ಬ್ರೇಕಿಂಗ್ ನ್ಯೂಸ್
28-07-22 03:16 pm HK News Desk ಕರ್ನಾಟಕ
ಚಿಕ್ಕಮಗಳೂರು, ಜುಲೈ 28 : ನಮ್ಮದೇ ಸರ್ಕಾರವಿದೆ, ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ರೆ ಕಲ್ಲು ಹೊಡೆಯಬಹುದಿತ್ತು.. ಹೀಗಂತ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕಾರ್ಯಕರ್ತನಿಗೆ ಹೇಳುತ್ತಿರುವ ಆಡಿಯೋ ವೈರಲ್ ಆಗಿದೆ.
ಚಿಕ್ಕಮಗಳೂರಿನಲ್ಲಿ ಯುವಮೋರ್ಚಾ ಪದಾಧಿಕಾರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಕಾರ್ಯಕರ್ತನಿಗೆ ತೇಜಸ್ವಿ ಸೂರ್ಯ ಫೋನ್ ಮಾಡಿದ್ದು ರಾಜಿನಾಮೆ ಹಿಂಪಡೆಯುವಂತೆ ಸಮಾಧಾನ ಹೇಳಿದ್ದಾರೆ. ಸಂಜೆ ಮೀಟಿಂಗ್ ಕರೆದಿದ್ದೇನೆ, ಗೊತ್ತಿದ್ಯಲ್ಲ ಎಂದು ತೇಜಸ್ವಿ ಕೇಳುತ್ತಾರೆ. ಇಲ್ಲ, ನೋಡಿಲ್ಲ. ನಾವು ಸಾಮೂಹಿಕವಾಗಿ ನಿರ್ಧರಿಸಿ ರಾಜಿನಾಮೆ ನೀಡಿದ್ದೇವೆ. ಏನ್ ಮಾಡೋದು, ಕಾರ್ಯಕರ್ತರ ಸಾವು ಜಾಸ್ತಿ ಆಗ್ತಿವೆ. ನಮ್ದೇ ಸರಕಾರ ಇದ್ದರೂ ಮತ್ತೆ ಮತ್ತೆ ನಮ್ಮವರನ್ನು ಕಳಕೊಳ್ಳುತ್ತಿದ್ದೇವೆ ಎಂದು ನೋವು ಹೇಳಿಕೊಂಡಿದ್ದಾರೆ.

ಹೌದು, ನಿಮ್ಗೆ ಎಷ್ಟು ಆಕ್ರೋಶ ಇದ್ದೀಯೋ ನಮ್ಗೂ ಅಷ್ಟೇ ಆಕ್ರೋಶ ಇದೆ. ನಿಮ್ಮ ನೋವನ್ನು ಮುಖ್ಯಮಂತ್ರಿ ಬಳಿ ಒಯ್ಯುತ್ತೇವೆ ಎಂದು ತೇಜಸ್ವಿ ಹೇಳಿದ್ದಾರೆ. ಬಟ್ ಕಾರ್ಯಕರ್ತರ ಬಗ್ಗೆ ನಾಯಕರು ಗಮನ ಹರಿಸುತ್ತಿಲ್ಲ, ನಾವು ಯಾಕೆ ಪಕ್ಷಕ್ಕಾಗಿ ದುಡಿಯಬೇಕು ಎಂದು ಕಾರ್ಯಕರ್ತ ಪ್ರಶ್ನೆ ಮಾಡಿದ್ದಾನೆ.
ಕಾಂಗ್ರೆಸ್ ಸರ್ಕಾರವಾಗಿದ್ರೆ ಕಲ್ಲು ಹೊಡೆಯಬಹುದಿತ್ತು, ನಮ್ಮದೇ ಸರ್ಕಾರ ಇರೋದಲ್ವಾ, ಏನು ಮಾಡೋದು. ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಸೇರಿ ನಾವು ಸಿಎಂ ಭೇಟಿ ಮಾಡೋಣ. ರಾಜೀನಾಮೆ ವಾಪಸ್ಸು ತೆಗೆದುಕೊಳ್ಳಿ, ನಾನು ನಾಲ್ಕು ಲೈನ್ ಟೈಪ್ ಮಾಡಿ ಕಳುಹಿಸುತ್ತೇನೆ, ಅದನ್ನ ಗ್ರೂಪ್ ಗೆ ಹಾಕಿ ಎಂದು ತೇಜಸ್ವಿ ಸೂರ್ಯ, ಕಾರ್ಯಕರ್ತನಿಗೆ ಹೇಳುತ್ತಾರೆ. ಆದರೆ ಕಾರ್ಯಕರ್ತ ಸಂದೀಪ್, ಇಲ್ಲ ಜೀ, ನಾವು ಸಾಮೂಹಿಕವಾಗಿ ತೀರ್ಮಾನ ಕೈಗೊಂಡಿರೋದು. ಹಾಗೇ ರಾಜಿನಾಮೆ ಹಿಂಪಡೆಯೋದು ಸರಿ ಆಗೋಲ್ಲ ಎಂದಿದ್ದಾನೆ.

ನಿಮ್ಮ ನೋವು ಏನೇ ಇರಲಿ. ಸಿಎಂ ಬಳಿ ಹೋಗೋಣ, ಓಕೆ ನಾ.. ನಾನು ಎಲ್ಲ ಜವಾಬ್ದಾರಿ ತಗೋತೇನೆ. ನಮ್ಮದೇ ಸರ್ಕಾರವಿದೆ, ಮಾತಾಡೋಣ. ನಾನು ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷನಿದ್ದೇನೆ. ನಿಮ್ಮ ಹಿಂದಿರುತ್ತೇನೆ ಎಂದಿದ್ದಾರೆ. ಅದಕ್ಕೆ ಕೌಂಟರ್ ಪ್ರತಿಕ್ರಿಯೆ ನೀಡಿದ ಕಾರ್ಯಕರ್ತ, ನಮ್ದೇ ಸರಕಾರ ಇದೆ, ಆದರೆ ಸಾಯೋದು ನಿಂತಿಲ್ಲ ಅಲ್ಲವೇ.. ಇಂಟೆಲಿಜೆನ್ಸ್ ಇಲ್ವಾ.. ಅಟ್ಯಾಕ್ ಆಗುತ್ತೆ ಅಂತ ಗೊತ್ತಿರಲಿಲ್ಲವೇ.. ನಾವು ಸಾಯಬೇಕಾ.. ಎಲ್ಲ ಜಿಲ್ಲೆಗಳಲ್ಲಿ ಕೆಲವರನ್ನು ಹಿಟ್ ಲಿಸ್ಟ್ ಮಾಡಿದ್ದಾರೆ. ತೆಗೆಯಲು ರೆಡಿ ಮಾಡ್ಕೊಂಡಿದ್ದಾರೆ. ನಾವು ಸಾವಿನ ಭಯದಲ್ಲಿ ಕೆಲಸ ಮಾಡಬೇಕೇ ಎಂದು ಕಾರ್ಯಕರ್ತ ಪ್ರಶ್ನೆ ಮಾಡಿದ್ದಾರೆ.
Tejasvi Surya audio goes viral on Praveen Kumar Murder at Bellare. BJP Yuva Morcha State President from Chikmagaluru slams Surya for his statement.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm