ಬ್ರೇಕಿಂಗ್ ನ್ಯೂಸ್
18-01-22 09:21 pm HK Desk news ಕ್ರೈಂ
ಬೆಂಗಳೂರು, ಜ.18 : ಬಿಎಸ್ಸಿ ವಿದ್ಯಾರ್ಥಿಯೊಬ್ಬ ಇನ್ ಸ್ಟಾ ಗ್ರಾಮಿನಲ್ಲಿ ಯುವತಿ ಹೆಸರಲ್ಲಿ ಖಾತೆ ತೆರೆದು ತನ್ನನ್ನು ಸಲಿಂಗ ಕಾಮಿಯೆಂದು ಹೇಳಿಕೊಂಡಿದ್ದಲ್ಲದೆ ಸ್ನೇಹಿತೆಯರನ್ನು ಸಂಪಾದಿಸಿ, ಬಳಿಕ ಅವರನ್ನೇ ಬ್ಲಾಕ್ಮೇಲ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಫ್ರೇಸರ್ ಟೌನ್ ನಿವಾಸಿಯಾಗಿರುವ ಪ್ರಪಂಚ್ ನಾಚಪ್ಪ ಎಂಬ 21 ವರ್ಷದ ಯುವಕ, ಕಳೆದ ಸೆಪ್ಟಂಬರ್ ತಿಂಗಳಲ್ಲಿ ಪ್ರತೀಕ್ಷಾ ಬೋರಾ ಹೆಸರಲ್ಲಿ ಇನ್ ಸ್ಟಾ ಗ್ರಾಮಿನಲ್ಲಿ ಖಾತೆ ತೆರೆದಿದ್ದ. ತಾನೊಬ್ಬ ಸಲಿಂಗ ಕಾಮಿ ಯುವತಿಯಾಗಿದ್ದು, ಸೂಕ್ತ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ.
ಆನಂತರ ಕೆಲವು ಯುವತಿಯರ ಸ್ನೇಹ ಸಂಪಾದಿಸಿದ್ದು ಸೆಕ್ಸ್ ಚಾಟಿಂಗ್ ನಡೆಸಿದ್ದಾನೆ. ಈ ವೇಳೆ, ಯುವತಿಯರ ನಗ್ನ ಚಿತ್ರವನ್ನು ಕೇಳಿ ಪಡೆದಿದ್ದು, ಆ ಫೋಟೋ ಮುಂದಿಟ್ಟು ಬ್ಲಾಕ್ಮೇಲ್ ಆರಂಭಿಸಿದ್ದಾನೆ. ಹಣಕ್ಕಾಗಿ ಪೀಡಿಸಿದ್ದು, ಹಣ ಕೊಡದೇ ಇದ್ದರೆ ಫೋಟೋವನ್ನು ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ತನ್ನನ್ನು ಮಾಡೆಲ್ ಎಂದು ಹೇಳಿಕೊಂಡಿದ್ದು ನೀವು ಮಾಡೆಲ್ ಆಗುವುದಿದ್ದರೆ ಚಾನ್ಸ್ ಕೊಡಿಸುತ್ತೀನಿ ಎಂದು ಆಸೆ ತೋರಿಸಿದ್ದ. 30ರಿಂದ 40 ಮಂದಿಗೆ ಈ ರೀತಿ ಬ್ಲಾಕ್ಮೇಲ್ ಮಾಡಿದ್ದು ಕೆಲವು ಲಕ್ಷ ರೂಪಾಯಿ ದೋಚಿದ್ದಾನೆ.
ತನ್ನನ್ನು ಸಲಿಂಗಕಾಮಿ ಎಂದು ಹೇಳಿಕೊಂಡು ಮರುಳು ಮಾಡುತ್ತಿದ್ದ. ತನ್ನದೇ ನಗ್ನ ಚಿತ್ರವೆಂದು ಹೇಳಿ ಯಾವುದೋ ಫೋಟೋ ಕಳಿಸುತ್ತಿದ್ದ. ಆಮೂಲಕ ನಿನ್ನ ಚಿತ್ರ ಕಳಿಸುವಂತೆ ಪೀಡಿಸುತ್ತಿದ್ದ. ಪ್ರತಿ ಫೋಟೋಗೆ 4 ಸಾವಿರ ರೂ. ಕೊಡುತ್ತೇನೆಂದು ಹೇಳಿ ಆಮಿಷವೊಡ್ಡಿ ಫೋಟೋ ಪಡೆಯುತ್ತಿದ್ದ. ಆನಂತರ, ನಮ್ಮನ್ನೇ ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ಯುವತಿಯೊಬ್ಬಳು ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾಳೆ. ಈ ಬಗ್ಗೆ ದೂರು ಪಡೆದ ಪೊಲೀಸರು ಇನ್ ಸ್ಟಾ ಗ್ರಾಮ್ ಹಿನ್ನೆಲೆಯನ್ನು ಕೆದಕಿ ನೋಡಿದಾಗ ಬಿಎಸ್ಸಿ ವಿದ್ಯಾರ್ಥಿ ನಾಚಪ್ಪನ ನಿಜಬಣ್ಣ ಬಯಲಾಗಿತ್ತು.
ಸಂತ್ರಸ್ತ ಯುವತಿಯರು ಆತ ಹಣಕ್ಕಾಗಿ ಬ್ಲಾಕ್ಮೇಲ್ ಮಾಡಲು ಶುರು ಮಾಡಿದರೆ, ಆತನ ಖಾತೆಯನ್ನು ಬ್ಲಾಕ್ ಮಾಡುತ್ತಿದ್ದರು. ಆದರೆ ಆತ ಬೇರೊಂದು ಖಾತೆ ತೆರೆದು ಸಂಪರ್ಕಕ್ಕೆ ಬಂದು ಮತ್ತೆ ಬ್ಲಾಕ್ಮೇಲ್ ಮಾಡುತ್ತಿದ್ದ. ಹಣ ಕೊಡದೇ ಇದ್ದರೆ ಫೋಟೋವನ್ನು ಷೇರ್ ಮಾಡುತ್ತೇನೆಂದು ಬೆದರಿಸುತ್ತಿದ್ದ. ಪ್ರತಿ ಯುವತಿಯಿಂದ ಕನಿಷ್ಠ 5ರಿಂದ ಹತ್ತು ಸಾವಿರ ರೂ. ಹಣ ಪಡೆಯುತ್ತಿದ್ದ. ಕಾಲೇಜು ಯುವತಿಯರನ್ನೇ ಟಾರ್ಗೆಟ್ ಮಾಡಿ, ತನ್ನ ಜಾಲ ಬೀಸುತ್ತಿದ್ದ. ಬಲೆಗೆ ಬೀಳುತ್ತಿದ್ದ ಯುವತಿಯರನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.
21-year-old Nachappa used a fake Instagram account and pretended to be a lesbian. He would win the confidence of girls and ask them to share nude pictures. He then blackmailed them, threatening to upload the pictures.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm