ಬ್ರೇಕಿಂಗ್ ನ್ಯೂಸ್
20-03-25 10:48 pm Bangalore Correspondent ಕರ್ನಾಟಕ
ಬೆಂಗಳೂರು, ಮಾ 20: ರಾಜ್ಯದಲ್ಲಿ ಇದೀಗ ರಾಜಕಾರಣಿಗಳ ಹನಿಟ್ರ್ಯಾಪ್ ಸದ್ದು. ಅದರಲ್ಲೂ ಸಹಕಾರಿ ಸಚಿವ ಕೆ ಎನ್ ರಾಜಣ್ಣ ಹಾಗೂ ಅವರ ಪುತ್ರ ವಿಧಾನಪರಿಷತ್ ಸದಸ್ಯ ರಾಜೇಂದ್ರ ವಿರುದ್ದ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ಸ್ವತಃ ಈ ವಿಚಾರವನ್ನು ರಾಜಣ್ಣ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇನ್ನು ಈ ಪ್ರಯತ್ನ ಹೇಗೆ ನಡೆದಿತ್ತು ಎಂಬ ವಿಚಾರನ್ನು ರಾಜಣ್ಣ ಅವರ ಮಗ ರಾಜೇಂದ್ರ ತೆರೆದಿಟ್ಟಿದ್ದಾರೆ.
ವಿಡಿಯೋ ಕಾಲ್ ಮೂಲಕ ಟ್ರ್ಯಾಪ್ ಪ್ರಯತ್ನ!
ಕೆ ಎನ್ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರಿಗೆ ಪದೇ ಪದೇ ವಿಡಿಯೋ ಕರೆಗಳು ಬರುತ್ತಿದ್ದವು. ವಿಡಿಯೋ ಕಾಲ್ ಮೂಲಕ ಮಾತನಾಡಿ ಖೆಡ್ಡಾಗೆ ದೂಡುವ ಪ್ರಯತ್ನದ ಭಾಗ ಇದಾಗಿತ್ತು. ಸ್ವತಃ ಈ ವಿಚಾರವನ್ನು ರಾಜೇಂದ್ರ ಅವರು ಹೇಳಿಕೊಂಡಿದ್ದಾರೆ.
ಯಾವಾಗ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರವಾಗಿ ಸ್ವತಃ ರಾಜಣ್ಣ ಹೇಳಿಕೆ ನೀಡಿದರೂ, ಇದರ ಬೆನ್ನಲ್ಲೇ ರಾಜೇಂದ್ರ ಹನಿಟ್ರ್ಯಾಪ್ ಗೆ ಹೇಗೆ ಪ್ರಯತ್ನ ನಡೆಸಲಾಯಿತು ಎಂಬುವುದನ್ನೂ ವಿವರಿಸಿದ್ದಾರೆ. ಫೋನ್ ಮೂಲಕ ಹನಿಟ್ರ್ಯಾಪ್ಗೆ ಪ್ರಯತ್ನ ನಡೆಸಲಾಗಿದೆ. ಆದರೆ ಅದು ಯಶಸ್ವಿಯಾಗಲಿಲ್ಲ ಎಂದಿದ್ದಾರೆ.
ತನಿಖೆ ಆಗಲಿ, ಅನುಮಾನ ಇಲ್ಲ ಹನಿಟ್ರ್ಯಾಪ್ ಯಾರು ಮಾಡಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ಆದರೆ ನಮಗೆ ಯಾರ ಮೇಲೆ ಅನುಮಾನ ಇಲ್ಲ. ಸದನದಲ್ಲಿ ಚರ್ಚೆ ಆಗಿದೆ. ಇದರ ಹಿಂದೆ ಯಾರು ಇದ್ದಾರೆ ಎಂದು ಗೊತ್ತಾಗಲಿ. ಈ ಹಿಂದೆ ಯಾರ ವಿರುದ್ಧ ಹನಿಟ್ಯ್ರಾಪ್ ನಡೆದಿದೆ, ಯಾರು ಮಾಡಿದ್ದಾರೆ ಎಂಬುವುದು ಬಹಿರಂಗವಾಗಲಿ ಎಂದರು.
ಹೈಕಮಾಂಡ್ಗೆ ದೂರು ;
ಹನಿಟ್ರ್ಯಾಪ್ ಪ್ರಯತ್ನ ಮಾಡಿರುವ ಬಗ್ಗೆ ಹೈಕಮಾಂಡ್ಗೆ ದೂರು ನೀಡುತ್ತೇವೆ. ಅಷ್ಟೇ ಅಲ್ಲದೆ, ಸಿಎಂ ಗಮನಕ್ಕೂ ತರುತ್ತೇವೆ. ನಮ್ಮನ್ನು ಮುಗಿಸೋಕೆ ಆಗಲ್ಲ. ಕೆಟ್ಟ ಹೆಸರು ತರಲು ಪ್ರಯತ್ನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Karnataka Minister Rajanna's Son Reveals Six Month Honey Trap Attempt Against Him. Karnataka Home Minister Dr G Parameshwara in the Assembly on Thursday announced that he will order a high-level probe into the alleged honey trap attempt being done on his cabinet colleague and cooperation Minister K N Rajanna.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am