ಬ್ರೇಕಿಂಗ್ ನ್ಯೂಸ್
10-10-24 08:19 pm HK News Desk ಕರ್ನಾಟಕ
ಮೈಸೂರು, ಅ.10: ಬೈಕ್ ಗ್ಯಾರೇಜ್ ನಡೆಸುತ್ತಿದ್ದ ಮೆಕ್ಯಾನಿಕ್ ಒಬ್ಬನಿಗೆ ಕೇರಳದ ಲಾಟರಿ ಹೊಡೆದಿದ್ದು ರಾತ್ರೋರಾತ್ರಿ ಸಾಮಾನ್ಯ ಮನುಷ್ಯ ಕೋಟ್ಯಾಧಿಪತಿ ಆಗಿದ್ದಾನೆ. ಕೇರಳ ಲಾಟರಿಯಲ್ಲಿ ಪಾಂಡವಪುರ ಮೂಲದ ಅಲ್ತಾಫ್ ಪಾಷಾ ಎಂಬ ಯುವಕ 25 ಕೋಟಿ ರೂ. ಬಹುಮಾನ ಗೆದ್ದಿದ್ದು ಎಲ್ಲರ ಗಮನಸೆಳೆದಿದೆ.
ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್, 15 ವರ್ಷಗಳಿಂದ ಲಾಟರಿ ಖರೀದಿಸುವ ಖಯಾಲಿ ಹೊಂದಿದ್ದ. ಇತ್ತೀಚೆಗೆ ಕೇರಳಕ್ಕೆ ಹೋಗಿದ್ದಾಗ ಓಣಂ ಬಂಪರ್ ಲಾಟರಿಯನ್ನು 500 ರೂ. ಕೊಟ್ಟು ಖರೀದಿ ಮಾಡಿದ್ದ. ಬಹುಮಾನ ಬಂದಿರುವ ವಿಚಾರವನ್ನು ಮೊದಲಿಗೆ ನಂಬುವುದಕ್ಕೂ ಅಲ್ತಾಫ್ ಕುಟುಂಬ ತಯಾರಿರಲಿಲ್ಲ. ಮಾಧ್ಯಮದ ಜೊತೆಗೆ ಅಲ್ತಾಫ್ ಪತ್ನಿ ಸೀಮಾ ಬಾನು ಮತ್ತು ಮಗಳು ತನಲ್ ಸಂತಸ ಹಂಚಿಕೊಂಡಿದ್ದಾರೆ.
ಮೊದಲಿಗೆ ನಾವು ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ನಂಬಿರಲಿಲ್ಲ. ಇಂದು ಬೆಳಗ್ಗೆ ಪರಿಶೀಲನೆ ಬಳಿಕ ನಮಗೆ ನಂಬಿಕೆ ಬಂದಿತ್ತು. 15 ವರ್ಷದಿಂದ ಲಾಟರಿ ತೆಗೆದುಕೊಳ್ಳುತ್ತಿದ್ದರು. ಲಾಟರಿ ತೆಗೆದುಕೊಳ್ಳುವುದಕ್ಕೇ ಕೇರಳಕ್ಕೆ ಹೋಗುತ್ತಿದ್ದರು. 15 ವರ್ಷದಿಂದ ಯಾವುದೇ ಲಾಟರಿ ಗೆದ್ದಿರಲಿಲ್ಲ. ಈಗಲು ಅಷ್ಟೇ ನಮಗೆ ಬಂದಿಲ್ಲ ಅಂತನೇ ಅಂದುಕೊಂಡಿದ್ದೆವು. ಈ ಸಲ ಎರಡು ಲಾಟರಿ ಟಿಕೆಟ್ ತಂದಿದ್ದರು. ಒಂದನ್ನು ಯಾರಿಗಾದ್ರು ಕೊಟ್ಟುಬಿಡುತ್ತೇನೆ ಅಂದಿದ್ರು. ಆದ್ರೆ ಅದೇ ಗೆದ್ದುಬಿಟ್ಟರೆ ಅಂತ ಹೇಳಿದ್ದಕ್ಕೆ ಆ ಲಾಟರಿಯನ್ನೂ ಇಟ್ಟುಕೊಂಡಿದ್ದರು. ನೋಡಿದ್ರೆ ಅದೇ ಲಾಟರಿಗೆ 25 ಕೋಟಿ ಬಹುಮಾನ ಬಂದಿದೆ ಎಂದು ಸೀಮಾ ಬಾನು ಹೇಳಿದ್ದಾರೆ.
ಮೊದಲಿಗೆ ನಮಗೆ ನಂಬಿಕೆಯೆ ಇರಲಿಲ್ಲ. ಇಷ್ಟು ವರ್ಷ ಲಾಟರಿ ತೆಗೆದುಕೊಳ್ಳುವ ವಿಚಾರಕ್ಕೆ ಮನೆಯಲ್ಲಿ ಗಲಾಟೆಯೂ ಆಗಿತ್ತು. ಲಾಟರಿ ತೆಗೆದುಕೊಳ್ಳುವುದು ಬೇಡ ಅಂತ ಹೇಳುತ್ತಿದ್ದೆವು. ಇದೀಗ ಲಾಟರಿ ಗೆದ್ದಿರುವುದು ಖುಷಿಯಾಗಿದೆ. ಸ್ವಲ್ಪ ಸಾಲ ಇದೆ, ಅದನ್ನು ತೀರಿಸಿ ಮನೆ ತೆಗೆದುಕೊಳ್ಳಬೇಕೆಂಬ ಆಸೆ ಇದೆ ಎಂದು ಸೀಮಾ ಹೇಳಿದ್ದಾರೆ. ಅಲ್ತಾಫ್ ಲಾಟರಿ ಬಹುಮಾನ ಪಡೆಯುವುದಕ್ಕಾಗಿ ಕೇರಳಕ್ಕೆ ತೆರಳಿದ್ದಾರೆ. 25 ಕೋಟಿ ಮೊತ್ತದಲ್ಲಿ ತೆರಿಗೆ ಕಳೆದು 17.5 ಕೋಟಿ ಮೊತ್ತ ಅಲ್ತಾಫ್ ಕೈಸೇರಲಿದೆ.
Mandya youth gets bumper lottery of 25 crores, gets 12 crore after tax deduction. Altaf who had been to kerala had purchased two lotteries out of which he has been found the winner of 25 crores.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm