ಬ್ರೇಕಿಂಗ್ ನ್ಯೂಸ್
14-12-23 07:05 pm Mangalore Correspondent ಕ್ರೈಂ
ಉಳ್ಳಾಲ, ಡಿ.14: ತಂಗಿಯ ಅನುಕೂಲಕ್ಕಾಗಿ ಮಂಗಳೂರಿನ ಕಾವೂರಿನ ಬಾಡಿಗೆ ಮನೆಗೆ ಕುಟುಂಬ ಸಮೇತ ಸ್ಥಳಾಂತರಗೊಳ್ಳಲು ಸಿದ್ಧತೆಯಲ್ಲಿದ್ದ ಕೊಲ್ಯ ನಿವಾಸಿ ವರುಣ್ ಗಟ್ಟಿ ನಿನ್ನೆ ರಾತ್ರಿ ದಾರುಣವಾಗಿ ಕೊಲೆಯಾಗಿದ್ದು ಕೊಲೆ ಆರೋಪಿಗಳನ್ನ ಉಳ್ಳಾಲ ಪೊಲೀಸರು ಕ್ಷಿಪ್ರವಾಗಿ ಬಂಧಿಸಿದ್ದಾರೆ.
ವರುಣ್ ಗೆ ಇರಿದು ಕೊಲೆ ಮಾಡಿದ ಕೊಲ್ಯ ಸಾರಸ್ವತ ಕಾಲನಿ ನಿವಾಸಿ ಸೂರಜ್ ಮತ್ತು ಆತನೊಂದಿಗಿದ್ದ ಮಾಜಿ ಗ್ರಾ.ಪಂ ಸದಸ್ಯ ರವಿರಾಜ್ ಎಂಬವರನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ಸುಮಾರು 10.45ರ ವೇಳೆಗೆ ಕೊಲ್ಯದ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆಯಲ್ಲಿ ಸೂರಜ್ ಮತ್ತು ರವಿರಾಜ್ ಎಂಬವರು ಬಿಯರ್ ಕುಡಿದು ಬಾಟಲಿಯನ್ನ ಶಾಲಾ ಆವರಣ ಗೋಡೆಗೆ ಎಸೆದಿದ್ದರೆನ್ನಲಾಗಿದೆ. ಈ ವೇಳೆ ಅಲ್ಲೇ ಸಮೀಪದ ಬಾಡಿಗೆ ಮನೆ ನಿವಾಸಿ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಆವರಣ ಗೋಡೆಗೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಇತ್ತಂಡಗಳ ನಡುವೆ ಗಲಾಟೆ ನಡೆದಿದ್ದು ಸೂರಜ್ ಏಕಾಏಕಿ ವರುಣ್ ನ ಎಡ ಪಕ್ಕೆಲುಬು ಮತ್ತು ಎದೆ ಭಾಗಕ್ಕೆ ಹರಿತವಾದ ಆಯುಧದಿಂದ ಇರಿದಿದ್ದಾನೆ. ಒಂದೆರಡು ಇರಿತಕ್ಕೆ ಗಂಭೀರ ಗಾಯಗೊಂಡ ವರುಣ್ ಸಮೀಪದ ತನ್ನ ಮನೆ ಕಡೆ ಹೆಜ್ಜೆ ಹಾಕಿದ್ದು ರಸ್ತೆಯುದ್ದಕ್ಕೂ ರಕ್ತ ಚೆಲ್ಲಿದೆ. ಬಳಿಕ ಆಸ್ಪತ್ರೆಯಲ್ಲಿ ವರುಣ್ ಕೊನೆಯುಸಿರೆಳೆದಿದ್ದಾನೆ. ಒಂದೆರಡು ಇರಿತಕ್ಕೆ ವರುಣ್ ಸಾವುಗೀಡಾಗಲು ಆರೋಪಿ ಸೂರಜ್ ಅದ್ಯಾವ ಆಯುಧ ಬಳಸಿದ್ದಾನೆ ಎಂಬ ಬಗ್ಗೆ ಸಂಶಯಗಳಿವೆ. ಕೋಳಿ ಅಂಕದಲ್ಲಿ ಕೋಳಿಗಳ ಕಾಲಿಗೆ ಕಟ್ಟುವ ಹರಿತವಾದ ಬಾಲ್ (ಸಣ್ಣ ಚೂರಿ) ಬಳಸಿದ್ದ ಎನ್ನುವ ಮಾಹಿತಿಯೂ ಕೇಳಿಬರುತ್ತಿದೆ. ಪೊಲೀಸರು ಇನ್ನಷ್ಟೆ ಕೊಲೆಗೆ ಬಳಸಿದ್ದ ಆಯುಧವನ್ನ ದಸ್ತಗಿರಿ ಮಾಡಬೇಕಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಕಮೀಷನರ್ ಅನುಪಮ್ ಅಗರ್ ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮಹಜರು ನಡೆಸುವ ಸಲುವಾಗಿ ದಿನವಿಡೀ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದ್ದು ಜಾಯ್ ಲ್ಯಾಂಡ್ ಶಾಲಾ ಮಕ್ಕಳಿಗೂ ಶಾಲಾಡಳಿತ ರಜೆ ಘೋಷಿಸಿತ್ತು. ಸಂಜೆ ವೇಳೆ ಮೃತ ವರುಣ್ ನ ಮೃತದೇಹದ ಅಂತ್ಯಕ್ರಿಯೆ ನಡೆದಿದೆ.
ನಾಳೆಯೇ ಮನೆ ಬದಲಿಸಲಿದ್ದರು !
ಕೊಲ್ಯ ಜಾಯ್ ಲ್ಯಾಂಡ್ ಶಾಲೆ ಬಳಿಯ ಬಾಡಿಗೆ ಮನೆ ನಿವಾಸಿಗಳಾದ ಬಾಲಕೃಷ್ಣ ಗಟ್ಟಿ, ಸುಮಿತ್ರ ದಂಪತಿಯ ಮೂವರು ಮಕ್ಕಳಲ್ಲಿ ಮೃತ ವರುಣ್ ಮನೆಯ ಹಿರಿ ಮಗನಾಗಿದ್ದು ಮೂಡಾಡಲ್ಲಿ ಕಮೀಷನರ್ ಅವರ ವಾಹನ ಚಾಲಕನಾಗಿದ್ದ. ವರುಣ್ ತಂಗಿ ವರ್ಷಾ ಮಂಗಳೂರು ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದು ಆಕೆಯ ಅನುಕೂಲಕ್ಕಾಗಿ ನಾಳೆ (ಡಿ.15) ಶುಕ್ರವಾರ ಕಾವೂರಿನ ನೂತನ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲು ಕುಟುಂಬ ಸಿದ್ಧತೆ ನಡೆಸಿತ್ತು. ಆದರೆ ಮನೆಮಗನ ಅಕಾಲಿಕ ಮರಣವು ಕುಟುಂಬವನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ.
Mangalore Ullal murder near school, two arrested over beer bootle. Police commissioner Agarwal visited the spot and spoke to the family.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm