ಬ್ರೇಕಿಂಗ್ ನ್ಯೂಸ್
29-08-21 10:29 pm Headline Karnataka News Network ಕರ್ನಾಟಕ
ಬೆಳಗಾವಿ, ಆಗಸ್ಟ್ 29: ಬಿಜೆಪಿಯವ್ರು ಪ್ರಣಾಳಿಕೆಯಲ್ಲಿ ಮೃತಪಟ್ಟವರಿಗೆ ಉಚಿತವಾಗಿ ಶವ ಸಂಸ್ಕಾರ ಮಾಡ್ತಿವಿ ಅಂತಾ ಹೇಳಿದ್ದಾರೆ. ಇದು ಬಿಜೆಪಿಯವರಿಗೆ ನಾಚೀಕೆ ಆಗಬೇಕು. ಇವರು ಜನರನ್ನ ಬದುಕಿಸುತ್ತೇವೆ ಅನ್ನೋದ್ರ ಬದಲು ಜನ ಸಾಯಲಿ ಅಂತಾ ಬಯಸ್ತಿದ್ದಾರೆ.. ಇದ್ಯಾವ ಸೀಮೆಯ ಪ್ರಣಾಳಿಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಡಿಕೆಶಿ, ಬಿಜೆಪಿ ಪಾಲಿಕೆ ಚುನಾವಣೆಗೆ ನೀಡಿರುವ ಪ್ರಣಾಳಿಕೆಯನ್ನೇ ಮುಂದಿಟ್ಟು ವಾಗ್ದಾಳಿ ನಡೆಸಿದ್ದಾರೆ.
ಏನ್ರೀ ಈ ಬಿಜೆಪಿಯವ್ರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ.. ಇವರು ಸತ್ತವರಿಗೆ ಸಂಸ್ಕಾರ ಮಾಡೋದನ್ನೇ ಬಯಸುತ್ತಿದ್ದಾರೆಯೇ ? ಪ್ರಣಾಳಿಕೆಯಲ್ಲೇ ಉಚಿತ ಶವ ಸಂಸ್ಕಾರ ನಡೆಸುವ ಬಗ್ಗೆ ಆಫರ್ ಕೊಟ್ಟಿದ್ದಾರೆ. ಇವರು ಜನರನ್ನು ಬದುಕಿಸೋದ್ರ ಬದಲು ಸಾಯೋದಕ್ಕೆ ಕಾಯ್ತಿದ್ದಾರೆ ಎಂದು ಮೂದಲಿಸಿದರು. ಸರ್ಕಾರ ಇನ್ನೂ ಕೋವಿಡ್ ಪರಿಹಾರವನ್ನೇ ಜನರಿಗೆ ತಲುಪಿಸಿಲ್ಲ. ಯಾವ ಬೀದಿ ವ್ಯಾಪಾರಿ, ನೇಕಾರರು, ಕೂಲಿ ಕಾರ್ಮಿಕರಿಗೆ ಪರಿಹಾರ ಕೊಟ್ಟಿದ್ದೀರಿ ಎಂದು ಡಿಕೆಶಿ ಪ್ರಶ್ನೆ ಮಾಡಿದರು.
ಬಿಜೆಪಿಯವರು ಒಂದೇ ಒಂದು ಪ್ರಣಾಳಿಕೆ ಕಾರ್ಯರೂಪಕ್ಕೆ ತಂದಿಲ್ಲ. ಹೈಸ್ಪೀಡ್ ರೈಲು ಬಿಡ್ತಿವಿ ಅಂದ್ರು. ಆದ್ರೆ ಬಿಜೆಪಿಯವರು ಎಲ್ಲಿ ರೈಲು ಬಿಟ್ಟರೋ ಗೊತ್ತಿಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಬೆಳಗಾವಿಯಲ್ಲಿ ಇಬ್ಬರು ಡಬಲ್ ಎಂಜಿನನಂತೆ ಶಾಸಕರು ಇದ್ದಾರೆ. ನಾನು ನೀವು ಹೋರಾಟ ಮಾಡಿ ಸುವರ್ಣ ಸೌಧ ಕಟ್ಟಿಸಿದ್ದೇವೆ. ಕಳೆದ ಎರಡು ವರ್ಷದಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಮಾಡ್ತಿಲ್ಲ. ಅಧಿವೇಶನ ಮಾಡಿದ್ರೆ ಬೆಳಗಾವಿ ನಗರಕ್ಕೆ ಆರ್ಥಿಕ ಚೈತನ್ಯ ಸಿಗುತ್ತದೆ. ಆದ್ರೆ ಇವರು ಯಾಕೆ ಅಧಿವೇಶನ ಮಾಡಿಲ್ಲ ಅನ್ನೋದನ್ನ ಜನರು ಈ ಬಾರಿ ತೀರ್ಮಾನ ಮಾಡ್ತಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಜನರು ತಮ್ಮ ಶಕ್ತಿ ತೋರಿಸಿದ್ದಾರೆ. ಈ ಬಾರಿ ತಮ್ಮ ಪವರ್ ಏನೆಂದು ತೋರಿಸಲಿದ್ದಾರೆ ಎಂದು ಹೇಳಿದರು.

ಬೆಳಗಾವಿ ನಗರದ ಅಭಿವೃದ್ಧಿ ಆಗಬೇಕು. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಬೆಳಗಾವಿಯಲ್ಲಿ ಕಾರ್ಪೊರೇಟ್ ವ್ಯವಸ್ಥೆ ಅನುಷ್ಠಾನಕ್ಕೆ ಬರಬೇಕು. ಇದರಿಂದ ಉದ್ಯೋಗ, ಉದ್ಯಮದ ಅಭಿವೃದ್ಧಿ ಸಾಧ್ಯವಿದೆ. ಕಾಂಗ್ರೆಸ್ ಪಕ್ಷದಿಂದಲೇ ಬೇಕಾದ್ರೆ ನಾವು ಸರ್ಕಾರಕ್ಕೆ ಅಭಿವೃದ್ಧಿ ನೀಲನಕ್ಷೆ ಕೊಡುತ್ತೇವೆ ಎಂದ ಡಿಕೆಶಿ, ನನ್ನ ಮಿತ್ರ ಸುರೇಶ ಅಂಗಡಿ ಕೊರೊನಾದಿಂದ ಮೃತಪಟ್ಟರು. ಸುರೇಶ ಅಂಗಡಿಯವರ ಮೃತದೇಹವನ್ನ ಕನಿಷ್ಠ ಅವರ ಕುಟುಂಬಕ್ಕೆ ತಂದುಕೊಡಲಿಕ್ಕೂ ಆಗಲಿಲ್ಲ ಇವರಿಗೆ. ಇವರು ಏನು ಸರಕಾರ ನಡೆಸ್ತಿದಾರೆ. ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ, ಔಷಧಿ, ಆಕ್ಸಿಜನ್ ಕೊಡಕ್ಕೂ ಆಗಲಿಲ್ಲ. ಇಂತವರಿಗೆ ಜನಾ ಓಟ್ ಹಾಕಬೇಕಾ ಎಂದು ಕೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶೇ.25 ರಷ್ಟು ಕಮೀಷನ್, ಶೇ.50 ರಷ್ಟು ಕೆಲಸ ಆಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಕಮಿಟಿ ಮಾಡಿ ತನಿಖೆ ಮಾಡಿಸ್ತೀನಿ. ಎಲ್ಲ ಕಡೆಯ ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ವರದಿ ತರೆಸಿಕೊಳ್ಳುತ್ತೇನೆ ಎಂದರು ಡಿಕೆಶಿ.
ಡಿಕೆಶಿಗೆ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಅಂಜಲಿ ನಿಂಬಾಳಕರ, ಮಾಜಿ ಶಾಸಕ ಫಿರೋಜ್ ಸೇಠ್ ಸಾಥ್ ನೀಡಿದ್ರು.
Karnataka Pradesh Congress Committee president D K Shivakumar charged that Karnataka ranks first in corruption that occurred during the Covid-19 pandemic and the large-scale corruption resulted in chief minister B S Yediyurappa losing power.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm