ಬ್ರೇಕಿಂಗ್ ನ್ಯೂಸ್
09-07-22 11:20 am HK News Desk ಕರ್ನಾಟಕ
ಶಿವಮೊಗ್ಗ, ಜುಲೈ 9 : ನಾನು ಗೃಹ ಸಚಿವರಿಗೆ 10 ನಿಮಿಷ ಸಮಯ ಕೇಳಿದ್ದೆ. ಆದರೆ ಸಚಿವರು ನನಗೆ ಸಮಯ ನೀಡಲಿಲ್ಲ. ತಮ್ಮನನ್ನು ಕಳೆದುಕೊಂಡ ನನಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿ ಕಳಿಸಿದ್ದಾರೆ. ಅವರು ಹಾಗೆ ವರ್ತಿಸಿದ್ದು ನಮ್ಮನ್ನು ಕುಗ್ಗಿಸಿದೆ. 10 ನಿಮಿಷ ನಮಗಾಗಿ ಟೈಮ್ ನೀಡಿಲ್ಲ ಎನ್ನುವುದನ್ನು ಕೇಳಿ ಬೇಜಾರಾಗುತ್ತದೆ ಎಂದು ಶಿವಮೊಗ್ಗದಲ್ಲಿ ಕೊಲೆಯಾದ ಹಿಂದು ಸಂಘಟನೆ ಕಾರ್ಯಕರ್ತ ಹರ್ಷನ ಅಕ್ಕ ಅಶ್ವಿನಿ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಗೃಹ ಸಚಿವರನ್ನು ಭೇಟಿಯಾಗಲು ಹೋಗಿದ್ದ ಸಂದರ್ಭ ಅಶ್ವಿನಿಯನ್ನು ಬೈದು ಕಳಿಸಿದ ವಿಡಿಯೋ ವೈರಲ್ ಆಗಿತ್ತು. ತನಗಾದ ಅವಮಾನದ ಬಗ್ಗೆ ಅಶ್ವಿನಿ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ್ದು ಗೃಹ ಸಚಿವರ ನಡೆಯನ್ನು ಪ್ರಶ್ನಿಸಿದ್ದಾರೆ.



ಜೈಲಿನಲ್ಲಿ ಹಂತಕರಿಗೆ ರಾಜೋಪಚಾರ ನೀಡಿದ ಅಧಿಕಾರಿಗಳಿಗೆ ವರ್ಗಾವಣೆ ಬೇಡ. ಅವರನ್ನ ಕೆಲಸದಿಂದ ತೆಗೆಯಿರಿ ಎಂದು ಹೇಳಿದ್ದೆ. ವಿಡಿಯೋ ಮಾಡಲು ಬಿಟ್ಟ ಕಾರಾಗೃಹ ಪೊಲೀಸರಿಗೆ ಕೆಲಸದಿಂದ ವಜಾ ಮಾಡಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ನನಗೆ ಸ್ವಾರ್ಥ ಇಲ್ಲ, ನನ್ನ ತಮ್ಮನ ಸಾವಿಗೆ ನ್ಯಾಯ ಬೇಕು.


ರಾತ್ರಿ 8 ಗಂಟೆಗೆ ಒಬ್ಬ ಹೆಣ್ಣು ಮಗಳು ಸಚಿವರನ್ನು ಭೇಟಿಯಾಗಲು ಹೋದಾಗ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಜೈಲಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೀರಾ? ಇಲ್ಲವೇ ಕೆಲಸದಿಂದ ತೆಗೆಯುತ್ತೀರಾ ಅದನ್ನಾದರೂ ಹೇಳಿ ಎಂದು ಕೇಳಿದ್ದೆಯಷ್ಟೇ. ಗೃಹ ಸಚಿವರು ನಮಗೆ ಆಪ್ತರು ಎಂದು ಅದೇ ನಂಬಿಕೆ ಮೇಲೆ ನಾನೂ ಹೋಗಿದ್ದೆ. ನಮ್ಮ ಮನೆಗೆ ಬಂದಾಗ ನಿಮಗೆ ಕಷ್ಟ ಬಂದಾಗ ನನ್ನ ಬಳಿ ಬನ್ನಿ ಎಂದು ಹೇಳಿದ್ದರು. ಹೀಗಾಗಿ ನಾನು ಅವರ ಬಳಿ ಹೋಗಿದ್ದೆ.


ಆದರೆ ಸಚಿವರು ನನ್ನ ಬಳಿ ಹೆಣ್ಣು ಮಗಳು ಎಂದು ಸಮಾಧಾನದಿಂದ ಮಾತನಾಡುವುದಕ್ಕೂ ಹೋಗಲಿಲ್ಲ. ಗಟ್ಟಿ ದನಿಯಲ್ಲಿ ಮಾತನಾಡಿ ಕಳಿಸಿದ್ದಾರೆ. ಹಾಗಾದರೆ ನಮಗೆ ನ್ಯಾಯ ಸಿಗಲ್ವಾ..? ನಾವು ಹರ್ಷನ ಸಾವಿಗೆ ನ್ಯಾಯ ಕೇಳುತ್ತಿದ್ದೇವೆ ಅಷ್ಟೇ. ಜೈಲಿನಲ್ಲಿ ನಡೆದ ರಾಜಾತಿಥ್ಯ ಖಂಡಿಸಿ ನಾಳೆ ಪ್ರತಿಭಟನೆ ನಡೆಸಲಾಗುವುದು. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಿಂದು ಜಾಗರಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅಶ್ವಿನಿ ತಿಳಿಸಿದ್ದಾರೆ.
The sister of slain Bajrang Dal worker Harsha expressed her unhappiness over the harsh tone used by Karnataka Home Minister Araga Jnanendra, when she tried to speak to him on Tuesday in Bengaluru. The video of the Minister raising his voice at Ashwini, the elder sister of Harsha, went viral on social media, spurring many to criticise him for his behaviour. Addressing a press conference on Friday in Shivamogga, Ashwini said that she had tried to meet the Home Minister, after being assured that the Minister was aware she wanted to speak to him about the videos circulated of the accused who are in jail for Harsha’s killing.
09-04-26 09:30 pm
HK News Staffer
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
09-04-26 11:03 pm
HK News Staffer
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
10-04-26 12:35 pm
Dinesh Kumar, Mangaluru
Besant Evening College, BPL Cricket: ಬೆಸೆಂಟ್...
07-04-26 01:22 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm