ಬ್ರೇಕಿಂಗ್ ನ್ಯೂಸ್
26-11-23 06:47 pm Mangaluru Correspondent ಕ್ರೈಂ
ಉಳ್ಳಾಲ, ನ.26: ವನ್ ಗ್ರಾಮ್ ಗೋಲ್ಡ್ ಆಭರಣ ಧರಿಸಿ ನಿತಿನ್ ಶೆಟ್ಟಿ ಹೆಸರಲ್ಲಿ ನಗರದ ಹಲವು ಕಡೆಗಳಲ್ಲಿ ಅಮಾಯಕರಿಗೆ ವಂಚಿಸುತ್ತಿರುವ ಶೋಕಿಲಾಲ ಗೂಡ್ಸ್ ಮುನೀರ ಓಎಲ್ ಎಕ್ಸ್ ನಲ್ಲೂ ಮಹಿಳೆಯ ಹೆಸರಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯೋರ್ವನ ಫೋಟೊ ಕ್ಯಾಮೆರಾ ಖರೀದಿಸಿ ಹಣ ಕೊಡದೆ ಪರಾರಿಯಾಗಿದ್ದು ಈ ಬಗ್ಗೆ ವಿದ್ಯಾರ್ಥಿ ಕದ್ರಿ ಠಾಣೆಗೆ ದೂರು ನೀಡಿದ್ದರೂ ಪೊಲೀಸರ ಅಸಡ್ಡೆಯಿಂದ ಮುನೀರ ಈಗಲೂ ವಂಚನೆ ಕೃತ್ಯ ಮುಂದುವರಿಸಿದ ವಿಚಾರ ತಿಳಿದುಬಂದಿದೆ.
ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಸೃಜನ್ ಆಳ್ವ ಎಂಬವರು ಓಎಲ್ ಎಕ್ಸ್ ಆಪಲ್ಲಿ ತನ್ನ ಕೆನನ್ ಕ್ಯಾಮೆರಾ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದರು.
+91 97392 09819, 088846 99575 ಸಂಖ್ಯೆಗಳಲ್ಲಿ ಮೊಬೈಲ್ ಕರೆ ಮಾಡಿದ ಮಹಿಳೆಯೋರ್ವಳು ತನಗೆ ಕ್ಯಾಮೆರಾ ಬೇಕೆಂದು ಹೇಳಿ ಸೃಜನ್ ಅವರನ್ನ ಅಕ್ಟೋಬರ್ 24 ರಂದು ಕಂಕನಾಡಿಗೆ ಬರುವಂತೆ ಹೇಳಿದ್ದಾಳೆ.
ಮಹಿಳೆಯ ಮಾತು ನಂಬಿ ಕಂಕನಾಡಿಗೆ ಬಂದ ಸೃಜನ್ ಗೆ ಬೈಕಲ್ಲಿ ಬಂದ ಆಭರಣಧಾರಿ ವ್ಯಕ್ತಿ ತಾನು ನಿತಿನ್ ಶೆಟ್ಟಿ ಎಂದು ಪರಿಚಯಿಸಿದ್ದು ಬೈಕ್ ಸಹಸವಾರೆ ಬುರ್ಖಾಧಾರಿ ಮಹಿಳೆ ಸೃಜನ್ ಕೈಯಿಂದ ಕ್ಯಾಮೆರಾ ಇಸ್ಕೊಂಡ ತಕ್ಷಣ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದ. ಸುಮಾರು 50,000 ರೂಪಾಯಿ ಮಾರುಕಟ್ಟೆ ಮೌಲ್ಯದ ಕ್ಯಾಮರದ ಹಣ ಸಿಗದೆ ಕಂಗಾಲಾದ ಸೃಜನ್ ತಕ್ಷಣ ಕದ್ರಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸೃಜನ್ ದೂರಲ್ಲಿ ನೀಡಿದ ಮೊಬೈಲ್ ನಂಬರ್ ನೋಡಿದ ಕ್ಷಣದಲ್ಲೇ ಪೊಲೀಸರು ಇದು ಗೂಡ್ಸ್ ಮುನೀರನೆಂದು ಹೇಳಿ ಕೈ ತೊಳೆದರೇ ಹೊರತು ಕದೀಮನನ್ನ ಹಿಡಿಯುವ ಗೋಜಿಗೇ ಹೋಗಿಲ್ಲ.


ಪರಿಣಾಮ ಅದೇ ಖದೀಮ ಕಳೆದ ನವೆಂಬರ್ 13 ರಂದು ಕುತ್ತಾರಿನ "ಸುಧಿ ಕಲೆಕ್ಷನ್ಸ್" ಎಂಬ ಮೊಬೈಲ್ ಮಳಿಗೆಯಲ್ಲೂ ಮೊಬೈಲ್ ಖರೀದಿಸಿ ಗೂಗಲ್ ಪೇ ಮಾಡಲು ತನ್ನ ಮೊಬೈಲ್ ಸ್ವಿಚ್ ಆಫ್ ಎಂದು ಬೋಂಗು ಬಿಟ್ಟು ಅಂಗಡಿ ಮಾಲೀಕ ದೀಪಕ್ ಅವರಿಗೆ ವಂಚಿಸಿದ್ದ.ಈ ಬಗ್ಗೆ ಉಳ್ಳಾಲ ಠಾಣೆಯಲ್ಲೂ ಮುನೀರನ ವಿರುದ್ಧ ದೂರು ದಾಖಲಾಗಿದೆ.
ಕಳೆದ ಅಕ್ಟೋಬರ್ ತಿಂಗಳ 7 ರಂದು ಇದೇ ಮುನೀರ ತೊಕ್ಕೊಟ್ಟಿನ ಅಯ್ಯಂಗಾರ್ ಬೇಕರಿ ಮತ್ತು ದಿನಸಿ ಅಂಗಡಿಯೊಂದರಲ್ಲೂ ಸಿಹಿತಿಂಡಿ , ದಿನಸಿ ಸಾಮಾಗ್ರಿಗಳನ್ನ ಖರೀದಿಸಿ ಅಂಗಡಿ ಮಾಲೀಕರಿಗೆ ಸಾವಿರಾರು ರೂಪಾಯಿಗಳನ್ನ ವಂಚಿಸಿ ,ಯಾಮಾರಿಸಿದ್ದ. ಗೂಡ್ಸ್ ಮುನೀರ ದ್ವಿಚಕ್ರ ವಾಹನಗಳ ಶೋರೂಮಿಂದ ಟೆಕ್ಸ್ಟ್ ರೈಡ್ ಗೆಂದು ಕೊಂಡೊಯ್ದ ವಾಹನಗಳನ್ನೇ ಮಾರಾಟ ಮಾಡಿದ್ದಾನಂತೆ. ಈತನ ಐನಾತಿ ಕೃತ್ಯಗಳಿಗೆ ಪತ್ನಿಯೇ ಸಾಥ್ ನೀಡುತ್ತಿದ್ದು ಈ ಬಂಟಿ-ಬಬ್ಲಿ ಜೋಡಿಗಳಿಂದ ಜನರು ಮತ್ತೆ ಮೋಸ ಹೋಗದಂತೆ ಪೊಲೀಸರು ಕಾರ್ಯ ಪೃವೃತ್ತರಾಗಬೇಕಿದೆ.
Infamous fraudulent man Goods Muneer has finally been taken into custody by Mangalore's Ullal police. Following his apprehension, an additional case of photo camera theft was reported to the Kadri police department.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm