ಬ್ರೇಕಿಂಗ್ ನ್ಯೂಸ್
13-02-23 02:06 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.13: "ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನ, ಕೇವಲ ಪ್ರದರ್ಶನವಲ್ಲ. ಇದು ಭಾರತದ ಶಕ್ತಿಯ ಪ್ರದರ್ಶನವೂ ಹೌದು'' ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಆಯೋಜಿಸಲಾಗಿರುವ 14ನೇ ಏರೋ ಇಂಡಿಯಾ ಪ್ರದರ್ಶನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಏರ್ ಶೋ ಭಾರತದ ಸಾಮರ್ಥ್ಯ ಸಾಕ್ಷಿ ಆಗಲಿದೆ. ಭಾರತದ ಮೇಲಿನ ವಿಶ್ವದ ವಿಶ್ವಾಸ ಹೆಚ್ಚಾಗುತ್ತಿದೆ. ಬಹುತೇಕ ರಾಷ್ಟ್ರಗಳು ಏರೋ ಇಂಡಿಯಾದಲ್ಲಿ ಭಾಗಿಯಾಗುತ್ತಿವೆ. ದೇಶಗಳ ರಕ್ಷಣಾ ಸಚಿವರು, ವಿಶ್ವದ ಅನೇಕ ರಕ್ಷಣಾ ತಂತ್ರಜ್ಞಾನ ಹಾಗೂ ಪರಿಕರಗಳ ನಿರ್ಮಾತೃ ಕಂಪನಗಿಳ ಸಿಇಒಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
"ಈ ಪ್ರದರ್ಶನದಲ್ಲಿ ಭಾರತದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉತ್ಪಾದನಾ ಕಂಪನಿಗಳು (ಎಂಎಸ್ಎಂಇ) , ಸ್ವದೇಶಿ ಸ್ಟಾರ್ಟ್ ಅಪ್ ಕೂಡಾ ಭಾಗಿಯಾಗುತ್ತಿವೆ. ಭೂಮಿಯಿಂದ ಆಕಾಶದವರೆಗೆ ಬಿಲಿಯನ್ ಅವಕಾಶಗಳ ರನ್ ವೇ ಇದಾಗಿದ್ದು, ಈ ಅವಕಾಶವನ್ನು ವಿಶ್ವದ ಎಲ್ಲಾ ರಕ್ಷಣಾ ಸಾಮಗ್ರಿಗಳ ತಯಾರಿಕಾ ಕಂಪನಿಗಳು ಸದ್ಬಳಕೆ ಮಾಡಿಕೊಳ್ಳಬೇಕು'' ಎಂದು ಅವರು ತಿಳಿಸಿದರು.



"ಏರೋ ಇಂಡಿಯಾವನ್ನು ಅತ್ಯಂತ ಅಚ್ಚುಕಟ್ಟಾಗಿ ಏರ್ ಶೋವನ್ನು ಆಯೋಜಿಸಿರುವುದಕ್ಕೆ ನಾನು ರಕ್ಷಣಾ ಇಲಾಖೆಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದ ಮೋದಿ, ಭಾರತದ ತಂತ್ರಜ್ಞಾನ ವಿಶ್ವದಲ್ಲೇ ಅತ್ಯಾಧುನಿಕವಾಗಿದೆ. ಈ ಏರ್ ಶೋನಲ್ಲಿ ಭಾಗವಹಿಸುವಂತೆ ಕರ್ನಾಟಕದ ಯುವಜನರಿಗೆ ನಾನು ಸ್ವಾಗತ ಕೋರುತ್ತೇನೆ. ಎಲ್ಲರೂ ಈ ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ, ಹೊಸ ಸಂಶೋಧನೆಯಲ್ಲಿ ಭಾಗಿಯಾಗಬೇಕು'' ಎಂದು ಅವರು ತಿಳಿಸಿದರು.




ಭಾರತದಲ್ಲಿ ಅಭಿವೃದ್ಧಿಯಾಗುವ ತಂತ್ರಜ್ಞಾನಗಳ ವಿಶೇಷತೆಗಳನ್ನು ವಿವರಿಸಿದ ಅವರು, “ನಮ್ಮ ತಂತ್ರಜ್ಞಾನ ಕಡಿಮೆ ವೆಚ್ಚದ್ದಾಗಿರುತ್ತದೆ ಜೊತೆಗೆ, ನಂಬಲರ್ಹವಾದ ತಂತ್ರಜ್ಞಾನವೂ ಆಗಿರುತ್ತದೆ.ದೇಶಗಳ ರಕ್ಷಣಾ ಸಚಿವರು, ಸಿಇಒಗಳು ಭಾಗಿಯಾಗಿದ್ದಾರೆ. ಇದರ ಪ್ರಾತ್ಯಕ್ಷತೆಗೆ ಪ್ರಮಾಣತೆಯ ಅಗತ್ಯವಿಲ್ಲ. ಭಾರತದ ತಂತ್ರಜ್ಞಾನದ ಸಾಮರ್ಥ್ಯ ಏನು ಎಂಬುದು ತೇಜಸ್ ಎಂಬ, ಮೇಕ್ ಇನ್ ಇಂಡಿಯಾದಡಿ ಆರಂಭವಾದ ಬಹುಕಾರ್ಯ ನಿರ್ವಹಣೆಯ ಸಾಮರ್ಥ್ಯದ ಯುದ್ಧ ವಿಮಾನವೇ ಸಾಕ್ಷಿ. ಇದನ್ನು ಭಾರತದ ಹೆಮ್ಮೆಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿದೆ. ತುಮಕೂರಿನಲ್ಲಿ ಎಚ್ ಎಎಲ್ ನ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನದ ಯುದ್ಧ ವಿಮಾನಗಳನ್ನು ನಿರ್ಮಿಸುವ ದೊಡ್ಡ ಕೇಂದ್ರ ಆರಂಭವಾಗಿದೆ. ಇದೆಲ್ಲವೂ ಆತ್ಮನಿರ್ಭರ ಭಾರತದ ಉದಾಹರಣೆಗಳಷ್ಟೇ'' ಎಂದು ಪ್ರಧಾನಿ ಮೋದಿ ವಿವರಿಸಿದರು.


"ಈಗ ಅವಕಾಶಗಳು ತೆರೆಯುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿ ಆಗುತ್ತಿದೆ. ರಕ್ಷಣಾ ಸಾಮಗ್ರಿಗಳನ್ನು ಹಿಂದೆ ವಿವಿಧ ದೇಶಗಳಿಂದ ತರಿಸಿಕೊಳ್ಳುತ್ತಿದ್ದ ಭಾರತ, ಇಂದು ಅತ್ಯಾಧುನಿಕವಾದ ರಕ್ಷಣಾ ಸಾಮಗ್ರಿಗಳನ್ನು ಸ್ವದೇಶದಲ್ಲೇ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡುತ್ತಿದೆ. ಈವರೆಗೆ 12 ಸಾವಿರ ಕೋಟಿ ರೂ.ಗಳಷ್ಟು ರಕ್ಷಣಾ ಸಾಮಗ್ರಿಗಳು ವಿದೇಶಗಳಿಗೆ ಭಾರತದಿಂದ ರಫ್ತಾಗಿದೆ'' ಎಂದು ತಿಳಿಸಿದರು.


"ಭಾರತದ ರಕ್ಷಣಾ ಮಾರುಕಟ್ಟೆ ಬಹಳ ಸೂಕ್ಷ್ಮವಾಗಿದ್ದು, ಇದು ಭಾರತವನ್ನು ವಿಶ್ವದ ದೈತ್ಯ ರಕ್ಷಣಾ ಸಾಮಗ್ರಿಗಳ ನಿರ್ಮಾತೃ ರಾಷ್ಟ್ರಗಳ ಪೈಕಿ ಭಾರತವನ್ನು ನಿಲ್ಲಿಸಲಿರುವ ಲಾಂಚ್ ಪ್ಯಾಡ್ ರೀತಿ ಕೆಲಸ ಮಾಡಲಿದೆ. ಮುಂದೊಂದು ದಿನ, ಅತಿಹೆಚ್ಚು ರಕ್ಷಣಾ ಸಲಕರಣೆಗಳನ್ನು ವಿದೇಶಗಳಿಗೆ ರಫ್ತು ಮಾಡುವ ದೇಶ ಎಂಬ ಹೆಗ್ಗಳಿಕೆ ಭಾರತದ ಪಾಲಾಗಲಿದೆ. ಹಾಗಾಗಿಯೇ, ನಾನು ಭಾರತದ ರಕ್ಷಣಾ ಸಾಮಗ್ರಿಗಳ ತಯಾರಿಕಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ವಿಶ್ವದ ಕಂಪನಿಗಳಿಗೆ ಆಹ್ವಾನಿಸುತ್ತೇನೆ. ಹಾಗೆಯೇ, ಭಾರತದ ಖಾಸಗಿ ವಲಯಗಳಿಗೂ ಆಹ್ವಾನಿಸುತ್ತೇನೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Prime Minister Narendra Modi today inaugurated Asia's largest aero show, Aero India 2023, in Bengaluru. The 14th edition of the event will display indigenous equipment and technologies to forge partnerships with foreign companies.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm