ಬ್ರೇಕಿಂಗ್ ನ್ಯೂಸ್
08-11-25 08:31 pm Mangalore Correspondent ಕರಾವಳಿ
ಮಂಗಳೂರು, ನ.8 : ಸುರತ್ಕಲ್ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಆರು ವರ್ಷಗಳ ಹಿಂದೆ ಮರಳಿನಲ್ಲಿ ಹೂತು ಹೋಗಿದ್ದ ಭಗವತಿ ಪ್ರೇಮ್ ಡ್ರೆಜ್ಜರ್ ಹಡಗು ಬಹುತೇಕ ಭಾಗ ಈಗ ತಳ ಸೇರಿಕೊಂಡಿದೆ. ಹಡಗನ್ನು ಇನ್ನೂ ತೆಗೆಯದೇ ಇರುವುದರಿಂದ ಸ್ಥಳೀಯವಾಗಿ ಮೀನುಗಾರಿಕೆಗೆ ಅಡಚಣೆ ಎದುರಾಗಿದೆ. ಅಲ್ಲದೆ, ಸ್ಥಳೀಯ ನಿವಾಸಿಗಳ ಆತಂಕಕ್ಕೂ ಕಾರಣವಾಗಿದೆ.
ಪಣಂಬೂರು ಬಂದರಿನಲ್ಲಿ ಹೂಳೆತ್ತುವ ಗುತ್ತಿಗೆ ಪಡೆದಿದ್ದ ಮುಂಬೈ ಮೂಲದ ಕಂಪನಿಗೆ ಈ ಡ್ರೆಜ್ಜರ್ ಸೇರಿದ್ದು ತಾಂತ್ರಿಕ ಕಾರಣಗಳಿಂದಾಗಿ ತೀರಕ್ಕೆ ಬಂದು ಮರಳಿನಲ್ಲಿ ಹೂತು ಹೋಗಿದ್ದರಿಂದ ಬಾಕಿಯಾಗಿತ್ತು. 2019ರ ಅಕ್ಟೋಬರ್ 29ರಂದು ಹಡಗನ್ನು ನಿಲ್ಲಿಸಲಾಗಿತ್ತು. ಬಳಿಕ ಬೇರೆಡೆ ಕೊಂಡೊಯ್ಯಲು ಸಾಧ್ಯವಾಗದೆ ಸ್ಥಳದಲ್ಲೇ ಹಡಗನ್ಹು ಒಡೆದು ಹೊರ ತೆಗೆಯುವ ಬಗ್ಗೆ ಹಡಗು ಕಂಪನಿ ಭರವಸೆ ನೀಡಿತ್ತು. ಆದರೆ ಹಡಗನ್ನು ಪೂರ್ತಿ ಒಡೆದು ತೆಗೆಯುವುದು ಸಾಧ್ಯವಾಗಲಿಲ್ಲ.


ಒಂದು ವರ್ಷದ ಹಿಂದೆ ಬಾರ್ಜ್ ಆಧರಿತ ಕ್ರೇನ್ ಮೂಲಕ ಹಡಗನ್ನು ಒಡೆಯುವ ಯತ್ನ ನಡೆದಿತ್ತು. ಡ್ರೆಜ್ಜರ್ನ ಒಂದು ಭಾಗದಷ್ಟು ಮಾತ್ರ ತೆರವು ಮಾಡಲಾಗಿದ್ದು, ಎರಡು ಭಾಗ ಇನ್ನೂ ಸಮುದ್ರದಲ್ಲೇ ಇದೆ. ಶಾಸಕ ಭರತ್ ಶೆಟ್ಟಿ ಮಧ್ಯಸ್ಥಿಕೆಯಲ್ಲಿ ಹಡಗು ಕಂಪನಿ ಜೊತೆಗಿನ ಮಾತುಕತೆಯಲ್ಲಿ ಶೀಘ್ರದಲ್ಲೇ ತೆರವು ಕಾರ್ಯ ಮುಗಿಸಲು ಸೂಚಿಸಲಾಗಿದ್ದರೂ, ಚಂಡಮಾರುತ ಹಾಗೂ ತಾಂತ್ರಿಕ ತೊಂದರೆಗಳಿಂದ ವಿಳಂಬವಾಗಿದೆ.
ಬಾರ್ಜ್ ಆಧರಿತ ಕ್ರೇನ್ ಮತ್ತೆ ಸುರತ್ಕಲ್ ಬರಲಿದೆ ಎನ್ನಲಾಗುತ್ತಿದ್ದು ಮುಂಬೈನಿಂದ ಕಟ್ಟರ್ಸ್ ಹಾಗೂ ಕಾರ್ಮಿಕರ ತಂಡ ಆಗಮಿಸಲಿದೆ ಅಂತೆ. ಡ್ರೆಜ್ಜರ್ ಹಡಗು ನಿಂತಿರುವ ಜಾಗ ಮೀನುಗಾರಿಕೆಯ ಪ್ರಮುಖ ವಲಯ. ಆದರೆ ಡ್ರೆಜ್ಜರ್ ಅವಶೇಷದಿಂದಾಗಿ ಈ ಭಾಗದಲ್ಲಿ ಮೀನುಗಾರಿಕೆ ನಡೆಸಿದರೆ ಬಲೆಗಳಿಗೆ ಹಾನಿಯಾಗುತ್ತಿದೆ. ಮೀನುಗಾರರು ಅಸಹಾಯಕರಾಗಿದ್ದಾರೆ ಎಂದು ಗುಡ್ಡೆಕೊಪ್ಲ ಮೊಗವೀರ ಸಭಾದ ಅಧ್ಯಕ್ಷ ಕೇಶವ ಕುಂದರ್ ಹೇಳಿದ್ದಾರೆ. ಒಂದೆಡೆ ಡ್ರೆಜ್ಜರ್ನ ಅವಶೇಷದಿಂದ ಮೀನುಗಾರರು ಸಂಕಷ್ಟದಲ್ಲಿದ್ದರೆ, ಪ್ರವಾಸಿಗರಿಗೆ ಮಾತ್ರ ಕುತೂಹಲದ ಕೇಂದ್ರವಾಗಿದೆ. ಡ್ರೆಜ್ಜರ್ ವೀಕ್ಷಣೆಗೆ ಹೊರ ಜಿಲ್ಲೆಗಳಿಂದಲೂ ಜನರು ಬರುತ್ತಿದ್ದಾರೆ. ಈಗ ಪ್ರೀವೆಡ್ಡಿಂಗ್ ಫೋಟೋ ಶೂಟ್ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.
The Bhagwati Prem dredger ship, which got stuck in the sand at Surathkal’s Gudddekopla beach nearly six years ago, is now almost completely buried under the sand. However, the stranded vessel continues to disrupt fishing activities and has become a cause of concern for local fishermen and residents.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm