ಬ್ರೇಕಿಂಗ್ ನ್ಯೂಸ್
09-03-25 09:51 pm HK News Desk ಕರ್ನಾಟಕ
ಚಿತ್ರದುರ್ಗ, ಮಾ.9 : ಜಗತ್ತು ಹಲವು ರೀತಿಯ ವಿಸ್ಮಯಗಳಿಗೆ ಸಾಕ್ಷಿಯಾಗಿದ್ದಿದೆ. ಪ್ರತಿ ಬಾರಿಯೂ ಜನರೂ ಅಷ್ಟೇ ಅಚ್ಚರಿ ಪಟ್ಟುಕೊಂಡದ್ದೂ ಇದೆ. ಕರು ಹಾಕಿದ ಕೂಡಲೇ ಹಸು ಹಾಲು ನೀಡುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಇಲ್ಲೊಂದು ಕರು ಜನಿಸಿದ ಮೂರೇ ದಿನದಲ್ಲಿ ತನ್ನ ಕೆಚ್ಚಲಿನಿಂದ ಹಾಲು ಇಳಿಸಿದೆ. ಹಾಲು ಕುಡಿಯುವುದಕ್ಕೇ ಪರದಾಡಬೇಕಾದ ಹೊತ್ತಿನಲ್ಲಿ ರೈತ ಹಾಲು ಕರೆಯುವಾಗ ಸ್ವತಃ ಹಾಲು ಇಳಿಸಿ ಜನರನ್ನು ಅಚ್ಚರಿಗೊಳಿಸಿದೆ.
ಹೀಗಾಗಿ, ಇದೇನೋ ಪವಾಡ ಘಟಿಸಿದೆ ಎಂದು ಸ್ಥಳೀಯರು ಕರುವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದ್ದಾರೆ. ಇದೇ ವೇಳೆ, ಈ ವಿಶಿಷ್ಟ ಕರುವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ. ಚಿತ್ರದುರ್ಗ ತಾಲೂಕಿನ ಅನ್ನೇಹಾಳ ಗ್ರಾಮದಲ್ಲಿ ಇಂಥದ್ದೊಂದು ಪವಾಡ ನಡೆದಿದ್ದು ಅಚ್ಚರಿ ಸೃಷ್ಟಿಸಿದೆ. ಅನ್ನೇಹಾಳ ಗ್ರಾಮದ ನಿರಂಜನ ಮೂರ್ತಿ ಎಂಬವರ ಮನೆಯಲ್ಲಿ ಡೈರಿ ಹಸು ಮರಿ ಹಾಕಿದ್ದು ಆ ಕರು ಜನಿಸಿದ ಮೂರೇ ದಿನಕ್ಕೆ ಹಾಲು ಕೊಡಲು ಪ್ರಾರಂಭಿಸಿದೆ. ಕರುವಿನ ಕೆಚ್ಚಲಿನಿಂದ ಹಾಲು ಸುರಿಯುತ್ತಿದ್ದುದನ್ನ ಕಂಡ ನಿರಂಜನ ಮೂರ್ತಿ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ತಾಯಿ ಹಸುವಿನ ಹಾಲು ಕುಡಿದು ಸುತ್ತಾಡಿಕೊಂಡಿರಬೇಕಾದ ಕರು 31 ದಿನಗಳಿಂದ ಸ್ವತಃ ಹಾಲು ಕೊಡ್ತಿರೋದು ಅಚ್ಚರಿಗೆ ಕಾರಣವಾಗಿದೆ.




ನಿರಂಜನ ಮೂರ್ತಿ 6 ತಿಂಗಳ ಹಿಂದೆ ಹಸು ಖರೀದಿಸಿದ್ದರು. ಈಗಾಗಲೇ ಆ ಹಸು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಆದ್ರೆ ಆ ಎರಡೂ ಹೆಣ್ಣು ಕರುಗಳು ಸಹಜವಾಗಿದ್ದವು. ಆದ್ರೆ ಈ ಮೂರನೇಯದ್ದು ಮಾತ್ರ ಕಾಮಧೇನುವಿನಂತೆ ಹುಟ್ಟಿದ ಮೂರೇ ದಿನಕ್ಕೆ ಹಾಲು ನೀಡುತ್ತಿದೆ. ದಿನಕ್ಕೆ ಅರ್ಧ ಲೀಟರ್ಗೂ ಹೆಚ್ಚು ಹಾಲು ಕರೆಯುವ ಕರುವನ್ನು ಗ್ರಾಮಸ್ಥರು ಕಾಮಧೇನು ಅಂತ ಪೂಜೆ ಮಾಡುತ್ತಿದ್ದಾರೆ.
ಹಸು ಗರ್ಭ ಧರಿಸಿ ಕರು ಹಾಕಿದರೆ ಮಾತ್ರ ಹಾಲು ನೀಡುತ್ತವೆ. ಅದರಲ್ಲೂ ಕರುವನ್ನೇ ಮೊದಲು ಜಗಿಯುವಂತೆ ಮಾಡಿ ಕೆಚ್ಚಲಿನಲ್ಲಿ ಹಾಲು ಇಳಿಸಬೇಕಾದ ಪದ್ಧತಿ ಇದೆ. ಈಗೆಲ್ಲ ಹೈಬ್ರೀಡ್ ದನಗಳು ಬಂದಿದ್ದು ಹಾಲಿನ ಉದ್ದೇಶಕ್ಕಾಗಿಯೇ ಸಾಕುತ್ತಾರೆ. ಆದರೆ, ಇದ್ಯಾವುದೂ ಇಲ್ಲದೆ ಕರುವೊಂದು ಹಾಲು ಕೊಡುವುದು ಜಗದ ಸೋಜಿಗಕ್ಕೆ ಸಾಕ್ಷಿಯಾಗಿದೆ.
A calf has begun producing milk just three days after its birth, captivating the hearts and minds of residents in Chitradurga. The miraculous occurrence has drawn crowds of curious locals eager to witness this extraordinary phenomenon.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 02:05 pm
HK News Staffer
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm