ಬ್ರೇಕಿಂಗ್ ನ್ಯೂಸ್
04-08-21 04:10 pm Headline Karnataka News Network ಕರ್ನಾಟಕ
ಬೆಂಗಳೂರು, ಆಗಸ್ಟ್ 4: ಸಿಎಂ ಆಗುತ್ತಾರೆಂದು ರೇಸಿನಲ್ಲಿದ್ದ ಅರವಿಂದ ಬೆಲ್ಲದ ಹೆಸರು ಸಚಿವ ಸ್ಥಾನದಿಂದಲೂ ತಪ್ಪಿದ್ದು ಬಿಜೆಪಿ ಒಳಗೇ ಮುಜುಗರ ಸೃಷ್ಟಿಸಿದೆ. ಸಿಎಂ ರೇಸಿನಲ್ಲಿದ್ದ ವ್ಯಕ್ತಿಗೆ ಸಚಿವ ಸ್ಥಾನವೂ ತಪ್ಪಿದ್ದು ಹೇಗೆ ಎನ್ನುವ ಬಗ್ಗೆ ಚರ್ಚೆ ಆರಂಭಗೊಂಡಿದೆ. ಮಾಹಿತಿ ಪ್ರಕಾರ, ಅರವಿಂದ ಬೆಲ್ಲದಗೆ ಸಚಿವ ಸ್ಥಾನ ತಪ್ಪಲು ಜಗದೀಶ್ ಶೆಟ್ಟರ್ ಕಾರಣವಂತೆ.
ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗುತ್ತಿದ್ದಂತೆ, ತಾನು ಸಚಿವನಾಗುವುದಿಲ್ಲ ಎಂದು ದೂರ ಉಳಿದಿದ್ದು ಜಗದೀಶ ಶೆಟ್ಟರ್. ಹುಬ್ಬಳ್ಳಿ, ಬೆಳಗಾವಿ ಭಾಗದಲ್ಲಿ ಪ್ರಭಾವಿಯಾಗಿರುವ ಶೆಟ್ಟರ್ ಪ್ರಬಲ ಲಿಂಗಾಯತ ಸಮುದಾಯದ ನಾಯಕ. ಹಿಂದೆ ಬೊಮ್ಮಾಯಿ ಜನತಾ ಪರಿವಾರದಲ್ಲಿದ್ದಾಗ, ಅವರನ್ನು ಸೋಲಿಸಿ ಗೆಲುವು ಕಂಡಿದ್ದ ಶೆಟ್ಟರ್ ಗೆ ಬೊಮ್ಮಾಯಿ ಸಿಎಂ ಆಗಿದ್ದು ಇರಿಸು ಮುರಿಸು ತಂದಿತ್ತು. ತನಿಗಿಂತ ಕಿರಿಯನಾಗಿರುವ ಬೊಮ್ಮಾಯಿ ಅಡಿಯಲ್ಲಿ ಹೇಗೆ ಕೆಲಸ ಮಾಡುವುದು ಎಂಬ ನೋವಿನಲ್ಲಿ ಸಚಿವನಾಗಲ್ಲ ಎಂದಿದ್ದರು.

ಇದೇ ವೇಳೆ, ಹುಬ್ಬಳ್ಳಿಯವರೇ ಆಗಿರುವ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಖಚಿತ ಎನ್ನಲಾಗಿತ್ತು. ತಂದೆ ಚಂದ್ರಕಾಂತ ಬೆಲ್ಲದ ಮಾಜಿ ನಾಯಕ ಮತ್ತು ಆರೆಸ್ಸೆಸ್ ನಲ್ಲಿ ಪ್ರಭಾವ ಹೊಂದಿರುವುದರಿಂದ ಕ್ಲೀನ್ ಇಮೇಜ್ ನೆಲೆಯಲ್ಲಿ ಬೆಲ್ಲದ ಹೆಸರು ಸಚಿವ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ, ಹುಬ್ಬಳ್ಳಿ- ಧಾರವಾಡದ ವ್ಯಕ್ತಿ ಅರವಿಂದ ಬೆಲ್ಲದ ಸಚಿವನಾಗಿ ಈ ಭಾಗದಲ್ಲಿ ಉಸ್ತುವಾರಿಯಾದರೆ, ಅದರ ಪ್ರಭಾವ ತನ್ನ ಮೇಲಾಗುತ್ತದೆ ಎನ್ನುವ ಅಳುಕು ಶೆಟ್ಟರ್ ಗಿತ್ತು. ಹಾಗಾಗಿ ಅರವಿಂದ ಬೆಲ್ಲದ ಸಚಿವನಾಗಬಾರದು. ಬದಲಿಗೆ, ತನ್ನದೇ ಬೆಂಬಲಿಗ ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಹೆಸರನ್ನು ಶೆಟ್ಟರ್ ಸೂಚಿಸಿದ್ದರು.
ಹಾಗಿದ್ದರೂ, ಕ್ಲೀನ್ ಇಮೇಜ್ ಮತ್ತು ಭವಿಷ್ಯದ ನಾಯಕ ಎಂದು ಬಿಂಬಿಸುವ ನಿಟ್ಟಿನಲ್ಲಿ ಆರೆಸ್ಸೆಸ್ ನಾಯಕರು ಅರವಿಂದ ಬೆಲ್ಲದ ಹೆಸರನ್ನು ಬೆಂಬಲಿಸಿದ್ದರು. ಬೆಲ್ಲದ ಸಿಎಂ ಆಗಬೇಕಿತ್ತು. ಕನಿಷ್ಠ ಸಚಿವ ಸ್ಥಾನವೂ ಸಿಗದಿದ್ದರೆ, ಅದು ರಾಜ್ಯದಲ್ಲಿ ಮೈನಸ್ ಸಂದೇಶ ಹೋಗುತ್ತದೆ ಎನ್ನುವ ನೆಲೆಯಲ್ಲಿ ಸಚಿವ ಸ್ಥಾನ ಸಿಗಲೇಬೇಕು ಎನ್ನುವ ಒತ್ತಡವನ್ನು ಆರೆಸ್ಸೆಸ್ ಮಾಡಿತ್ತು. ಆದರೆ, ಆರೆಸ್ಸೆಸ್ ಮಾತು ಕೇಳಿದರೆ, ಅತ್ತ ಜಗದೀಶ ಶೆಟ್ಟರ್ ಅವರನ್ನು ಎದುರು ಹಾಕ್ಕೊಳ್ಳಬೇಕಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿಯಾಗಿರುವ ಶೆಟ್ಟರ್ ಅವರ ಮಾತನ್ನು ಕೇಳುವುದು ಬಿಜೆಪಿಗೆ ಆ ಭಾಗದಲ್ಲಿ ಚುನಾವಣೆ ಗೆಲ್ಲಲು ಅನಿವಾರ್ಯ. ಹಾಗಾಗಿ ಕೊನೆಯ ಕ್ಷಣದಲ್ಲಿ ಶೆಟ್ಟರ್ ಮಾತು ಗೆದ್ದಿತ್ತು. ಅವರು ಸೂಚಿಸಿದ್ದ ಶಂಕರ ಪಾಟೀಲ್ ಮುನೇನಕೊಪ್ಪ ಸಚಿವರಾಗಿದ್ದಾರೆ. ಕೊನೆಯ ಕ್ಷಣದ ವರೆಗೂ ಸಚಿವ ಸ್ಥಾನ ಖಾತ್ರಿಯಾಗಿದ್ದ ಬೆಲ್ಲದ ಹೆಸರು ಪಟ್ಟಿಯಿಂದ ಹಿಂದಕ್ಕೆ ಸರಿದಿದೆ.

ಯಡಿಯೂರಪ್ಪ ವಿರುದ್ಧ ಯೋಗೀಶ್ವರ್ ಜೊತೆ ಸೇರಿ ದೆಹಲಿ ಮಟ್ಟದಲ್ಲಿ ದೂರು ಒಯ್ದಿದ್ದವರಲ್ಲಿ ಅರವಿಂದ ಬೆಲ್ಲದ್ ಕೂಡ ಒಬ್ಬರು. ಸಹಜವಾಗಿಯೇ ತನ್ನ ವಿರುದ್ಧ ಕೆಲಸ ಮಾಡಿದವರು ಸಚಿವರಾಗಬಾರದು ಎಂದು ಹಠ ಹಿಡಿದಿದ್ದ ಯಡಿಯೂರಪ್ಪ ಬೆಲ್ಲದ ಆಯ್ಕೆ ವಿಚಾರದಲ್ಲಿ ತನ್ನ ಮಾತು ನಡೆಯುವಂತೆ ನೋಡಿಕೊಂಡಿದ್ದಾರೆ. ಅದಕ್ಕೆ ದಾಳವಾಗಿದ್ದು ಮಾತ್ರ ಶೆಟ್ಟರ್.
ಲಿಂಗಾಯತ ಸಮುದಾಯದ ಅರವಿಂದ ಬೆಲ್ಲದ್ ಸಚಿವನಾದರೆ, ಹುಬ್ಬಳ್ಳಿ ಭಾಗದಲ್ಲಿ ಪಕ್ಷದಲ್ಲಿ ಗಟ್ಟಿ ಮಾಡಿಕೊಂಡಿರುವ ಪ್ರಭಾವ ಕಡಿಮೆಯಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಾಲಿಗೆ ದೊಡ್ಡ ನಾಯಕ ಶೆಟ್ಟರ್. ಸದ್ಯಕ್ಕೆ ವಯಸ್ಸಿನಲ್ಲಿ ಹಿರಿಯರಾಗಿರುವ ಶೆಟ್ಟರ್ ಹಿಡಿತ ತಪ್ಪಿದರೆ, ಅರವಿಂದ ಬೆಲ್ಲದ ಕೈಮೇಲಾಗುತ್ತದೆ ಎನ್ನುವ ದೂರಾಲೋಚನೆ ಇತ್ತು. ಶಂಕರ ಪಾಟೀಲ್ ಸಚಿವನಾದರೂ, ಶೆಟ್ಟರ್ ಅಡಿಯಲ್ಲೇ ಅಧಿಕಾರ ಕೇಂದ್ರ ಇರುತ್ತದೆ ಎನ್ನುವ ಭಾವನೆ ಅವರಲ್ಲಿತ್ತು.
Hubli Dharwad MLA Arvind Bellad who was in CM race not seen even in the new cabinet
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
01-02-26 02:00 pm
HK News Desk
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
01-02-26 10:29 pm
Mangalore Correspondent
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
01-02-26 03:41 pm
HK News Staffer
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm