ಬ್ರೇಕಿಂಗ್ ನ್ಯೂಸ್
30-01-24 12:49 pm Bangalore Correspondent ಕ್ರೈಂ
ಬೆಂಗಳೂರು, ಜ 30: ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷ-ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಸಂಧ್ಯಾ ಪವಿತ್ರಾ ನಾಗರಾಜ್ ಎಂಬವರ ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಸಂಧ್ಯಾ ಅವರು ಫೇಸ್ ಬುಕ್ನಲ್ಲಿ ಪರಿಚಯ ಮಾಡಿಕೊಂಡು, ತಾನು ಕಾಂಗ್ರೆಸ್ ಪಕ್ಷದ ಯುವ ನಾಯಕಿ ಎಂದು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಲಕ್ಷ ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎಂದು ವೀಣಾ ಎಂಬ ಯುವತಿ ದೂರು ದಾಖಲು ಮಾಡಿದ್ದಾರೆ.

ಬೆಂಗಳೂರು ಟು ಯಾದಗಿರಿ ವಂಚನೆ ಜಾಲ ;
ದೂರು ನೀಡಿರುವ ಯುವತಿ ಮಾತ್ರವಲ್ಲದೇ ಇನ್ನು ಹತ್ತಾರು ಜನರಿಗೆ ಕೆಲಸ ಕೊಡಿಸುತ್ತೇನೆ ಎಂದು ಹಣ ಪೀಕಿ ವಂಚನೆ ಮಾಡಿರುವ ಆರೋಪ ಸಂಧ್ಯಾ ವಿರುದ್ಧ ಕೇಳಿ ಬಂದಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ಯಾದಗಿರಿವರೆಗೂ ಸಂಧ್ಯಾ ವಂಚನೆ ಜಾಲ ಹರಡಿದೆ ಎಂಬ ಆರೋಪ ಎದುರಾಗಿದೆ.
ಎಂಎಸ್ ಬಿಲ್ಡಿಂಗ್ನಲ್ಲಿ ಕೆಲಸ ಕೊಡಿಸೋದಾಗಿ ವಂಚನೆ
ಬೆಂಗಳೂರಿನ ಮಹಿಳೆ ಮತ್ತು ಯಾದಗಿರಿಯ ಯುವಕನಿಗೂ ಯುವ ಕಾಂಗ್ರೆಸ್ ಎಂದು ಹೇಳಿ ಕೊಂಡು ಲಕ್ಷಾಂತರ ಹಣ ಪಡೆದು ವಂಚನೆ ಮಾಡಿದ್ದರಂತೆ. ಈ ಸಂಬಂಧ ಬೆಂಗಳೂರಿನ ವೀಣಾ ಅವರು ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2021ರಲ್ಲಿ ಎಂ.ಎಸ್ ಬಿಲ್ಡಿಂಗ್ ನಲ್ಲಿ ಕೆಲಸ ಕೊಡಿಸುವುದಾಗಿ 20 ಲಕ್ಷ ರೂಪಾಯಿಗಳನ್ನು ಆರೋಪಿ ಸಂಧ್ಯಾ ಪಡೆದುಕೊಂಡಿದ್ದರಂತೆ. ಆದರೆ 3 ವರ್ಷ ಆದರೂ ಕೆಲಸ ಕೊಡಿಸಲಿಲ್ಲ, ಹಣವನ್ನೂ ವಾಪಸ್ ನೀಡಿಲ್ಲ ಎಂದು ವೀಣಾ ಆರೋಪಿಸಿದ್ದಾರೆ.
ಯಾದಗಿರಿ ಯುವಕನಿಂದ ವಿಡಿಯೋ
ಇನ್ನೂ, ಯಾದಗಿರಿಗೆ ಸೇರಿದ ಯುವಕ ಚಂದ್ರ ಎಂಬಾತನಿಗೆ ಕೆಲಸ ಕೊಡಿಸುವುದಾಗಿ ಲಕ್ಷ ಲಕ್ಷ ಹಣ ಪಡೆದು ಆರೋಪಿ ಸಂಧ್ಯಾ ವಂಚನೆ ಮಾಡಿದ್ದರಂತೆ. ಸದ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಚಂದು, ತನ್ನ ಹಣ ತನಗೆ ವಾಪಸ್ ನೀಡಿ ಎಂದು ವಿಡಿಯೋ ಮಾಡಿ ಗೋಳಿಟ್ಟಿದ್ದಾರೆ. ಮನೆಯಲ್ಲಿ ಕಷ್ಟ ಇದ್ದು, ಅನಾರೋಗ್ಯ ಪೀಡಿತನಾಗಿ ಆಸ್ಪತ್ರೆ ಖರ್ಚಿಗೆ ಹಣ ಬೇಕಿದೆ ಎಂದು ಯುವಕ ಚಂದು ವಿಡಿಯೋದಲ್ಲಿ ಅಂಗಲಾಚುತ್ತಿರುವುದನ್ನು ಕಾಣಬಹುದಾಗಿದೆ.
Congress member Sandhya Pavithra Nagaraj cheats many by Promising them of job offers by showing her pictures with cm Siddaramaiah and Dk Shivakumar. A case has been filed aginst her in Bangalore.
09-02-26 07:20 pm
Bangalore Correspondent
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
10-02-26 07:31 pm
HK News Desk
ಅಡೂರು ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು...
10-02-26 02:15 pm
ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಕೈದಿ ಫರೀದಾ...
10-02-26 11:44 am
ಕೆನಡಾದಲ್ಲಿ ಗುಂಡಿಟ್ಟು ಕನ್ನಡಿಗ ಸಾಫ್ಟ್ವೇರ್ ಇಂಜಿ...
09-02-26 10:25 pm
ಜಾಗತಿಕ ಷೇರು ಮಾರುಕಟ್ಟೆಯಲ್ಲಿ 'ಆಂಥ್ರೋಪಿಕ್' AI ಬಿ...
09-02-26 12:27 pm
10-02-26 11:03 pm
Mangalore Correspondent
Mangaore, Marriage Fraud: ಹಲವಾರು ಹೆಂಡಿರ ಮುದ್ದ...
10-02-26 08:27 pm
Oman Accident: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು...
09-02-26 11:20 pm
Mangalore Accident, Bus: ನಂತೂರಿನಲ್ಲಿ ಅಪಘಾತಕ್ಕ...
09-02-26 08:02 pm
ಕೆಪಿಟಿ ಜಂಕ್ಷನ್ ಬಳಿಯ ಹೆದ್ದಾರಿ ಡಿವೈಡರ್ ಮುಚ್ಚಿದ್...
09-02-26 02:50 pm
10-02-26 09:05 pm
Bangalore Correspondent
Peter Caddy, Arrest: ಉದ್ಯಮಿಗಳಿಗೆ ಸಾಲ ಕೊಡಿಸುವು...
10-02-26 04:38 pm
Belthangady Fake Kidnap: ಕಾಲೇಜು ವಿದ್ಯಾರ್ಥಿನಿ...
10-02-26 10:59 am
ಜಾಲತಾಣದಲ್ಲೇ ಪಡ್ಡೆ ಹುಡುಗರಿಗೆ ಬಲೆ, ಖತರ್ನಾಕ್ ಪ್...
09-02-26 02:04 pm
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am