ಬ್ರೇಕಿಂಗ್ ನ್ಯೂಸ್
04-04-23 11:02 pm HK News Desk ಕರ್ನಾಟಕ
ಹಾಸನ, ಎ.4 : ಅತ್ತ ಕೋಲು ಮುರಿಯಲೂ ಇಲ್ಲ, ಇತ್ತ ಹಾವು ಸಾಯಲೂ ಇಲ್ಲ. ಹೌದು.. ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವ ಸನ್ನಿಧಿಯಲ್ಲಿ ರಥೋತ್ಸವವೂ ನಡೀತು. ಸಂಪ್ರದಾಯಕ್ಕೆ ತಕ್ಕಂತೆ ಮುಸ್ಲಿಮರ ಪ್ರಾರ್ಥನೆಯೂ ನೆರವೇರಿತು. ಇವರು ಗೆಲ್ಲಲಿಲ್ಲ, ಅವರು ಸೋಲಲಿಲ್ಲ ಅನ್ನೋ ಹಾಗೆ.
ಹಿಂದು ಸಂಘಟನೆಗಳ ಬೆದರಿಕೆಯ ಕಾರಣ ರಥೋತ್ಸವ ನಡೆಯುತ್ತಾ ಅಥವಾ ಗಲಾಟೆ ತಲೆದೋರುತ್ತಾ ಎನ್ನುವ ಆತಂಕ ಎದುರಾಗಿತ್ತು. ಇದಕ್ಕಾಗಿ ಅರೆ ಮಿಲಿಟರಿ ಪಡೆಯ ಬಂದೋಬಸ್ತ್ ಮಾಡಲಾಗಿತ್ತು. ರಥೋತ್ಸವ ಸಂದರ್ಭದಲ್ಲೇ ಖುರಾನ್ ಪಠಣ ಮಾಡಲು ಮುಸ್ಲಿಂ ಮುಖಂಡರೂ ಆಗಮಿಸಿದ್ದರು. ಹಿಂದಿನಿಂದ ನಡೆದುಬಂದ ಪದ್ಧತಿಯೆಂದು ಜಿಲ್ಲಾಡಳಿತವೂ ಒಪ್ಪಿಗೆ ಸೂಚಿಸಿತ್ತು. ಆದರೆ ದೇವಸ್ಥಾನದ ಮುಂದೆ ಮುಸ್ಲಿಮರ ಪ್ರಾರ್ಥನೆ ನೆರವೇರಿದೆ, ಜೊತೆಗೆ ರಥೋತ್ಸವವೂ ಜರಗಿದೆ.

ಚೆನ್ನಕೇಶವ ರಥೋತ್ಸವದಲ್ಲಿ 'ಕುರಾನ್ ಪಠಣ' ಮಾಡಬಾರದು ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಪ್ರತಿ ವರ್ಷದಂತೆ ಕುರಾನ್ ಪಠಣ ಮಾಡಲು ಬಂದಿದ್ದ, ದೊಡ್ಡ ಮೇದೂರು ಗ್ರಾಮದ ಸೈಯದ್ ಸಜಾದ್ ಭಾಷಾ ಖಾದ್ರಿ ಈ ಬಾರಿ ಜಿಲ್ಲಾಧಿಕಾರಿ ಸೂಚನೆಯಂತೆ ದೇವಸ್ಥಾನದ ಮುಂಭಾಗದ ಮೆಟ್ಟಿಲಿನ ಬಳಿ ನಿಂತು ಪ್ರಾರ್ಥನೆ ಸಲ್ಲಿಸಿದರು. ಆದರೆ ಹಿಂದು ಸಂಘಟನೆಗಳ ಕಾರ್ಯಕರ್ತರು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಹೀಗಾಗಿ ಇಸ್ಲಾಂ ಧರ್ಮದ ರೀತಿಯಲ್ಲಿ ಶ್ಲೋಕ ಹೇಳಿ ನಮಸ್ಕರಿಸಿ ಸಂಕ್ಷಿಪ್ತವಾಗಿ ಮುಸ್ಲಿಂ ಮುಖಂಡರು ಪ್ರಾರ್ಥನೆ ಮುಗಿಸಿದ್ದಾರೆ, ಈ ಹಿಂದಿನಂತೆ ಖುರಾನ್ ಪಠಣ ಮಾಡಲು ಸಾಧ್ಯವಾಗಿಲ್ಲ.
ದೊಡ್ಡ ಮೇದೂರಿನ ಖಾಜಿ ಸಾಹೇಬರು ಶ್ಲೋಕ ಹೇಳಲು ಮುಂದಾದ ವೇಳೆ ವಿವಿಧ ಹಿಂದು ಪರ ಸಂಘಟನೆಗಳ ಮುಖಂಡರು 'ಜೈ ಶ್ರೀರಾಮ್... ನಾವೆಲ್ಲ ಹಿಂದೂ, ನಾವೆಲ್ಲ ಒಂದು' ಎಂಬ ಘೋಷಣೆಗಳನ್ನು ಕೂಗಿದರು. ಗೊಂದಲದ ವಾತಾವರಣ ನಿರ್ಮಾಣ ಆದರೂ, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶ್ಲೋಕ ಹೇಳುವುದಕ್ಕೆ ಅವಕಾಶ ನೀಡಿದ ಜಿಲ್ಲಾಡಳಿತದ ವಿರುದ್ಧ ಹಿಂದೂ ಸಂಘಟನೆಗಳು ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದ್ದೂ ಆಯ್ತು.
ಈ ಎಲ್ಲದರ ಮಧ್ಯೆ ಬೇಲೂರು ಚೆನ್ನಕೇಶವ ರಥೋತ್ಸವ ಹೊರಗಡೆ ವಿಜೃಂಭಣೆಯಿಂದ ನಡೆದಿದೆ. ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾದರು. ಒಳಗಡೆ ಗೊಂದಲ ಇದ್ದರೂ, ಹೊರಗಡೆ ಎಲ್ಲವೂ ಸಾಂಗವಾಗಿ ನಡೆಯಿತು.
Due to threats from Hindu organisations, there were apprehensions whether the rathotsava would take place or there would be a ruckus. A paramilitary force was deployed for this purpose. Muslim leaders had also come to recite the Quran during the rathotsava. The district administration had also accepted it as a practice from the past. But in front of the temple, muslim prayers were offered and a rathotsava was also held.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm