ಬ್ರೇಕಿಂಗ್ ನ್ಯೂಸ್
25-03-21 05:48 pm Mangaluru correspondent ಕ್ರೈಂ
ಮಂಗಳೂರು, ಮಾ.25: ಒಂದು ಕಾಲದಲ್ಲಿ ರೌಡಿಸಂ ಮಾಡಿ, ಈಗ ಉದ್ಯಮಿ ಮತ್ತು ಇಂಟಕ್ ಕಾರ್ಮಿಕ ಸಂಘಟನೆಯ ಮೂಲಕ ಕಾಂಗ್ರೆಸ್ ಮುಖಂಡನಾಗಿ ಪರಿವರ್ತನೆಯಾಗಿರುವ ರಾಕೇಶ್ ಮಲ್ಲಿ ತನಗೆ ಜೀವ ಭಯ ಇದ್ದು ಪೊಲೀಸ್ ರಕ್ಷಣೆ ನೀಡುವಂತೆ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.
ದಿ. ಮುತ್ತಪ್ಪ ರೈ ಪುತ್ರರಿಂದ ಜೀವ ಭಯ ಇದೆ. ಅಲ್ಲದೆ, ಬೆಂಗಳೂರಿನ ರೌಡಿಗಳಾದ ಒಂಟೆ ರೋಹಿತ್ ಮತ್ತು ಸೈಲಂಟ್ ಸುನೀಲ ತನ್ನನ್ನು ಕೊಲ್ಲಲು ಸಂಚು ನಡೆಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯಿಂದ ಗನ್ ಮ್ಯಾನ್ ನೀಡಬೇಕೆಂದು ಕದ್ರಿ ಠಾಣೆಯಲ್ಲಿ ಅರ್ಜಿ ನೀಡಿದ್ದಾರೆ.
ರಾಕೇಶ್ ಮಲ್ಲಿ ದೂರು ನೀಡಿರುವ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ದೃಢಪಡಿಸಿದ್ದು ಗನ್ ಮ್ಯಾನ್ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆ ಮುತ್ತಪ್ಪ ರೈ ಜೊತೆಗೆ ಗುರುತಿಸಿಕೊಂಡಿದ್ದ ರಾಕೇಶ್ ಮಲ್ಲಿ, ರೈಯವರ ಕೊನೆಗಾಲದಲ್ಲಿ ಬೇರೆಯಾಗಿದ್ದರು. ಅಲ್ಲದೆ, ತಮ್ಮ ನಡುವೆ ನಡೆದಿರುವ ಭೂ ವ್ಯವಹಾರದಲ್ಲಿ ಮುತ್ತಪ್ಪ ರೈ ತನ್ನ ಜೊತೆ ಮುನಿಸಿಕೊಂಡಿದ್ದಾರೆ ಎಂದು ರಾಕೇಶ್ ಮಲ್ಲಿ ಹೇಳಿಕೊಂಡಿದ್ದರು.
ವರ್ಷದ ಹಿಂದೆ ಹಿಂದೆ ಮುತ್ತಪ್ಪ ರೈ ಅಸೌಖ್ಯದಿಂದ ಮೃತಪಟ್ಟಿದ್ದು ಅವರ ತೋಟ ಮನೆ ಮತ್ತು ವ್ಯವಹಾರವನ್ನು ಪುತ್ರರು ನೋಡಿಕೊಂಡಿದ್ದಾರೆ. ರಾಕಿ ಮತ್ತು ರಿಕ್ಕಿ ರೈ ಎಂಬ ಇಬ್ಬರು ಪುತ್ರರಿದ್ದು, ಅದರಲ್ಲಿ ಒಬ್ಬಾತ ವಿದೇಶದಲ್ಲಿದ್ದರೆ ರಿಕ್ಕಿ ಬೆಂಗಳೂರಿನಲ್ಲಿದ್ದುಕೊಂಡು ಹೊಟೇಲ್ ಇನ್ನಿತರ ವಹಿವಾಟು ನೋಡಿಕೊಳ್ಳುತ್ತಿದ್ದಾರೆ.
INTEC Rakesh Malli gets Life threat from Former Late Don Muthappa Rai son. Rakesh Malli seeks for Gun Man and also lodges complaint at the Kadri Police Station.
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
20-06-25 03:54 pm
Udupi Correspondent
ಆರೆಸ್ಸೆಸ್ ನಾಯಕರ ಮನೆಗಳಿಗೆ ಮಿಡ್ ನೈಟ್ ಪರಿಶೀಲನೆ ;...
20-06-25 02:59 pm
ಒಂದೇ ಮರ ತೆರವಿಗೆ ಸೂಚಿಸಿದ್ದ ಸೋಮೇಶ್ವರ ಪುರಸಭೆ ; ಐ...
19-06-25 10:08 pm
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
Mangalore Police, Sudheer Kumar Reddy: ಕೋಮು ಸ...
19-06-25 01:05 pm
20-06-25 02:04 pm
Mangalore Correspondent
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm