ಬ್ರೇಕಿಂಗ್ ನ್ಯೂಸ್
01-10-24 01:50 pm Mangalore Correspondent ಕ್ರೈಂ
ಮಂಗಳೂರು, ಅ.1: ಮಂಗಳೂರು ಏರ್ಪೋರ್ಟ್ ಭದ್ರತಾ ಸಿಬಂದಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬಜ್ಪೆಯ ಕೇಕ್ ಶಾಪ್ ಒಂದಕ್ಕೆ ಕರೆ ಮಾಡಿ, ನಾಲ್ಕು ಕೇಜಿ ಕೇಕ್ ಆರ್ಡರ್ ಮಾಡಿದ್ದಲ್ಲದೆ, ಗೂಗಲ್ ಪೇಯಲ್ಲಿ ಹೆಚ್ಚುವರಿ ಹಣ ಕಳುಹಿಸಿದ್ದಾಗಿ ಹೇಳಿ ಶಾಪ್ ಮಾಲಕರನ್ನೇ ಯಾಮಾರಿಸಲು ಯತ್ನಿಸಿದ ಘಟನೆ ನಡೆದಿದೆ.
ಮಂಗಳೂರು ವಿಮಾನ ನಿಲ್ದಾಣದ ಭದ್ರತೆ ನೋಡಿಕೊಳ್ಳುವ ಸಿಐಎಸ್ಎಫ್ ಸಿಬಂದಿಯೆಂದು ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಕೇಕ್ ಶಾಪ್ ಮಾಲಕರಿಗೆ ಕರೆ ಮಾಡಿ, ನಾಲ್ಕು ಕೇಜಿ ಕೇಕ್ ಬೇಕಾಗಿದೆ, ಎಷ್ಟು ಹಣ ಬೇಕಾಗುತ್ತದೆ ಎಂದು ಕೇಳಿದ್ದಾನೆ. 2800 ರೂ. ಆಗುತ್ತದೆ ಎಂದು ಕೇಕ್ ಶಾಪ್ ಕಡೆಯಿಂದ ಹೇಳಿದಾಗ, ಹಣವನ್ನು ಗೂಗಲ್ ಪೇ ಮೂಲಕ ಕಳಿಸುತ್ತೇನೆ. ಗೂಗಲ್ ಪೇ ನಂಬರ್ ಕೊಡಿ, ಕೇಕ್ ಪಾರ್ಸಲ್ ತರಲು ಹುಡುಗನನ್ನು ಕಳಿಸಿಕೊಡುತ್ತೇನೆ ಎಂದು ಹೇಳಿದ್ದಾನೆ. ಕೇಕ್ ಶಾಪ್ ಮಾಲಕರು ತನ್ನ ಪತ್ನಿಯ ಗೂಗಲ್ ಪೇ ನಂಬರನ್ನು ಕೊಟ್ಟು ಹಣ ಕಳಿಸುವಂತೆ ತಿಳಿಸಿದ್ದಾರೆ.
ಸ್ವಲ್ಪ ಹೊತ್ತಿನಲ್ಲಿ ಪತ್ನಿಯ ಮೊಬೈಲಿಗೆ 28 ಸಾವಿರ ರೂ. ಹಣ ಬಂದಿದ್ದಾಗಿ ಮೆಸೇಜ್ ಬಂದಿತ್ತು. ಇದರ ಬೆನ್ನಲ್ಲೇ ಅಪರಿಚಿತ ವ್ಯಕ್ತಿ ಕರೆ ಮಾಡಿ, 2800 ಬದಲಿಗೆ ತಪ್ಪಾಗಿ 28 ಸಾವಿರ ರೂ. ಹಾಕಿದ್ದಾಗಿ ತಿಳಿಸಿದ್ದು, ಉಳಿಕೆ ಹಣವನ್ನು ಪಾವತಿಸುವಂತೆ ಕೇಕ್ ಶಾಪ್ ಮಾಲಕರಿಗೆ ಕೇಳಿಕೊಂಡಿದ್ದ. ಪತ್ನಿಯಲ್ಲಿ ಕೇಳಿದರೆ, ಮೆಸೇಜ್ ಬಂದಿದೆ. ಆದರೆ ಹಣ ಕ್ರೆಡಿಟ್ ಆಗಿಲ್ಲ ಎಂದು ತಿಳಿಸಿದ್ದಾರೆ. ಚೆಕ್ ಮಾಡಿದಾಗ, ಅಪರಿಚಿತ ವ್ಯಕ್ತಿಯ ನಂಬರಿನಿಂದ ನೇರವಾಗಿ ಮೆಸೇಜ್ ಬಂದಿತ್ತು. ಬ್ಯಾಂಕಿನಿಂದ ಬಂದ ಮೆಸೇಜ್ ಅಲ್ಲ ಎಂದು ಪತ್ನಿ ಹೇಳಿದ್ದರು. ಕೇಕ್ ಶಾಪ್ ಮಾಲಕರು ಅಪರಿಚಿತ ವ್ಯಕ್ತಿ ಮತ್ತು ಪತ್ನಿಯ ಜೊತೆಗೆ ಕಾನ್ಫರೆನ್ಸ್ ಕರೆ ಮಾಡಿ, ಹಣದ ಬಗ್ಗೆ ಸ್ಪಷ್ಟನೆ ಕೇಳಿದರೂ ಆತ ಒಪ್ಪಲಿಲ್ಲ. ನನ್ನ ಮೆಡಿಸಿನ್ ಗೆ ಬೇಕಾಗಿದ್ದ ಹಣ. ದಯವಿಟ್ಟು ಉಳಿಕೆ ಹಣವನ್ನು ಹಿಂತಿರುಗಿಸುವಂತೆ ಅಪರಿಚಿತ ಕೇಳಿಕೊಂಡಿದ್ದಾನೆ.
ಇದರಿಂದ ವಿಚಲಿತರಾದ ಕೇಕ್ ಶಾಪ್ ಮಾಲಕರು, ಮೊಬೈಲಿಗೆ ನೇರವಾಗಿ ಮೆಸೇಜ್ ಮಾಡಿದ್ದನ್ನು ಪ್ರಸ್ತಾಪಿಸಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಏರ್ಪೋರ್ಟ್ ಸಿಬಂದಿಯಾದರೆ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ, ಅಷ್ಟರಲ್ಲಿ ಕರೆ ಕಟ್ ಮಾಡಿದ್ದಾನೆ. ಏರ್ಪೋರ್ಟ್ ಸಿಬಂದಿಯೆಂದು ಹೇಳಿ ಅಪರಿಚಿತರು ಕರೆ ಮಾಡಿ ಹಣ ಎಗರಿಸಲು ಮಾಡಿದ ಪ್ಲಾನ್ ಇದಾಗಿದ್ದು, ಅಂಗಡಿ ಮಾಲಕರನ್ನು ವಂಚಿಸಲೆತ್ನಿಸಿರುವುದು ಕಂಡುಬಂದಿದೆ. ಆನ್ಲೈನ್ ವಂಚಕರು ಹೆಚ್ಚುವರಿ ಹಣ ಕಳಿಸಿದ್ದಾಗಿ ಹೇಳಿ ಹೊಸ ರೀತಿಯ ವಂಚನಾ ಜಾಲದಲ್ಲಿ ತೊಡಗಿದ್ದು ಹಣದ ವಹಿವಾಟು ಹೆಚ್ಚು ಮಾಡುವ ಅಂಗಡಿ, ವ್ಯಾಪಾರಸ್ಥರನ್ನೇ ಟಾರ್ಗೆಟ್ ಮಾಡಿರುವಂತಿದೆ. ಕರಾವಳಿಯಲ್ಲಿ ಹಲವರಿಗೆ ಇದೇ ರೀತಿ ಹಣ ಕಳಿಸಿದ್ದಾಗಿ ಯಾಮಾರಿಸುವ ಪ್ರಕರಣ ನಡೆದಿದ್ದು ಸಣ್ಣ ಮೊತ್ತ ಕಳಕೊಂಡವರು ಪೊಲೀಸ್ ದೂರು ಕೊಡಲು ಮುಂದೆ ಬರುತ್ತಿಲ್ಲ. ತಪ್ಪಾಗಿ ಹಣ ಕಳಿಸಿದ್ದೇನೆ ಎಂದು ಮೆಸೇಜ್ ಹಾಕಿ, ಹಣ ಹಿಂತಿರುಗಿಸುವಂತೆ ಹೇಳಿ ಜನಸಾಮಾನ್ಯರನ್ನು ಯಾಮಾರಿಸುತ್ತಿದ್ದಾರೆ.
Mangalore Fraud in the name of Cisf staff through cake order. Fraudsters are scamming people in the name of online transaction.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm