ಬ್ರೇಕಿಂಗ್ ನ್ಯೂಸ್
04-06-21 12:14 pm Headline Karnataka News Network ಕರ್ನಾಟಕ
ಬೆಂಗಳೂರು, ಜೂನ್ 4: ಉಡುಪಿ ಜಿಲ್ಲೆಯ ಮಣಿಪಾಲ ಮೂಲದ ಮಣಿಪಾಲ್ ಗ್ರೂಪ್ ಸಮೂಹ ತನ್ನ ಉದ್ಯಮ ಜಾಲವನ್ನು ವಿಸ್ತರಿಸುತ್ತಲೇ ಇದ್ದು ಕೊರೊನಾ ಬಿಕ್ಕಟ್ಟಿನ ನಡುವೆಯೇ ಬೆಂಗಳೂರು ಮೂಲದ ವಿಕ್ರಮ್ ಆಸ್ಪತ್ರೆಯನ್ನು ಬರೋಬ್ಬರಿ 350 ಕೋಟಿ ರೂಪಾಯಿಗೆ ಖರೀದಿಸಿದೆ.
ಉದ್ಯಮಿ ರಂಜನ್ ಪೈ ಮಾಲೀಕತ್ವದ ಮಣಿಪಾಲ್ ಗ್ರೂಪ್ ಕಳೆದ ಏಪ್ರಿಲ್ನಲ್ಲಿ ಕೊಲಂಬಿಯಾ ಏಷ್ಯಾದ ಭಾರತೀಯ ವಿಭಾಗವನ್ನು 2,100 ಕೋಟಿ ರೂ.ಗೆ ಖರೀದಿಸಿ ಹುಬ್ಬೇರಿಸಿತ್ತು. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಆಸ್ಪತ್ರೆಯನ್ನು ಖರೀದಿಸಿದ್ದು ಒಂದೇ ವರ್ಷದಲ್ಲಿ ಮಣಿಪಾಲ್ ಆಸ್ಪತ್ರೆಯಿಂದ ಎರಡನೇ ಡೀಲ್ ನಡೆದಿದೆ. ಇದರೊಂದಿಗೆ ಅಪೊಲೊ ನಂತರ ದೇಶದ ಎರಡನೇ ಅತಿ ದೊಡ್ಡ ಆಸ್ಪತ್ರೆ ಸಮೂಹವಾಗಿ ಮಣಿಪಾಲ್ ಗ್ರೂಪ್ ಸಮೂಹ ಹೊರಹೊಮ್ಮಿದೆ.
ಈ ಡೀಲ್ ಬಳಿಕ ವಿಕ್ರಮ್ ಆಸ್ಪತ್ರೆಯ ಹೆಸರು ಮಣಿಪಾಲ್ ಹಾಸ್ಪಿಟಲ್ ಎಂದು ಬದಲಾಗಲಿದೆ. ಇದರೊಂದಿಗೆ ರಾಜಧಾನಿ ಬೆಂಗಳೂರು ಒಂದರಲ್ಲೇ ಮಣಿಪಾಲ್ ಗ್ರೂಪ್ನ ಆಸ್ಪತ್ರೆಗಳ ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ. (4 ಮಣಿಪಾಲ್ ಹಾಸ್ಪಿಟಲ್ಸ್, 5 ಕೊಲಂಬಿಯಾ ಏಷ್ಯಾ ಹಾಸ್ಪಿಟಲ್, ಒಂದು ವಿಕ್ರಮ್ ಆಸ್ಪತ್ರೆ).

ಇದೇ ವೇಳೆ, ಮಣಿಪಾಲ್ ಗ್ರೂಪ್ ಎರಡು ಕಡೆ ಗ್ರೀನ್ಫೀಲ್ಡ್ ಆಸ್ಪತ್ರೆಗಳನ್ನು ನಿರ್ಮಿಸುತ್ತಿದ್ದು, ಮುಂದಿನ 24 ತಿಂಗಳುಗಳಲ್ಲಿ ಮುಕ್ತಾಯವಾಗುವ ನಿರೀಕ್ಷೆಯಿದೆ. ಇದರಿಂದ ನಮ್ಮ ನೆಟ್ವರ್ಕ್ 12 ಆಸ್ಪತ್ರೆಗಳಿಗೆ ವಿಸ್ತರಣೆಯಾಗಲಿದ್ದು, 2,300 ಬೆಡ್ ಲಭ್ಯವಾಗಲಿದೆ ಎಂದು ಎಂದು ಮಣಿಪಾಲ್ ಎಜ್ಯುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ನ ಅಧ್ಯಕ್ಷ ರಂಜನ್ ಪೈ ತಿಳಿಸಿದ್ದಾರೆ.
ವಿಕ್ರಮ್ ಮತ್ತು ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ ಖರೀದಿಯ ನಂತರ ದೇಶದಲ್ಲಿ ಮಣಿಪಾಲ್ ಗ್ರೂಪ್ನ ಆಸ್ಪತ್ರೆಗಳ ಸಂಖ್ಯೆ 27ಕ್ಕೆ ಏರಿಕೆಯಾಗಲಿದೆ. 14 ನಗರಗಳಲ್ಲಿ ಮಣಿಪಾಲ್ ಆಸ್ಪತ್ರೆಗಳಿದ್ದು, 7,300 ಬೆಡ್ಗಳನ್ನು ಹೊಂದಿವೆ. 4,000 ವೈದ್ಯರು ಹಾಗೂ 11,000 ಸಿಬ್ಬಂದಿಗಳು ಆಸ್ಪತ್ರೆಗಳ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ ಅತೀ ದೊಡ್ಡ ಆಸ್ಪತ್ರೆ ಸಮೂಹ ಅಪೋಲೊ ಬಳಿಯಲ್ಲಿ 70 ಆಸ್ಪತ್ರೆಗಳಿವೆ.
Manipal Hospitals, the second-largest hospital chain in India, entered into a definitive agreement with private equity firm Multiples to acquire a 100% stake in Bengaluru-based multi-specialty hospital Vikram Hospital for consideration of ₹350 crores.
06-11-25 03:06 pm
Bangalore Correspondent
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm