ಬ್ರೇಕಿಂಗ್ ನ್ಯೂಸ್
25-03-21 05:48 pm Mangaluru correspondent ಕ್ರೈಂ
ಮಂಗಳೂರು, ಮಾ.25: ಒಂದು ಕಾಲದಲ್ಲಿ ರೌಡಿಸಂ ಮಾಡಿ, ಈಗ ಉದ್ಯಮಿ ಮತ್ತು ಇಂಟಕ್ ಕಾರ್ಮಿಕ ಸಂಘಟನೆಯ ಮೂಲಕ ಕಾಂಗ್ರೆಸ್ ಮುಖಂಡನಾಗಿ ಪರಿವರ್ತನೆಯಾಗಿರುವ ರಾಕೇಶ್ ಮಲ್ಲಿ ತನಗೆ ಜೀವ ಭಯ ಇದ್ದು ಪೊಲೀಸ್ ರಕ್ಷಣೆ ನೀಡುವಂತೆ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.
ದಿ. ಮುತ್ತಪ್ಪ ರೈ ಪುತ್ರರಿಂದ ಜೀವ ಭಯ ಇದೆ. ಅಲ್ಲದೆ, ಬೆಂಗಳೂರಿನ ರೌಡಿಗಳಾದ ಒಂಟೆ ರೋಹಿತ್ ಮತ್ತು ಸೈಲಂಟ್ ಸುನೀಲ ತನ್ನನ್ನು ಕೊಲ್ಲಲು ಸಂಚು ನಡೆಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯಿಂದ ಗನ್ ಮ್ಯಾನ್ ನೀಡಬೇಕೆಂದು ಕದ್ರಿ ಠಾಣೆಯಲ್ಲಿ ಅರ್ಜಿ ನೀಡಿದ್ದಾರೆ.


ರಾಕೇಶ್ ಮಲ್ಲಿ ದೂರು ನೀಡಿರುವ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ದೃಢಪಡಿಸಿದ್ದು ಗನ್ ಮ್ಯಾನ್ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆ ಮುತ್ತಪ್ಪ ರೈ ಜೊತೆಗೆ ಗುರುತಿಸಿಕೊಂಡಿದ್ದ ರಾಕೇಶ್ ಮಲ್ಲಿ, ರೈಯವರ ಕೊನೆಗಾಲದಲ್ಲಿ ಬೇರೆಯಾಗಿದ್ದರು. ಅಲ್ಲದೆ, ತಮ್ಮ ನಡುವೆ ನಡೆದಿರುವ ಭೂ ವ್ಯವಹಾರದಲ್ಲಿ ಮುತ್ತಪ್ಪ ರೈ ತನ್ನ ಜೊತೆ ಮುನಿಸಿಕೊಂಡಿದ್ದಾರೆ ಎಂದು ರಾಕೇಶ್ ಮಲ್ಲಿ ಹೇಳಿಕೊಂಡಿದ್ದರು.
ವರ್ಷದ ಹಿಂದೆ ಹಿಂದೆ ಮುತ್ತಪ್ಪ ರೈ ಅಸೌಖ್ಯದಿಂದ ಮೃತಪಟ್ಟಿದ್ದು ಅವರ ತೋಟ ಮನೆ ಮತ್ತು ವ್ಯವಹಾರವನ್ನು ಪುತ್ರರು ನೋಡಿಕೊಂಡಿದ್ದಾರೆ. ರಾಕಿ ಮತ್ತು ರಿಕ್ಕಿ ರೈ ಎಂಬ ಇಬ್ಬರು ಪುತ್ರರಿದ್ದು, ಅದರಲ್ಲಿ ಒಬ್ಬಾತ ವಿದೇಶದಲ್ಲಿದ್ದರೆ ರಿಕ್ಕಿ ಬೆಂಗಳೂರಿನಲ್ಲಿದ್ದುಕೊಂಡು ಹೊಟೇಲ್ ಇನ್ನಿತರ ವಹಿವಾಟು ನೋಡಿಕೊಳ್ಳುತ್ತಿದ್ದಾರೆ.
INTEC Rakesh Malli gets Life threat from Former Late Don Muthappa Rai son. Rakesh Malli seeks for Gun Man and also lodges complaint at the Kadri Police Station.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm