ಬ್ರೇಕಿಂಗ್ ನ್ಯೂಸ್
08-03-23 02:18 pm HK News Desk ಕರ್ನಾಟಕ
ಚಿಕ್ಕಮಗಳೂರು, ಮಾ.8 : ಚಾರ್ಮಾಡಿ ಘಾಟಿ ಆಸುಪಾಸಿನ ಕಾಡಿನಲ್ಲಿ ಬೆಂಕಿ ಬಿದ್ದು ಮೂರು ದಿನಗಳಿಂದ ನಿರಂತರ ಉರಿಯುತ್ತಿದೆ. ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದಾಗಿ ಬೆಂಕಿಯ ಜ್ವಾಲೆಗೆ ನೂರಾರು ಪಕ್ಷಿ, ಪ್ರಾಣಿಗಳು ಆಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ನಲ್ಲಿ ನಿರಂತರ ಬೆಂಕಿ ಉರಿಯತೊಡಗಿದ್ದು ಆಸುಪಾಸಿನ ನಿವಾಸಿಗಳು ಭೀತಿಗೆ ಒಳಗಾಗಿದ್ದಾರೆ. ಬೆಂಕಿಯಿಂದ ಜೀವ ಉಳಿಸಿಕೊಳ್ಳಲು ಕಾಡಿನಲ್ಲಿರುವ ಪ್ರಾಣಿಗಳು, ಘಟ ಸರ್ಪಗಳು ಹೊರಕ್ಕೆ ಬರುತ್ತಿವೆ. ಕಾಡಂಚಿನ ಗ್ರಾಮ ತರುವೆಯಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಹೊರಗೆ ಬಂದಿದ್ದು ಸೆರೆಯಾಗಿದೆ.
ದೈತ್ಯಾಕಾರದ ಕಾಳಿಂಗನನ್ನ ನೋಡಿ ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ. ಹಾವಾಡಿಗ ಆರೀಫ್ ಎಂಬವರು ಕಾಳಿಂಗನನ್ನು ಹಿಡಿದಿದ್ದು ಆತ ಸೆರೆಹಿಡಿದು ಎತ್ತಲಾಗದಷ್ಟು ದೈತ್ಯಾಕಾರವಾಗಿತ್ತು. ಬೃಹತ್ ಕಾಳಿಂಗ ಸರ್ಪವನ್ನು ಬಳಿಕ ಚಾರ್ಮಾಡಿ ಘಾಟಿಯ ಬೆಂಕಿ ಬೀಳದ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಭಾರೀ ಬಿಸಿಲಿನ ಕಾರಣದಿಂದ ನಿರಂತರ ಬೆಂಕಿ ಬೀಳುತ್ತಿದ್ದು ದೂರ ದೂರಕ್ಕೆ ಪಸರಿಸುತ್ತಿದೆ. ಕಾಡಂಚಿನಲ್ಲಿ ಇರುವ ಗ್ರಾಮಸ್ಥರು ಎಸ್ಟೇಟ್ ಮಾಫಿಯಾದ ಹುನ್ನಾರದಲ್ಲಿ ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆಂಬ ಶಂಕೆಯಿದೆ. ಅರಣ್ಯ ಇಲಾಖೆಯ ಸಿಬಂದಿ ಚಾರ್ಮಾಡಿಯಲ್ಲಿ ಬೆಂಕಿ ಹಾಕಿರುವ ಒಬ್ಬನನ್ನು ಬಂಧಿಸಿದ್ದಾರೆ.
ಇದೇ ವೇಳೆ, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಸವನಕೋಟೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕಿದ ಓರ್ವನನ್ನು ಅರಣ್ಯ ಸಿಬಂದಿ ಬಂಧಿಸಿದ್ದಾರೆ. ರಘು ಎಂಬಾತನನ್ನು ಬಂಧಿಸಿದ್ದು ಕುಮಾರ್ ಹಾಗೂ ವೆಂಕಟೇಶ್ ಪರಾರಿಯಾಗಿದ್ದಾರೆ. ಮೀಸಲು ಅರಣ್ಯ ಸೇರಿ ಅಕ್ಕಪಕ್ಕದ ತೋಟಗಳಿಗೂ ಬೆಂಕಿ ಆವರಿಸಿದ್ದರಿಂದ ನೂರಾರು ಎಕರೆ ಅರಣ್ಯ , ತೋಟ ಬೆಂಕಿಗಾಹುತಿಯಾಗಿತ್ತು.
Mangalore Charmadi Ghat fire, hundreds of animals and birds found dead, snakes captured by villagers. A forest fire is raging in the highlands of Alekan, and a huge amount of forest, animals and birds have been burnt due to the fire started by miscreants. Fire spewed out of transformer, Kichi Natana in Halenerenki Shivaru Sanctuary: Hundreds of acres of forest destroyed Forest officials rushed to the spot on getting the information and tried to put out the fire with the help of locals. Due to the high altitude, the fire fighting vehicle could not go.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm