ಬ್ರೇಕಿಂಗ್ ನ್ಯೂಸ್
11-02-26 11:02 pm HK News Desk ಕರ್ನಾಟಕ
ತುಮಕೂರು, ಫೆ.12: ಲಕ್ಷಾಂತರ ರೂಪಾಯಿ ಮೌಲ್ಯದ ವಾಹನ, ಇನ್ನಾವುದೇ ವಸ್ತುಗಳನ್ನು ಖರೀದಿಸುವಾಗ ಹತ್ತಾರು ಬಾರಿ ಯೋಚನೆ ಮಾಡ್ತಾರೆ. ಖರೀದಿಸಿದ ವಾಹನ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಹಾಳಾದರೆ ಅದೆಷ್ಟು ಬೇಜಾರಾಗುತ್ತೆ. 52 ಲಕ್ಷ ರೂಪಾಯಿ ಮೌಲ್ಯದ ‘ಹಿಟಾಚಿ 140’ ಯಂತ್ರವನ್ನು ಖರೀದಿಸಿದ ಐದು ತಿಂಗಳಲ್ಲೇ ಗಂಭೀರ ದೋಷ ಕಾಣಿಸಿಕೊಂಡಿದ್ದು ಇದರಿಂದ ತೀವ್ರ ಚಿಂತೆಗೀಡಾದ ಗ್ರಾಹಕ ಹಿಟಾಚಿಯನ್ನೇ ಶೋರೂಮ್ ಎದುರಿಟ್ಟು ಪ್ರತಿಭಟನೆ ನಡೆಸಿದ್ದಾನೆ.
ಗುಬ್ಬಿ ಮೂಲದ ಗಿರೀಶ್ ಎಂಬವರು ತುಮಕೂರಿನ ಅಂತರಸನಹಳ್ಳಿಯಲ್ಲಿ 7 ಲಕ್ಷ ರೂ. ಡೌನ್ ಪೇಮೆಂಟ್ ಮಾಡಿ 52 ಲಕ್ಷ ಮೌಲ್ಯದ ‘ಹಿಟಾಚಿ 140’ ಯಂತ್ರವನ್ನು ಖರೀದಿಸಿದ್ದರು. ಇದಕ್ಕೆ ಪ್ರತಿ ತಿಂಗಳು 1.15 ಲಕ್ಷ ರೂ. ಇಎಂಐ ಪಾವತಿಸುತ್ತಿದ್ದರು. 7,000 ಗಂಟೆಗಳ ವಾರಂಟಿ ಇರುವುದಾಗಿ ಕಂಪನಿ ತಿಳಿಸಿದ್ದರೂ ಖರೀದಿಸಿದ 480 ಗಂಟೆಗಳ ಬಳಕೆಯಲ್ಲೇ ಯಂತ್ರ ತಾಂತ್ರಿಕ ದೋಷಕ್ಕೀಡಾಗಿ ಸ್ಥಗಿತಗೊಂಡಿದೆ ಎಂದು ಗಿರೀಶ್ ಆರೋಪಿಸಿದ್ದಾರೆ.
ಇದಲ್ಲದೆ, ಯಂತ್ರವು ನಿರೀಕ್ಷೆಗಿಂತ ಹೆಚ್ಚು ಡೀಸೆಲ್ ಖರ್ಚು ಮಾಡುತ್ತಿರುವುದಾಗಿ, ಕಾರ್ಯಕ್ಷಮತೆಯೂ ಕುಸಿದಿರುವುದಾಗಿ ಗಿರೀಶ್ ಹೇಳಿದ್ದಾರೆ. ಕಳೆದ ಎರಡು ತಿಂಗಳಿನಿಂದ ಶೋರೂಂ ಮತ್ತು ಕಂಪನಿಯನ್ನು ಹಲವು ಬಾರಿ ಸಂಪರ್ಕಿಸಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ಗಿರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೋರೂಂ ಸಿಬ್ಬಂದಿಯಿಂದ ಸರಿಯಾದ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಶೋರೂಂ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಶೋರೂಂಗೆ ಬೀಗ ಹಾಕಿದ್ದಾರೆ. ಅಲ್ಲದೆ, ಹಿಟಾಚಿ ಯಂತ್ರವನ್ನೇ ಶೋರೂಂ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರ.
ಮೂರು ದಿನಗಳಿಂದ ಶೋರೂಂ ಎದುರು ಶಾಮಿಯಾನ ಹಾಕಿ ಧರಣಿ ನಡೆಸುತ್ತಿರುವ ಗಿರೀಶ್, “ಯಂತ್ರ ಸರಿಪಡಿಸಬೇಕು, ಇಲ್ಲವೇ ನನ್ನ ಹಣ ವಾಪಸ್ ಕೊಡಬೇಕು. ಸಾಲ ಮಾಡಿ ಯಂತ್ರ ಖರೀದಿಸಿದ್ದೇನೆ. ಕಂಪನಿ ಹೇಳುವುದೊಂದು, ಮಾಡುವುದೊಂದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
A customer in Tumakuru staged a protest after a ₹52 lakh Hitachi 140 machine developed major technical issues within five months of purchase. Alleging poor response from the company despite warranty coverage, the buyer locked the showroom and parked the faulty machine at its entrance, demanding repair or refund.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 02:55 pm
HK News Staffer
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
25-08-26 07:27 pm
HK News Staffer
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm