ಬ್ರೇಕಿಂಗ್ ನ್ಯೂಸ್
20-01-25 04:24 pm HK News Desk ಕರ್ನಾಟಕ
ಹಾಸನ, ಜ.20: ಆನ್ಲೈನ್ ಗೇಮ್ ನಲ್ಲಿ ಹಣ ಕಳಕೊಂಡು ಬೇಸತ್ತ ಯುವಕನೊಬ್ಬ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಲಾಡ್ಜ್ನಲ್ಲಿ ನಡೆದಿದೆ.
ಬೇಲೂರು ತಾಲ್ಲೂಕಿನ, ಚೀಕನಹಳ್ಳಿ ಗ್ರಾಮದ ಉಮೇಶ್ ಎಂಬುವವರ ಒಬ್ಬನೇ ಪುತ್ರ ರಾಕೇಶ್ಗೌಡ(25) ಆತ್ಮಹತ್ಯೆಗೆ ಶರಣಾದ ಯುವಕ. ತೀರ್ಥಹಳ್ಳಿಯ ಸ್ಪಂದನಾ ಸ್ಪೂರ್ತಿ ಫೈನಾನ್ಸ್ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ಬೇಲೂರು ನಗರ ಘಟಕದ ಅಧ್ಯಕ್ಷನಾಗಿದ್ದ. ಎರಡು ವರ್ಷದಿಂದ ಆನ್ಲೈನ್ ಗೇಮ್ ಆಡಿ ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ. ಆ ಹಣವನ್ನು ತೀರಿಸಲು ನನ್ನಿಂದ ಆಗುತ್ತಿಲ್ಲ. ಕೊನೆಯದಾಗಿ ಈ ನಿರ್ಧಾರ ಮಾಡಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ, ಅಮ್ಮ ನನ್ನನ್ನು ಕ್ಷಮಿಸಿಬಿಡು. ಆನ್ಲೈನ್ ಗೇಮ್ನಿಂದಾಗಿ ಫೈನಾನ್ಸ್ನಲ್ಲಿ ಒಂದು ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದೇನೆ ಎಂದು ಚೀಟಿ ಬರೆದಿಟ್ಟಿದ್ದಾನೆ.
ಆ ಹಣವನ್ನು ನಮ್ಮ ತಾಯಿಯ ಬಳಿ ಕೇಳಬಾರದು. ನನ್ನ ಸಾವಿನ ಸುದ್ದಿಯನ್ನು ನೇರವಾಗಿ ನನ್ನ ತಾಯಿಗೆ ಹೇಳಬೇಡಿ. ನಾನು ಸಾವಿನ ನಂತರ ನನ್ನ ಕಣ್ಣನ್ನು ದಾನ ಮಾಡಿ. ಬಸವರಾಜು ಅವರ ಹತ್ತಿರ ಐವತ್ತು ಸಾವಿರ ಸಾಲ ಮಾಡಿದ್ದೇನೆ, ನಿಮಗೆ ಕೊಡಲು ಆಗಲಿಲ್ಲ ಕ್ಷಮಿಸಿ. ನನ್ನ ಬೈಕ್ ಮಾರಟವಾದರೆ ಹಣ ತಲುಪುತ್ತದೆ. ನನ್ನ ಶವವನ್ನು ಚೀಕನಹಳ್ಳಿಗೆ ತೆಗೆದುಕೊಂಡು ಹೋಗಬೇಡಿ, ಬೇಲೂರು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ. ಅಮ್ಮ, ಕುಟುಂಬಸ್ಥರೇ ನನ್ನನ್ನು ಕ್ಷಮಿಸಿಬಿಡಿ I MISS YOU AMMA.. ನನ್ನ ಅಂತಿಮ ದರ್ಶನಕ್ಕೆ ಬೇಲೂರು ಶಾಸಕರು ಬರಬೇಕು. ಆನ್ಲೈನ್ ಗೇಮ್ ನನ್ನ ಜೀವನವನ್ನು ತೆಗೆದುಬಿಡ್ತು ಎಂದು ನೋವು ಹೇಳಿಕೊಂಡಿದ್ದಾನೆ.
25 year old youth commits suicide after losing money in online game after huge loan in Hassan. The Deceased has been identified as Ramesh Gowda. He was working at finance company.
09-04-26 09:30 pm
HK News Staffer
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
09-04-26 11:03 pm
HK News Staffer
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm