ಬ್ರೇಕಿಂಗ್ ನ್ಯೂಸ್
24-07-21 12:55 pm Mangalore Correspondent ಕ್ರೈಂ
ಮಂಗಳೂರು, ಜುಲೈ 24: ತನ್ನನ್ನು ಸೈನಿಕನೆಂದು ನಂಬಿಸಿದ ವ್ಯಕ್ತಿಯೊಬ್ಬ ಮನೆ ಬಾಡಿಗೆ ಪಡೆಯುವ ನೆಪದಲ್ಲಿ ಸಂಪರ್ಕಿಸಿ, ಮನೆ ಮಾಲೀಕನಿಂದಲೇ ಲಕ್ಷಾಂತರ ರೂ. ಎಗರಿಸಿದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನ ಕುಳಾಯಿಯಲ್ಲಿ ಫ್ಲ್ಯಾಟ್ ಹೊಂದಿರುವ ವ್ಯಕ್ತಿಯೊಬ್ಬರು ಮ್ಯಾಜಿಕ್ ಬ್ರಿಕ್ ಎನ್ನುವ ವೆಬ್ಸೈಟ್ನಲ್ಲಿ ಫ್ಲಾಟ್ ಬಾಡಿಗೆ ನೀಡುವುದಾಗಿ ಜಾಹಿರಾತು ಹಾಕಿದ್ದರು. ಇದನ್ನು ನೋಡಿದ ಅಂಕಿತ್ ವಿಜಯ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಜು.20 ರಂದು ಕರೆ ಮಾಡಿದ್ದು ಸೈನಿಕ ವೃತ್ತಿಯಲ್ಲಿದ್ದು ಪ್ರಸ್ತುತ ಅಹಮದಾಬಾದ್ನಲ್ಲಿ ಕರ್ತವ್ಯದಲ್ಲಿದ್ದೇನೆ. ಈಗ ಮಂಗಳೂರಿಗೆ ವರ್ಗಾವಣೆಯಾಗಿದ್ದೇನೆ. ತನಗೆ ಕುಳಾಯಿಯಲ್ಲಿರುವ ಫ್ಲಾಟ್ ಬಾಡಿಗೆಗೆ ಬೇಕೆಂದು ತಿಳಿಸಿ ಮಿಲಿಟರಿ ಸಮವಸ್ತ್ರದಲ್ಲಿರುವ ತನ್ನ ಭಾವಚಿತ್ರ ಹಾಗೂ ಆಧಾರ್ ಕಾರ್ಡ್ ಅನ್ನು ವಾಟ್ಸಪ್ ಮಾಡಿದ್ದ. ಬಳಿಕ ಮನೆಯ ಫೋಟೊಗಳನ್ನು ಕಳುಹಿಸಿಕೊಡುವಂತೆ ಕೇಳಿದ್ದಾನೆ.
ಅದರಂತೆ ಫ್ಲಾಟ್ನ ಭಾವಚಿತ್ರವನ್ನು ಕಳುಹಿಸಿದ್ದು, ಜು.20ರಂದು ಆರೋಪಿ ಕರೆಮಾಡಿ ಮನೆಯವರಿಗೆ ಫ್ಲ್ಯಾಟ್ ಇಷ್ಟವಾಗಿದ್ದು ಫ್ಲಾಟ್ ಬಾಡಿಗೆಗೆ ನೀಡುವಂತೆ ತಿಳಿಸಿದ್ದಾನೆ. ತಿಂಗಳಿಗೆ 10 ಸಾವಿರ ರೂ. ಬಾಡಿಗೆ ಹಾಗೂ 25 ಸಾವಿರ ರೂ. ಡೆಪಾಸಿಡ್ ಬಗ್ಗೆ ತಿಳಿಸಿದ್ದರು. ಆರೋಪಿ ವ್ಯಕ್ತಿ ಮುಂಗಡ ಹಣವನ್ನು ಮೇಲಾಧಿಕಾರಿಯ ಮೂಲಕ ಪಾವತಿಸುವುದಾಗಿ ತಿಳಿಸಿ ಅಕೌಂಟ್ ಮಾಹಿತಿ ಪಡೆದಿದ್ದ.
ಬಳಿಕ ಆರೋಪಿ ಕಡೆಯಿಂದ ಫ್ಲ್ಯಾಟ್ ಮಾಲೀಕರಿಗೆ 50 ರೂ. ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ ಬಂದಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲಿ ಮನೆ ಮಾಲೀಕರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2,23,500 ರೂ. ಖಾಲಿಯಾಗಿದೆ. ಈ ಹಣವನ್ನು ಆರೋಪಿಯೇ ಆತನ ಖಾತೆಗೆ ವರ್ಗಾಯಿಸಿದ್ದಾನೆ ಎಂದು ಮನೆ ಮಾಲೀಕ ವ್ಯಕ್ತಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Flat house owner cheated in the name of Indian Army soldier lakhs of the amount lost case filed. A case has been registered at the cybercrime police station in Mangalore.
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
18-08-25 04:07 pm
Mangalore Correspondent
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am