ಬ್ರೇಕಿಂಗ್ ನ್ಯೂಸ್
20-03-23 06:23 pm HK News Desk ಕರ್ನಾಟಕ
ಮಂಡ್ಯ, ಮಾ.20 : ಟಿಪ್ಪುವನ್ನು ಕೊಂದಿದ್ದಾರೆಂದು ವಾದಿಸಿ ಉರಿಗೌಡ, ನಂಜೇಗೌಡರ ಬಗ್ಗೆ ಸಿನಿಮಾ ಮಾಡಲು ಹೊರಟಿರುವ ಬಿಜೆಪಿ ನಾಯಕರಿಗೆ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಉರಿಗೌಡ ನಂಜೇಗೌಡ ವಿಚಾರ ಅಪ್ರಸ್ತುತ. ಸರಿಯಾದ ಸಂಶೋಧನೆ ಆಗದೆ ಇತಿಹಾಸದ ಬಗ್ಗೆ ಚರ್ಚಿಸೋದು ಸೂಕ್ತವಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಸ್ವಾಮೀಜಿ, ನೈಜ ಇತಿಹಾಸವನ್ನ ಅರಿತವನು ಮಾತ್ರ ಮತ್ತೊಂದು ಇತಿಹಾಸ ಸೃಷ್ಟಿಸಲು ಸಾಧ್ಯ. ಇತಿಹಾಸವನ್ನ ಅರಿತವರು ಎಂದರೆ ಆಯಾ ಕಾಲಘಟ್ಟದಲ್ಲಿ ಇದ್ದಂತಹ ವ್ಯಕ್ತಿಗಳು, ಆಗ ಬರೆದಿಟ್ಟ ಶಿಲಾ ಶಾಸನಗಳು, ತಾಳೆಗರಿಗಳು, ಅಂದಿನ ಸಮಕಾಲೀನ ವ್ಯಕ್ತಿಗಳು ಬರೆದ ಮಾಹಿತಿಗಳು ಸಿಗಬೇಕು. ನಂತರ ಬರೆದ ಇತಿಹಾಸ ಸಾಕಷ್ಟು ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಅದರ ಬಗ್ಗೆ ಗೊಂದಲ ಸೃಷ್ಟಿಸುವ ಬದಲು ಸಮುದಾಯಕ್ಕೆ, ರಾಜ್ಯಕ್ಕೆ ಮಾಡಬೇಕಾದ ಕೆಲಸಗಳು ಸಾಕಷ್ಟಿದೆ. ಈ ವಿಚಾರವನ್ನು ಇಟ್ಟುಕೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡೋದು ಸರಿಯಲ್ಲ ಎಂದಿದ್ದಾರೆ.

ಸಿಟಿ ರವಿ, ಗೋಪಾಲಯ್ಯ, ಅಶ್ವಥ್ ನಾರಾಯಣ್ ಇನ್ನಿತರರು ಈ ವಿಚಾರದ ಬಗ್ಗೆ ತಿಳಿದು ಮಾತನಾಡಬೇಕು. ಈ ಬಗ್ಗೆ ಇನ್ಮುಂದೆ ಮಾತನಾಡದೆ ಸುಮ್ಮನಾಗಬೇಕು, ಸುಮ್ಮನಿರ್ತಾರೆ ಅನ್ನೋದು ನಮ್ಮ ಭಾವನೆ ಎಂದು ನೇರ ಟಾಂಗ್ ನೀಡಿದ್ದಾರೆ. ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿ. ಶಾಸನಗಳು, ಹಿಂದಿನ ಇತಿಹಾಸದಲ್ಲಿ ಬಂದಿರುವಂತದ್ದು ಮುಂದಿನ ಪೀಳಿಗೆಗೆ ಶಕ್ತಿಯಾಗುತ್ತದೆ. ಯುವ ಶಕ್ತಿಯನ್ನು ಹಾಳು ಮಾಡುವಂತದ್ದು, ಸಮುದಾಯಕ್ಕೆ ಧಕ್ಕೆ ತರುವಂತ ಕೆಲಸ ಆಗಬಾರದು. ಉರಿಗೌಡ ನಂಜೇಗೌಡ ವಿಚಾರದಲ್ಲಿ ಶಾಸನಗಳು, ತಾಳೆಗರಿಗಳು ಸಿಕ್ಕಿದರೆ ಅದನ್ನ ಮಠಕ್ಕೆ ತಂದು ಕೊಡಲಿ. ಅದನ್ನ ಕ್ರೋಡೀಕರಿಸಿ ಶಾಸನ ತಜ್ಞರು, ಕಾರ್ಬನ್ ಡೇಟಿಂಗ್ ತಜ್ಞರು ಅದನ್ನ ಪರಿಶೀಲಿಸಿ ತೀರ್ಮಾನಕ್ಕೆ ಬರುತ್ತಾರೆ. ವಿನಾಕಾರಣ ಗೊಂದಲ ಎಬ್ಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಸಚಿವ ಅಶ್ವತ್ಥ ನಾರಾಯಣ ಮತ್ತು ಸಿಟಿ ರವಿ ಅವರು ಉರಿಗೌಡ, ನಂಜೇಗೌಡರ ಬಗ್ಗೆ ಮಾತುಗಳನ್ನಾಡಿ, ಇವರೇ ಟಿಪ್ಪುವನ್ನು ಕೊಂದಿದ್ದ ಒಕ್ಕಲಿಗ ಸಮುದಾಯದ ವೀರರು ಎಂದು ಹಾಡಿ ಹೊಗಳಿದ್ದರು. ಅಲ್ಲದೆ ಇತ್ತೀಚೆಗೆ ಮಂಡ್ಯಕ್ಕೆ ಮೋದಿ ಬಂದಿದ್ದಾಗ ಉರಿಗೌಡ- ನಂಜೇಗೌಡ ಹೆಸರಲ್ಲಿ ದ್ವಾರ ನಿರ್ಮಿಸಿ ಒಕ್ಕಲಿಗರಲ್ಲೇ ಗೊಂದಲ ಸೃಷ್ಟಿಸಿದ್ದರು. ಬಿಜೆಪಿ ನಾಯಕರ ಈ ನಡೆಗೆ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ತೀವ್ರ ಟೀಕಿಸಿದ್ದಲ್ಲದೆ, ಇತಿಹಾಸವನ್ನು ನೀವು ಬರೆಯೋದು ಬೇಡ. ಅಂಥವರು ಇದ್ದರೆ ಇತಿಹಾಸ ದಾಖಲೆ ತೋರಿಸಿ. ನಾವು ಕಲಿತ ಇತಿಹಾಸದಲ್ಲಿ ಅಂಥದನ್ನು ಕಲಿತಿಲ್ಲ. ಸಮುದಾಯವನ್ನು ಒಡೆಯುವುದಕ್ಕಾಗಿ ಈ ರೀತಿ ಮಾಡಬೇಡಿ ಎಂದು ಕಿಡಿಕಾರಿದ್ದರು.
ಉರಿಗೌಡ, ನಂಜೇಗೌಡರ ವಿಚಾರ ಮುನ್ನೆಲೆಗೆ ಬರುತ್ತಲೇ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಶಾಸಕ ಮುನಿರತ್ನ, ಸಿನಿಮಾ ಟೈಟಲ್ ಬುಕ್ ಮಾಡಿದ್ದರು. ಎರಡೇ ದಿನದಲ್ಲಿ ಟೈಟಲ್ ಆಗಿದ್ದಲ್ಲದೆ, ಚಿತ್ರಕಥೆಯನ್ನು ಸಚಿವ ಅಶ್ವತ್ಥ ನಾರಾಯಣ ಅವರೇ ಮಾಡಲಿದ್ದಾರೆ ಎಂದು ಮುನಿರತ್ನ ಹೇಳಿದ್ದರು. ಈ ರೀತಿಯ ನಡೆಗೆ ಭಾರೀ ವಿರೋಧ ಕೇಳಿಬಂದಿದ್ದಲ್ಲದೆ, ಚಿತ್ರ ಸಾಹಿತಿಗಳು ಕೂಡ ಟೀಕೆ ಮಾಡಿದ್ದರು.
Nirmalananda Swamiji Of Sri Adichunchanagiri slams over narrative on Uri Gowda and Nanje Gowda. The controversy surrounding Uri Gowda and Nanje Gowda, the fictional characters being promoted as brave Vokkaliga soldiers who killed Tipu Sultan, has caused tension within the Vokkaliga community in Karnataka.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm