ಬ್ರೇಕಿಂಗ್ ನ್ಯೂಸ್
01-10-24 01:50 pm Mangalore Correspondent ಕ್ರೈಂ
ಮಂಗಳೂರು, ಅ.1: ಮಂಗಳೂರು ಏರ್ಪೋರ್ಟ್ ಭದ್ರತಾ ಸಿಬಂದಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬಜ್ಪೆಯ ಕೇಕ್ ಶಾಪ್ ಒಂದಕ್ಕೆ ಕರೆ ಮಾಡಿ, ನಾಲ್ಕು ಕೇಜಿ ಕೇಕ್ ಆರ್ಡರ್ ಮಾಡಿದ್ದಲ್ಲದೆ, ಗೂಗಲ್ ಪೇಯಲ್ಲಿ ಹೆಚ್ಚುವರಿ ಹಣ ಕಳುಹಿಸಿದ್ದಾಗಿ ಹೇಳಿ ಶಾಪ್ ಮಾಲಕರನ್ನೇ ಯಾಮಾರಿಸಲು ಯತ್ನಿಸಿದ ಘಟನೆ ನಡೆದಿದೆ.
ಮಂಗಳೂರು ವಿಮಾನ ನಿಲ್ದಾಣದ ಭದ್ರತೆ ನೋಡಿಕೊಳ್ಳುವ ಸಿಐಎಸ್ಎಫ್ ಸಿಬಂದಿಯೆಂದು ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಕೇಕ್ ಶಾಪ್ ಮಾಲಕರಿಗೆ ಕರೆ ಮಾಡಿ, ನಾಲ್ಕು ಕೇಜಿ ಕೇಕ್ ಬೇಕಾಗಿದೆ, ಎಷ್ಟು ಹಣ ಬೇಕಾಗುತ್ತದೆ ಎಂದು ಕೇಳಿದ್ದಾನೆ. 2800 ರೂ. ಆಗುತ್ತದೆ ಎಂದು ಕೇಕ್ ಶಾಪ್ ಕಡೆಯಿಂದ ಹೇಳಿದಾಗ, ಹಣವನ್ನು ಗೂಗಲ್ ಪೇ ಮೂಲಕ ಕಳಿಸುತ್ತೇನೆ. ಗೂಗಲ್ ಪೇ ನಂಬರ್ ಕೊಡಿ, ಕೇಕ್ ಪಾರ್ಸಲ್ ತರಲು ಹುಡುಗನನ್ನು ಕಳಿಸಿಕೊಡುತ್ತೇನೆ ಎಂದು ಹೇಳಿದ್ದಾನೆ. ಕೇಕ್ ಶಾಪ್ ಮಾಲಕರು ತನ್ನ ಪತ್ನಿಯ ಗೂಗಲ್ ಪೇ ನಂಬರನ್ನು ಕೊಟ್ಟು ಹಣ ಕಳಿಸುವಂತೆ ತಿಳಿಸಿದ್ದಾರೆ.
ಸ್ವಲ್ಪ ಹೊತ್ತಿನಲ್ಲಿ ಪತ್ನಿಯ ಮೊಬೈಲಿಗೆ 28 ಸಾವಿರ ರೂ. ಹಣ ಬಂದಿದ್ದಾಗಿ ಮೆಸೇಜ್ ಬಂದಿತ್ತು. ಇದರ ಬೆನ್ನಲ್ಲೇ ಅಪರಿಚಿತ ವ್ಯಕ್ತಿ ಕರೆ ಮಾಡಿ, 2800 ಬದಲಿಗೆ ತಪ್ಪಾಗಿ 28 ಸಾವಿರ ರೂ. ಹಾಕಿದ್ದಾಗಿ ತಿಳಿಸಿದ್ದು, ಉಳಿಕೆ ಹಣವನ್ನು ಪಾವತಿಸುವಂತೆ ಕೇಕ್ ಶಾಪ್ ಮಾಲಕರಿಗೆ ಕೇಳಿಕೊಂಡಿದ್ದ. ಪತ್ನಿಯಲ್ಲಿ ಕೇಳಿದರೆ, ಮೆಸೇಜ್ ಬಂದಿದೆ. ಆದರೆ ಹಣ ಕ್ರೆಡಿಟ್ ಆಗಿಲ್ಲ ಎಂದು ತಿಳಿಸಿದ್ದಾರೆ. ಚೆಕ್ ಮಾಡಿದಾಗ, ಅಪರಿಚಿತ ವ್ಯಕ್ತಿಯ ನಂಬರಿನಿಂದ ನೇರವಾಗಿ ಮೆಸೇಜ್ ಬಂದಿತ್ತು. ಬ್ಯಾಂಕಿನಿಂದ ಬಂದ ಮೆಸೇಜ್ ಅಲ್ಲ ಎಂದು ಪತ್ನಿ ಹೇಳಿದ್ದರು. ಕೇಕ್ ಶಾಪ್ ಮಾಲಕರು ಅಪರಿಚಿತ ವ್ಯಕ್ತಿ ಮತ್ತು ಪತ್ನಿಯ ಜೊತೆಗೆ ಕಾನ್ಫರೆನ್ಸ್ ಕರೆ ಮಾಡಿ, ಹಣದ ಬಗ್ಗೆ ಸ್ಪಷ್ಟನೆ ಕೇಳಿದರೂ ಆತ ಒಪ್ಪಲಿಲ್ಲ. ನನ್ನ ಮೆಡಿಸಿನ್ ಗೆ ಬೇಕಾಗಿದ್ದ ಹಣ. ದಯವಿಟ್ಟು ಉಳಿಕೆ ಹಣವನ್ನು ಹಿಂತಿರುಗಿಸುವಂತೆ ಅಪರಿಚಿತ ಕೇಳಿಕೊಂಡಿದ್ದಾನೆ.
ಇದರಿಂದ ವಿಚಲಿತರಾದ ಕೇಕ್ ಶಾಪ್ ಮಾಲಕರು, ಮೊಬೈಲಿಗೆ ನೇರವಾಗಿ ಮೆಸೇಜ್ ಮಾಡಿದ್ದನ್ನು ಪ್ರಸ್ತಾಪಿಸಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಏರ್ಪೋರ್ಟ್ ಸಿಬಂದಿಯಾದರೆ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ, ಅಷ್ಟರಲ್ಲಿ ಕರೆ ಕಟ್ ಮಾಡಿದ್ದಾನೆ. ಏರ್ಪೋರ್ಟ್ ಸಿಬಂದಿಯೆಂದು ಹೇಳಿ ಅಪರಿಚಿತರು ಕರೆ ಮಾಡಿ ಹಣ ಎಗರಿಸಲು ಮಾಡಿದ ಪ್ಲಾನ್ ಇದಾಗಿದ್ದು, ಅಂಗಡಿ ಮಾಲಕರನ್ನು ವಂಚಿಸಲೆತ್ನಿಸಿರುವುದು ಕಂಡುಬಂದಿದೆ. ಆನ್ಲೈನ್ ವಂಚಕರು ಹೆಚ್ಚುವರಿ ಹಣ ಕಳಿಸಿದ್ದಾಗಿ ಹೇಳಿ ಹೊಸ ರೀತಿಯ ವಂಚನಾ ಜಾಲದಲ್ಲಿ ತೊಡಗಿದ್ದು ಹಣದ ವಹಿವಾಟು ಹೆಚ್ಚು ಮಾಡುವ ಅಂಗಡಿ, ವ್ಯಾಪಾರಸ್ಥರನ್ನೇ ಟಾರ್ಗೆಟ್ ಮಾಡಿರುವಂತಿದೆ. ಕರಾವಳಿಯಲ್ಲಿ ಹಲವರಿಗೆ ಇದೇ ರೀತಿ ಹಣ ಕಳಿಸಿದ್ದಾಗಿ ಯಾಮಾರಿಸುವ ಪ್ರಕರಣ ನಡೆದಿದ್ದು ಸಣ್ಣ ಮೊತ್ತ ಕಳಕೊಂಡವರು ಪೊಲೀಸ್ ದೂರು ಕೊಡಲು ಮುಂದೆ ಬರುತ್ತಿಲ್ಲ. ತಪ್ಪಾಗಿ ಹಣ ಕಳಿಸಿದ್ದೇನೆ ಎಂದು ಮೆಸೇಜ್ ಹಾಕಿ, ಹಣ ಹಿಂತಿರುಗಿಸುವಂತೆ ಹೇಳಿ ಜನಸಾಮಾನ್ಯರನ್ನು ಯಾಮಾರಿಸುತ್ತಿದ್ದಾರೆ.
Mangalore Fraud in the name of Cisf staff through cake order. Fraudsters are scamming people in the name of online transaction.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am