ಬ್ರೇಕಿಂಗ್ ನ್ಯೂಸ್
01-06-25 11:50 am Bangalore Correspondent ಕರ್ನಾಟಕ
ಬೆಂಗಳೂರು, ಜೂನ್.1: ಮಂಡ್ಯ ಪೊಲೀಸರ ಕರ್ತವ್ಯ ಲೋಪದಿಂದ ಮಗುವೊಂದು ಮೃತಪಟ್ಟ ಬೆನ್ನಲ್ಲೇ ಎಚ್ಚತ್ತಿರುವ ಪೊಲೀಸ್ ಇಲಾಖೆ ತಪಾಸಣೆ ನೆಪದಲ್ಲಿ ಸಕಾರಣವಿಲ್ಲದೆ ವಾಹನಗಳನ್ನು ಏಕಾಏಕಿ ಅಡ್ಡಗಟ್ಟಿ ನಿಲ್ಲಿಸಬಾರದು ಎಂದು ಆದೇಶ ಹೊರಡಿಸಿದೆ.
ಈ ಕುರಿತು ಶನಿವಾರ ರಾಜ್ಯದ ಎಲ್ಲ ಜಿಲ್ಲೆಗಳ ಪೊಲೀಸರಿಗೆ ಸುತ್ತೋಲೆ ಹೊರಡಿಸಿರುವ ಡಿಜಿಪಿ ಡಾ.ಎಂ.ಎ ಸಲೀಂ, ವಾಹನಗಳ ತಪಾಸಣೆ ಸಂಬಂಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಆದೇಶಿಸಿದ್ದಾರೆ.
ಹೆದ್ದಾರಿಗಳಲ್ಲಿ ಜಿಗ್ ಜಾಗ್ ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ತಡೆಯಬಾರದು. ರಸ್ತೆಯಲ್ಲಿ ಏಕಾಏಕಿ ಅಡ್ಡಬಂದು ವಾಹನಗಳನ್ನು ನಿಲ್ಲಿಸಬಾರದು. ವಾಹನಗಳನ್ನು ನಿಲ್ಲಿಸಿ ಕೀ ಕಸಿದು ಅಡ್ಡಿ ಪಡಿಸಬಾರದು. ಬೈಕ್ ಹಿಂಬದಿ ಕುಳಿತಿರುವ ಸವಾರನನ್ನು ಹಿಡಿದೆಳೆಯುವುದು ಮಾಡುವಂತಿಲ್ಲ. ಪ್ರಮುಖವಾಗಿ ಇಂಟಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಜಾರಿಯಿರುವ ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ತಂತ್ರಜ್ಞಾನ ಆಧರಿತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲು ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ.
ರಸ್ತೆಗಳಲ್ಲಿ ಅತಿ ವೇಗವಾಗಿ ಚಲಾಯಿಸುವ ವಾಹನಗಳನ್ನು ಬೆನ್ನಟ್ಟುವ ಬದಲಿಗೆ ವಾಹನಗಳ ಸಂಖ್ಯೆ ಗುರುತು ಮಾಡಿಕೊಂಡು ಜಿಲ್ಲಾ ಸರಹದ್ದುಗಳ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ರವಾನಿಸಿ ಪ್ರಕರಣ ದಾಖಲಿಸಬೇಕು. ಸಂಚಾರ ನಿಯಮ ಉಲ್ಲಂಘನೆ ಸಲುವಾಗಿ ವಾಹನಗಳನ್ನು ತಪಾಸಣೆ ಮಾಡುವಾಗ ಪ್ರತಿಫಲನ ಜಾಕೆಟ್ ಗಳನ್ನು ಧರಿಸಬೇಕು. ಸಂಜೆ ವೇಳೆ ಎಲ್ ಇಡಿ ಬಟನ್ ಗಳನ್ನು ಉಪಯೋಗಿಸಬೇಕು. ಕರ್ತವ್ಯ ನಿರ್ವಹಣೆ ವೇಳೆ ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಿರಬೇಕು ಎಂದು ನಿರ್ದೇಶನ ನೀಡಲಾಗಿದೆ.
Director General and Inspector General of Police (DG&IGP) M A Saleem on Saturday issued new guidelines to the traffic policemen in the state.
02-06-25 10:43 pm
Bangalore Correspondent
Shivamogga Airport, Training: ಶಿವಮೊಗ್ಗ ವಿಮಾನ...
01-06-25 10:08 pm
Tobacco Ban, Karnataka: ಸಾರ್ವಜನಿಕ ಸ್ಥಳಗಳಲ್ಲಿ...
01-06-25 09:37 pm
ಎಚ್ಎಂಟಿ ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ;...
01-06-25 08:33 pm
Karnataka Traffic Police New Rules: ಸಕಾರಣವಿಲ್...
01-06-25 11:50 am
01-06-25 12:35 pm
HK News Desk
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
02-06-25 10:59 pm
Mangalore Correspondent
ಜೇನುಗೂಡಿಗೆ ಕಲ್ಲು ಹೊಡೆಯಬೇಡಿ, ಸರಕಾರವೇ ಸಮಾಜದ ಸ್ವ...
02-06-25 10:54 pm
ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡುತ್ತಿರುವುದರ ಹಿಂದ...
02-06-25 10:49 pm
ಹಿಂದುತ್ವ ಹೋರಾಟಕ್ಕೆ ಖಾಕಿ ಬಿಸಿ! ಮಹೇಶ್ ಶೆಟ್ಟಿ ತಿ...
02-06-25 09:08 pm
Mangalore, Dr Kalladka Prabhakar Bhat, FIR: ಸ...
02-06-25 12:51 pm
02-06-25 04:01 pm
Mangalore Correspondent
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm
Belagavi Rape, Arrest, Crime: ಬೆಳಗಾವಿಯಲ್ಲಿ ಮತ...
01-06-25 07:56 pm
Bantwal Crime, Mangalore, Stone Petling: ಮುಸ್...
31-05-25 10:47 pm
Mangalore crime, Threat: ಲಿಸ್ಟ್ ರೆಡಿ ಮಾಡಿದ್ದೇ...
29-05-25 11:04 pm