ಬ್ರೇಕಿಂಗ್ ನ್ಯೂಸ್
20-10-25 10:51 pm Mangalore Correspondent ಕ್ರೈಂ
ಮಂಗಳೂರು, ಅ.20 : ಕೇಂದ್ರ ಸರಕಾರದ ಸಾಲದ ಯೋಜನೆಗಳಿಗೆ ಕನ್ನ ಹಾಕಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸೇರಿ ಹಣ ಗುಳುಂ ಮಾಡುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸುರತ್ಕಲ್ ನಲ್ಲಿ ಕಾರ್ಯಾಚರಿಸುತ್ತಿದ್ದ ಇಲೆಕ್ಟ್ರಾನಿಕ್ ಶಾಪ್ ಒಂದನ್ನು ಖರೀದಿಸುವ ನೆಪದಲ್ಲಿ ಸ್ವೋದ್ಯೋಗಕ್ಕಾಗಿ ಸಾಲದ ಯೋಜನೆಯಡಿ ಬರೋಬ್ಬರಿ 1.20 ಕೋಟಿ ಸಾಲ ಪಡೆದು ವಂಚಿಸಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸುರತ್ಕಲ್ ಬಳಿಯ ತಡಂಬೈಲ್ ನಲ್ಲಿ ನೂರ್ ಅಹ್ಮದ್ ಎಂಬವರ ಹೆಸರಲ್ಲಿದ್ದ ಇಲೆಕ್ಟ್ರೋ ವರ್ಲ್ಡ್ ಎನ್ನುವ ಹೆಸರಿನ ಶಾಪ್ ಒಂದನ್ನು ಖರೀದಿಸಲು ನಗರದ ಮಲ್ಲಿಕಟ್ಟೆಯ ಎಸ್ ಬಿಐ ಬ್ಯಾಂಕ್ ಶಾಖೆಯಿಂದ ಸಾಲ ಪಡೆಯಲಾಗಿದೆ. 2023ರ ಅಕ್ಟೋಬರ್ ತಿಂಗಳಲ್ಲಿ ಬೇನಾಮಿ ಕಂಪನಿಯೊಂದನ್ನು ಸೃಷ್ಟಿಸಿ, ವಿಟ್ಲ ಮೂಲದ ಹಮೀದ್ ಎಂಬವರ ಹೆಸರಿನಲ್ಲಿ ಹಳೆ ಶಾಪ್ ಖರೀದಿಸಲು 1.20 ಕೋಟಿ ಸಾಲ ಪಡೆಯಲಾಗಿತ್ತು.
ಆದರೆ ಶಾಪ್ ಖರೀದಿಸಿದ್ದಾಗಿ ತೋರಿಸಿ ಆನಂತರ ಅದನ್ನು ಪಂಪ್ವೆಲ್ ಪ್ರದೇಶಕ್ಕೆ ಶಿಫ್ಟ್ ಮಾಡಿದ್ದಾಗಿ ದಾಖಲೆಯಲ್ಲಿ ತೋರಿಸಲಾಗಿದೆ. ಆದರೆ ಪಂಪ್ವೆಲ್ ನಲ್ಲಿ ದಾಖಲೆಯಲ್ಲಿ ತೋರಿಸಿದ ಯಾವುದೇ ಇಲೆಕ್ಟ್ರಾನಿಕ್ ಶಾಪ್ ಹೊಂದಿಲ್ಲ ಎಂಬುದನ್ನು ಬ್ಯಾಂಕ್ ಅಧಿಕಾರಿಗಳು ಆಂತರಿಕ ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಅಲ್ಲದೆ, ಸಾಲ ಪಡೆದ ಹಣವನ್ನು ಹಮೀದ್, ಆತನ ಸೋದರ ಹುಸೇನ್, ಮುನೀರ್ ಕಡಮನ್ ಮತ್ತು ಮುನೀರ್ ಪತ್ನಿ ಅಸ್ಮಾ ಖಾತೆಗೆ ವರ್ಗಾಯಿಸಲಾಗಿದೆ. ಇದಲ್ಲದೆ, ವಿಟ್ಲ ಮೂಲದ ಅವಿನಾಶ್ ಎಂಬಾತನ ಖಾತೆಗೂ ಹಣ ವರ್ಗಾಯಿಸಿದ್ದು ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿಯೂ ಆಶಿಕ್ ಪಾತ್ರದ ಬಗ್ಗೆ ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದು, ಆತನ ಸೂಚನೆಯಂತೆ ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದ್ದಾರೆ.
ಇದರಂತೆ ಸದ್ಯಕ್ಕೆ ತನಿಖೆ ನಡೆಸುತ್ತಿರುವ ಮಂಗಳೂರು ಸಿಸಿಬಿ ಪೊಲೀಸರು ಆಶಿಕ್ ಬಂಧನಕ್ಕಾಗಿ ಕೋರ್ಟಿನಿಂದ ವಾರೆಂಟ್ ಪಡೆದಿದ್ದಾರೆ. ಆದರೆ ಆಶಿಕ್ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ಮಲ್ಲಿಕಟ್ಟೆ ಎಸ್ ಬಿಐ ಶಾಖೆಯಲ್ಲಿ 1.30 ಕೋಟಿ ಮತ್ತು 1.20 ಕೋಟಿ ಸಾಲ ಪಡೆದು ವಂಚಿಸಿರುವ ಬಗ್ಗೆ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ. ಎರಡು ಪ್ರಕರಣದಲ್ಲೂ ಬ್ಯಾಂಕಿನಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಆಗಿದ್ದ ಅಭಿಷೇಕ್ ನಂದಾ ಆರೋಪಿಗಳಿಗೆ ಸಹಕರಿಸಿದ್ದು, ಆಶಿಕ್ ಸೂಚನೆಯಂತೆ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗುತ್ತಿದೆ.
ಸದ್ಯಕ್ಕೆ ಮುನೀರ್ ಕಡಮನ್, ಹುಸೇನ್, ಆಸ್ಮಾ, ಅವಿನಾಶ್, ಅಭಿಷೇಕ್ ನಂದಾ ಬಂಧಿತರಾಗಿದ್ದಾರೆ. ಪ್ರಮುಖ ಆರೋಪಿ ಹಮೀದ್ ಬೆಂಗಳೂರಿನಲ್ಲಿದ್ದು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ. ಆಶಿಕ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಂದೇ ಬ್ಯಾಂಕಿನಲ್ಲಿ ಎಸಗಿರುವ ಎರಡು ಸಾಲದ ಪ್ರಕರಣಗಳನ್ನು ಸಿಸಿಬಿ ಪೊಲೀಸರ ಪ್ರತ್ಯೇಕ ತಂಡಗಳು ತನಿಖೆ ನಡೆಸುತ್ತಿದ್ದು ಮಹತ್ತರ ಮಾಹಿತಿಗಳನ್ನು ಕಲೆಹಾಕಿದೆ.
A major loan scam involving misuse of a Central Government self-employment scheme has surfaced, with an FIR registered at Kadri Police Station. A ₹1.20 crore loan was fraudulently availed in October 2023 under the pretext of buying an electronics shop named Electro World in Suratkal. The loan was sanctioned by SBI’s Mallikatte branch in the name of Hameed (Vittla native) using a benami company. The shop was claimed to be relocated to Pumpwell, but the SBI’s internal probe found no such shop exists there. Funds were later transferred to accounts belonging to Hameed, his brother Husein, Munir Kadampu, Munir’s wife Asma, and another accomplice, Avinash. Police have already arrested Munir, Husein, Asma, Avinash, and SBI Relationship Manager Abhishek Nanda. Abhishek is alleged to have acted on the directions of a key suspect, Ashiq, who is currently absconding.
20-10-25 06:58 pm
Bangalore Correspondent
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
20-10-25 08:34 pm
HK News Desk
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
20-10-25 10:28 pm
Mangalore Correspondent
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
20-10-25 10:51 pm
Mangalore Correspondent
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm