಪಟ್ಟ ಟಗರನ್ನು ಶೃಂಗರಿಸಿ ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡಿದ್ದಾರೆ. ಟಗರಿಗೆ ಭಂಡಾರ ಬಳಿದು ದುಃಖದಿಂದ ಮೆರವಣಿಗೆ ನಡೆಸಿದ್ದು ಅಂತಿಮ ಸಂಸ್ಕಾರದಲ್ಲಿ ನೂರಾರು ಜನರು ಭಾಗಿಯಾಗಿದ್ದಾರೆ.

ಗದಗ, ಧಾರವಾಡ, ಮೈಸೂರು, ಗಜೇಂದ್ರಗಡ ಸೇರಿ ವಿವಿಧೆಡೆಯಿಂದ ಟಗರಿನ ಅಂತಿಮ ದರ್ಶನಕ್ಕೆ ಟಗರು ಅಭಿಮಾನಿಗಳು ಬಂದಿದ್ದರು. ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಅಭಿಮಾನಿ ಯುವಕರು ಸೇರಿ ಟಗರಿನ ಕಟೌಟ್ ಕಟ್ಟಿ, ದೀಪ ಬೆಳಗಿ ಶ್ರದ್ದಾಂಜಲಿ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.
Bagalkote Five lakh worth Ram dies fans in tears last rites performed with great honour. Pictures of this has gone viral on social media
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm