ಬ್ರೇಕಿಂಗ್ ನ್ಯೂಸ್
10-09-23 06:33 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.10: ಒಂದೆಡೆ ಬಿ.ಕೆ.ಹರಿಪ್ರಸಾದ್ ನಿರಂತರ ಟೀಕೆ ಮಾಡುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಮೌನವಾಗಿದ್ದಾರೆ. ಅವರೆಲ್ಲಿಯೂ ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಹೀಗಾಗಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಈ ರೀತಿಯ ಹೇಳಿಕೆಯನ್ನೇ ಮುಂದಿಟ್ಟು ರಾಜ್ಯ ಬಿಜೆಪಿ ಟೀಕೆ ಮಾಡಿದೆ.
ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಒಳಜಗಳ ನಿರಂತರವಾಗಿದೆ. "ಅ'ಹಿಂದ" ಹೆಸರಿನಲ್ಲಿ ಕೇವಲ ಒಂದೆರೆಡು ಸಮುದಾಯದವರನ್ನಷ್ಟೇ ಓಲೈಸುತ್ತಾ, ಉಳಿದೆಲ್ಲಾ ಸಮುದಾಯಗಳಿಗೂ ಅನ್ಯಾಯವೆಸಗುವ ಸಿದ್ದರಾಮಯ್ಯ ಅವರ ನೈಜ ರಾಜಕಾರಣವನ್ನು ಅವರದೇ ಪಕ್ಷದ ನಾಯಕರು ಬಹಿರಂಗಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಆಡಳಿತ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಹರಿಪ್ರಸಾದ್ರಿಂದ ಹೊರಬಂದ ಸತ್ಯಗಳೇ ಸಾಕ್ಷಿ ಎಂದು ಹೇಳಿದೆ.

"ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ" ಎಂಬ ಗಾದೆ ಮಾತಿದೆ. ಅದು ನಿಮಗೆ ಸರಿಯಾಗಿ ಹೊಂದುತ್ತದೆ ಸಿದ್ದರಾಮಯ್ಯ ಅವರೇ. ಹರಿಪ್ರಸಾದ್ ನನ್ನ ಹೆಸರೇ ಹೇಳಿಲ್ಲ ಎಂದು ಉದ್ಧಟತನದ ಹೇಳಿಕೆ ನೀಡುತ್ತೀರಿ. ಹಾಗಾದರೆ, ಪಂಚೆ ಧರಿಸಿ, ದುಬಾರಿ ಹ್ಯುಬ್ಲೋಟ್ ವಾಚ್ ಕಟ್ಟಿಕೊಂಡವರು ರಾಜ್ಯದಲ್ಲಿ ಬೇರೆ ಯಾರಾದರೂ ಇದ್ದಾರಾ..? ಕೊರಟಗೆರೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಎಂಬ ಉತ್ತರವನ್ನು ಕೊರಟಗೆರೆಯ ಚಿಕ್ಕ ಬಾಲಕನೂ ನೀಡುತ್ತಾನೆ.
ದೇವರಾಜ ಅರಸು ಬಳಸುತ್ತಿದ್ದ ಕಾರಿನಲ್ಲಿ ಜಾಲಿ ರೈಡ್ಗೆ ಹೋಗಿದ್ದು ರಾಹುಲ್ ಗಾಂಧಿಯವರಾ..? ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರು ನೀವೇ ತಾನೇ..? ವಂದಿಮಾಗದರು, ಆಸ್ಥಾನ ಕಲಾವಿದರಿಂದ ಸ್ವಯಂಘೋಷಿತ ಸ"ಮಜಾವಾದಿ" ಎಂಬ ಬಿರುದು ಪಡೆದವರು ನೀವೇ ತಾನೇ..? ಬಿ.ಕೆ. ಹರಿಪ್ರಸಾದ್ರವರು ಸಿದ್ದರಾಮಯ್ಯರವರನ್ನೇ ಉದ್ದೇಶಿಸಿ ಮಾತನಾಡಿದ್ದು ಎಂಬುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು ಎಂದು ಪ್ರಶ್ನಿಸಿದೆ.
ರಾಜ್ಯದ @INCKarnataka ಸರ್ಕಾರದಲ್ಲಿ ಒಳಜಗಳ ನಿರಂತರವಾಗಿದೆ.
— BJP Karnataka (@BJP4Karnataka) September 10, 2023
"ಅ'ಹಿಂದ" ಹೆಸರಿನಲ್ಲಿ ಕೇವಲ ಒಂದೆರೆಡು ಸಮುದಾಯದವರನ್ನಷ್ಟೇ ಓಲೈಸುತ್ತಾ, ಉಳಿದೆಲ್ಲಾ ಸಮುದಾಯಗಳಿಗೂ ಅನ್ಯಾಯವೆಸಗುವ ಸಿದ್ದರಾಮಯ್ಯರವರ ನೈಜ ರಾಜಕಾರಣವನ್ನು ಅವರದೇ ಪಕ್ಷದ ನಾಯಕರು ತುಂಬಿದ ಸಭೆಯಲ್ಲಿ ಬಹಿರಂಗಪಡಿಸುತ್ತಿದ್ದಾರೆ.
ಸಿದ್ದರಾಮಯ್ಯರವರ ಸರ್ಕಾರದ ಆಡಳಿತ ಎಷ್ಟರ… pic.twitter.com/CUF0eunbZ2
Former All India Congress Committee (AICC) general secretar and MLC BK Hariprasad launched a scathing attack on chief minister Siddaramaiah without taking his name at his show-of-strength meeting of backward classes here on Saturday.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm