ಬ್ರೇಕಿಂಗ್ ನ್ಯೂಸ್
10-06-25 06:49 pm HK News Desk ಕರ್ನಾಟಕ
ಕಾರವಾರ, ಜೂ.10 : ಒಳ್ಳು ಒನಕೆಯ ನುಂಗಿ, ಕಲ್ಲು ಗೂಟವ ನುಂಗಿ.. ಕೋಡಗನ ಕೋಳಿ ನುಂಗಿತ್ತಾ... ಅನ್ನುವ ತತ್ವಪದವನ್ನು ನೀವೆಲ್ಲ ಕೇಳಿರುತ್ತೀರಿ. ಅದೇ ರೀತಿ ಇಲ್ಲಿ ಕೋಡಗನ ಬದಲು ಹಾವು ವಿಚಿತ್ರವಾಗಿ ವರ್ತಿಸಿ, ಈ ಪದ್ಯ ನೆನಪಿಸಿದೆ. ಯಾಕಂದ್ರೆ, ಇಲ್ಲೊಂದು ನಾಗರಹಾವು ಹರಿತ ಚಾಕುವನ್ನು ನುಂಗಿ ಒದ್ದಾಡಿ ಸುದ್ದಿಯಾಗಿದೆ.
ಇಲಿ, ಕೋಳಿ, ಮೊಟ್ಟೆ, ಕಪ್ಪೆಯನ್ನು ಹಾವುಗಳು ನುಂಗುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ತನ್ನ ಆಹಾರ ಅನ್ಕೊಂಡು ನಾಗರ ಹಾವು ಚಾಕುವನ್ನೇ ನುಂಗಿದ್ದು ಆನಂತರ ವಿಲ ವಿಲ ಒದ್ದಾಡಿದ ಪ್ರಸಂಗ ಕುಮಟಾದಲ್ಲಿ ನಡೆದಿದೆ.


ಕುಮಟಾ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕರ ಅಡುಗೆ ಮನೆಯಲ್ಲಿದ್ದ ಚಾಕು ಮನೆಯ ಹೊರಗಡೆ ಬಿದ್ದಿತ್ತು. ಆದರೆ ಅಲ್ಲಿ ಹಾವು ಓಡಾಡುತ್ತಿರುವುದನ್ನು ಕಂಡ ಮನೆಯವರು ಸ್ಥಳಕ್ಕೆ ಹೋಗಲು ಹೆದರಿದ್ದರು. ಕೆಲ ಹೊತ್ತಲ್ಲಿ ಅಲ್ಲಿದ್ದ ಚಾಕು ಕಣ್ಮರೆಯಾಗಿತ್ತು. ಹಾವು ಮಾತ್ರ ಏನೋ ತಿಂದು ಮಲಗಿರುವಂತೆ ಬಿದ್ದುಕೊಂಡಿತ್ತು. ಹಾವು ಅಲ್ಲಿಂದ ಕದಲದೇ ಇದ್ದುದರಿಂದ ಮತ್ತು ಚಾಕು ಕೂಡ ಇಲ್ಲದಿರುವುದನ್ನು ನೋಡಿ ಅನುಮಾನದಲ್ಲಿ ಉರಗ ತಜ್ಞ ಪವನ್ ನಾಯ್ಕ ಅವರನ್ನು ಕರೆಸಿದ್ದರು.
ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ಹಾವು ಚಾಕು ನುಂಗಿ ಒದ್ದಾಡುತ್ತಿರುವುದು ಖಚಿತವಾಗಿದೆ. ಚಾಕುವಿನ ತುದಿ ಗಂಟಲಿನಲ್ಲಿ ಸಿಲುಕಿದ್ದು, ಅದನ್ನು ಹೊರಹಾಕಲು ಹಾವು ಒಡ್ಡಾಡುತ್ತಿರುವುದು ಕಂಡುಬಂದಿದೆ. ಚಾಕುವನ್ನು ಹೊರತೆಗೆಯದಿದ್ದರೆ ಹಾವು ಸಾಯುತ್ತದೆ ಎಂದು ಪವನ್ ಕೂಡಲೇ ಅದನ್ನು ಪಶು ಆಸ್ಪತ್ರೆಯ ಸಹಾಯಕ ಅದ್ವೈತ ಭಟ್ ಅವರ ಮನೆಗೆ ಕೊಂಡೊಯ್ದು ಅರ್ಧ ಗಂಟೆಗೂ ಆಪರೇಶನ್ ಮಾಡಿಸಿದ್ದಾರೆ. ಕೊನೆಗೆ, ಚಾಕುವನ್ನು ಹಾವಿನ ಹೊಟ್ಟೆಯಿಂದ ಹೊರ ತೆಗೆದು ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
Kumta Snake Swallows Knife in Bizarre Incident at Kumta, Rescued After Emergency Operation.
20-06-26 06:40 pm
HK News Staffer
ಬಿಡದಿ ಟೌನ್ ಶಿಪ್ ನೆಪದಲ್ಲಿ 750 ರೈತ ಕುಟುಂಬಗಳು ಬೀ...
20-06-26 01:33 pm
ಪರಿಷತ್ತಿಗೆ ಅಡ್ಡ ಮತದಾನ ಮಾಡ್ತಾರೆಂದು ಮೊದಲೇ ಗೊತ್ತ...
19-06-26 04:18 pm
ರೈ ಅವರೇ ಧನ ಸಹಾಯ ಮಾಡಿ ಬುರುಡೆ ಗ್ಯಾಂಗ್ ನಡೆಸುತ್ತ...
18-06-26 09:57 pm
ಪರಿಷತ್ ಚುನಾವಣೆ; ಮೈತ್ರಿ ಪಕ್ಷಕ್ಕೆ ತೀವ್ರ ಮುಖಭಂಗ,...
18-06-26 07:15 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
20-06-26 04:21 pm
HK News Staffer
ಕರಾವಳಿಯಲ್ಲೇ ಕ್ಯಾಬಿನೆಟ್ ಸಭೆ ; ಪ್ರವಾಸೋದ್ಯಮ ಅಭಿ...
19-06-26 09:05 pm
ಬೆಂಗಳೂರು -ಮಂಗಳೂರು 5 ಗಂಟೆ ಪ್ರಯಾಣದ ಕನಸಿಗೆ ಬ್ರೇಕ...
19-06-26 07:48 pm
ಬಂಗ್ಲೆಗುಡ್ಡೆ ಅಸ್ಥಿಪಂಜರಗಳ ಗುರುತು ಪತ್ತೆಗಿಳಿದ ಎಸ...
19-06-26 03:31 pm
Mangalore police suspend, Bajpe: ಅಸ್ಸಾಂ ಕಾರ್ಮ...
19-06-26 12:24 pm
20-06-26 09:13 pm
HK News Staffer
ಸೂಲಿಬೆಲೆಯಲ್ಲಿ ಭೀಕರ ಅಪಘಾತ ; ಬಿಎಂಟಿಸಿ ಬಸ್ ಡ್ರೈ...
20-06-26 04:43 pm
ಬೆಂಗಳೂರಿನಲ್ಲಿ ಕಳ್ಳ ಪೊಲೀಸ್ ; ಕೇರಳದ ಉದ್ಯಮಿಗಳನ್ನ...
19-06-26 09:07 pm
ಮೊಬೈಲ್ ಕದ್ದು ಓಡುತ್ತಿದ್ದಾಗಲೇ ಕುಸಿದು ಬಿದ್ದು ಕಳ್...
19-06-26 08:30 pm
ಕೋಡಿ ಬೀಚ್ನಲ್ಲಿ ಬೆಂಗಳೂರು ಮೂಲದ ಯುವಕ ಸಮುದ್ರ ಪಾಲ...
19-06-26 05:47 pm