ಬ್ರೇಕಿಂಗ್ ನ್ಯೂಸ್
13-08-22 07:22 pm HK News Desk ಕರ್ನಾಟಕ
ಕಾರವಾರ, ಆಗಸ್ಟ್ 13: ಜಿಲ್ಲಾ ಮಟ್ಟದ ವಕ್ಫ್ ಕಮಿಟಿ ಉಪಾಧ್ಯಕ್ಷ ಸ್ಥಾನಕ್ಕೆ ಪರೇಶ್ ಮೇಸ್ತ ಕೊಲೆ ಪ್ರಕರಣದ ಆರೋಪಿ ಆಜಾದ್ ಅಣ್ಣಿಗೇರಿ ಎಂಬಾತನ ನೇಮಕ ಆಗಿರುವುದು ವಿವಾದ ಆಗುತ್ತಲೇ ಜಿಲ್ಲಾಡಳಿತ ನೇಮಕಾತಿ ಹಿಂಪಡೆದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷ ನೀಡಿದ ಪಟ್ಟಿಯಲ್ಲಿ ಆಜಾದ್ ಅಣ್ಣಿಗೇರಿ ಹೆಸರಿತ್ತು. ಈ ವಿಚಾರ ಸುದ್ದಿಯಾದ ತಕ್ಷಣ ಆದೇಶ ರದ್ದು ಮಾಡಿದ್ದೇವೆ ಎಂದು ಹೇಳಿದ್ದಾರೆ.
ವಕ್ಫ್ ಮಂಡಳಿಯು ಆಡಳಿತಾತ್ಮಕ ಚುನಾವಣೆ ನಡೆಯಬೇಕಾದ ವ್ಯವಸ್ಥೆ ಹೊಂದಿದೆ. ಸ್ವಾಭಾವಿಕವಾಗಿ ಆಡಳಿತ ಪಕ್ಷಕ್ಕೆ ವಕ್ಫ್ ಕಮಿಟಿಯಲ್ಲಿ ಬಹುಮತ ಇರಲಿಲ್ಲ. ಸಂಧಾನದ ಮೂಲಕ ಸದಸ್ಯರ ನಾಮನಿರ್ದೇಶನಕ್ಕೆ ತೀರ್ಮಾನಿಸಲಾಗಿತ್ತು. ನಮ್ಮ ಪಟ್ಟಿಯಲ್ಲಿ ಗೊಂದಲ ಇರಲಿಲ್ಲ. ಆದರೆ ವಿರೋಧ ಪಕ್ಷ ನೀಡಿದ ಪಟ್ಟಿಯಲ್ಲಿ ಆಜಾದ್ ಹೆಸರಿತ್ತು ಎಂದು ಹೇಳಿದ್ದಾರೆ.
ಪರೇಶ್ ಮೇಸ್ತ ಕೊಲೆ ಆರೋಪಿಯನ್ನು ವಕ್ಫ್ ಕಮಿಟಿಗೆ ನೇಮಕ ಮಾಡುವ ಮೂಲಕ ಬಿಜೆಪಿಯ ಕೋಮು ಕಾರ್ಯಸೂಚಿ ಮತ್ತೊಮ್ಮೆ ಬಯಲಾಗಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಆಜಾದ್ ಅಣ್ಣಿಗೇರಿ ಅವರದೇ ಪಕ್ಷದವರು, ಸಿದ್ದರಾಮಯ್ಯ ಪಕ್ಷದವರೇ ಪಟ್ಟಿ ನೀಡಿದ್ದರು ಎಂದು ಹೇಳಿದರು.
ಕೊಲೆ ಆರೋಪಿ ಆಜಾದ್ ಅಣ್ಣಿಗೇರಿ ನೇಮಕ ಮಾಡಿರುವುದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ನಾಯಕರು ಕಾರ್ಯಕರ್ತರ ಕೊಲೆಯನ್ನು ತಮ್ಮ ರಾಜಕೀಯ ಏಳ್ಗೆಯ ಮೆಟ್ಟಿಲಾಗಿ ಮಾತ್ರ ನೋಡುತ್ತಿದ್ದಾರೆ ಎಂದು ಟೀಕಿಸಿದ್ದರು. ರಾಜ್ಯಾದ್ಯಂತ ಭಾರೀ ಟೀಕೆ ಕೇಳಿಬರುತ್ತಿದ್ದಂತೆ ಆಜಾದ್ ಅಣ್ಣಿಗೇರಿ ನೇಮಕಕ್ಕೆ ತಡೆ ಹಾಕಲಾಗಿದೆ.
The BJP-led Karnataka government on Friday withheld the appointment of Zamaal Azad Anniger, an accused in the Paresh Mesta murder case, to the Wakf board after its order drew condemnation by party activists and Hindu organisations. BJP workers and Hindu activists condemned the order appointing Zamaal Azad Annigeri to the post of Vice President for District Wakf Board. Zamaal is named as the main accused in the murder case of Paresh Mesta, who was found dead in 2017. Zamaal was arrested and released on bail. The Central Investigation Agency (CBI) is presently probing the case.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
04-02-26 12:29 pm
Mangalore Correspondent
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm