ಬ್ರೇಕಿಂಗ್ ನ್ಯೂಸ್
20-11-24 10:28 pm Mangalore Correspondent ಕರಾವಳಿ
ಮಂಗಳೂರು, ನ.20: ತಿಂಗಳಿಗೆ ಒಂದು ಸಾವಿರ ರೂಪಾಯಿ ಕಟ್ಟಿದರೆ, ದುಬಾರಿ ಕಾರು, ಫ್ಲಾಟ್ ಗಿಫ್ಟ್ ಆಗಿ ಸಿಕ್ಕಿದರೆ ಯಾರಿಗೆ ಬೇಡ ಹೇಳಿ. ಆದರೆ, ಜನರ ಈ ರೀತಿಯ ಆಕರ್ಷಣೆಯನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅದೃಷ್ಟ ಚೀಟಿ ಹೆಸರಲ್ಲಿ ಮಂಗಳೂರಿನಲ್ಲಿ ನಾನಾ ಮಾದರಿಯ ಲಕ್ಕಿ ಸ್ಕೀಂ ಆರಂಭಿಸಿದ್ದಾರೆ. ಇದರ ನಡುವಲ್ಲೇ ಮಂಗಳೂರಿನಲ್ಲಿ ಡ್ರೀಮ್ ಡೀಲ್ ಹೆಸರಿನ ಲಕ್ಕಿ ಸ್ಕೀಮ್ ನಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಮೊತ್ತವನ್ನು ಗ್ರಾಹಕರು ಕಟ್ಟಬೇಕಿದ್ದು, ಡ್ರೀಮ್ ಡೀಲ್ ಸಂಸ್ಥೆಯವರು ಲಕ್ಕಿ ಡ್ರಾವನ್ನು ಲೈವ್ ಆಗಿ ನಡೆಸುತ್ತಿದ್ದಾರೆ. ಈ ಬಾರಿ ಮಹೀಂದ್ರಾ ಥಾರ್ ಕಾರು ಗಿಫ್ಟ್ ಇದೆಯೆಂದು ತೋರಿಸಲಾಗಿತ್ತು. ಹೀಗಾಗಿ ಗ್ರಾಹಕರು ಕೂಡ ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ, ಇದೇ ವೇಳೆ ಲಕ್ಕಿ ಡ್ರಾ ನಡೆಸಿದ್ದ ವಿಡಿಯೋ ಹೊರಬಂದಿದ್ದು, ಅದೃಷ್ಟ ಚೀಟಿ ಎತ್ತುವುದರ ಹಿಂದಿನ ಸಾಚಾತನ ಬಯಲಾಗಿದೆ. ಕಣ್ಣಿಗೆ ಬಟ್ಟೆ ಕಟ್ಟಿದ ವ್ಯಕ್ತಿಯೊಬ್ಬ ಅದೃಷ್ಟ ಚೀಟಿಯನ್ನು ಎತ್ತುವುದನ್ನು ತೋರಿಸುವಾಗಲೇ, ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಆತನ ಕೈಗೆ ತನ್ನ ಕೈಲಿದ್ದ ಚೀಟಿಯನ್ನು ನೀಡುತ್ತಾನೆ. ಆಮೂಲಕ ಕಂಪನಿಯಿಂದಲೇ ವ್ಯವಸ್ಥಿತ ರೀತಿಯಲ್ಲಿ ವಂಚನೆ ಎಸಗಲಾಗುತ್ತಿದೆ ಎಂದು ಜಾಲತಾಣದಲ್ಲಿ ಈ ವಿಡಿಯೋವನ್ನು ವೈರಲ್ ಮಾಡಲಾಗಿತ್ತು.
ವಿಡಿಯೋ ವೈರಲ್ ಆಗುತ್ತಲೇ ಕಂಪನಿಯ ಕಡೆಯವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಲೋಪ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಪ್ಪೆಸಗಿರುವ ಇಬ್ಬರು ವ್ಯಕ್ತಿಗಳನ್ನು ಸಂಸ್ಥೆಯಿಂದ ವಜಾ ಮಾಡಲಾಗಿದೆ. ಮತ್ತೆ ಅದೃಷ್ಟ ಚೀಟಿ ಎತ್ತಿದ್ದು ಬೇರೆಯೇ ವ್ಯಕ್ತಿಗೆ ಬಹುಮಾನ ನೀಡಿದ್ದೇವೆ ಎಂದಿದ್ದಾರೆ. ಆದರೆ, ಲೈವ್ ವಿಡಿಯೋದಲ್ಲಿಯೇ ನಕಲಿತನ ಎಸಗಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದರಿಂದ ಈ ರೀತಿಯ ಎಲ್ಲ ಅದೃಷ್ಟ ಚೀಟಿ ಸ್ಕೀಂಗಳ ಬಗ್ಗೆಯೂ ಜನರಿಗೆ ಅಪನಂಬಿಕೆ ಉಂಟಾಗಿದೆ.
ಮಂಗಳೂರು, ಸುರತ್ಕಲ್ ನಲ್ಲಿ 25ಕ್ಕೂ ಹೆಚ್ಚು ಈ ರೀತಿಯ ಅದೃಷ್ಟ ಚೀಟಿ ಎತ್ತುವ ಸ್ಕೀಂ ನಡೆಯುತ್ತಿದ್ದು, ಪೊಲೀಸರೂ ಮೌನವಾಗಿದ್ದಾರೆ. ಪ್ರತಿ ಅದೃಷ್ಟ ಚೀಟಿಯಲ್ಲೂ 15 ಸಾವಿರಕ್ಕೂ ಹೆಚ್ಚು ಗ್ರಾಹಕರಿದ್ದು, ತಿಂಗಳಿಗೆ ಒಬ್ಬನಿಗೆ ಡ್ರಾದಲ್ಲಿ ದುಬಾರಿ ಬಹುಮಾನ ಸಿಗುತ್ತದೆ ಎಂದು ಭರವಸೆ ನೀಡಲಾಗುತ್ತದೆ. ವಿಶೇಷ ಅಂದ್ರೆ, ಕೆಲವು ಅದೃಷ್ಟ ಚೀಟಿ ಸ್ಕೀಮ್ ಗಳಿಗೆ ತುಳು ಚಿತ್ರನಟರೂ ವಿಡಿಯೋ ಮಾಡಿ, ಜನರನ್ನು ಆಕರ್ಷಿಸುತ್ತಿದ್ದಾರೆ. ವರ್ಷದ ಕೊನೆಯಲ್ಲಿ ಅದೃಷ್ಟ ಚೀಟಿಗೆ ಆಯ್ಕೆಯಾಗದ ಪ್ರತಿ ವ್ಯಕ್ತಿಗೂ ಆತ ಪಾವತಿಸಿದ ಮೊತ್ತದಲ್ಲಿ ಗಿಫ್ಟ್ ಕೂಪನ್ನಲ್ಲಿ ಕೊಡಲಾಗಿರುವ ದೊಡ್ಡ ಮೌಲ್ಯದ ವಸ್ತುಗಳನ್ನು ಪಡೆಯಲು ಅವಕಾಶ ಇದೆ ಎನ್ನುತ್ತಿದ್ದಾರೆ. ಇದೇ ರೀತಿ ವಿಕೆ ಫರ್ನಿಚರ್ ಸಂಸ್ಥೆಯಿಂದ ನಡೆಸಲ್ಪಡುವ ಅದೃಷ್ಟ ಚೀಟಿಯಲ್ಲಿ 20 ಸಾವಿರಕ್ಕೂ ಹೆಚ್ಚು ಗ್ರಾಹಕರಿದ್ದಾರೆ.
ಪ್ರತಿ ತಿಂಗಳಿಗೆ 20 ಸಾವಿರ ಜನರು ಒಂದು ಸಾವಿರದಂತೆ ಹಣ ಕಟ್ಟಿದರೆ, ಕೋಟ್ಯಂತರ ರೂಪಾಯಿ ಶೇಖರಣೆ ಆಗೋದಂತೂ ಖಚಿತ. ಆದರೆ, ಕೊನೆಯಲ್ಲಿ ಏಕಕಾಲಕ್ಕೆ ಅಷ್ಟೊಂದು ಗಿಫ್ಟ್ ಗಳನ್ನು ಕೊಡುವುದು ಕಷ್ಟಕರ ಆಗಬಹುದೇನೋ. ಈ ಹಿಂದೆ ಬೆಂಗಳೂರಿನಲ್ಲಿ ಇದೇ ಮಾದರಿಯಲ್ಲಿ ಐಎಂಎ ಜುವೆಲ್ಲರಿಯಿಂದ ಅದೃಷ್ಟ ಚೀಟಿ ಎತ್ತುವ ಯೋಜನೆ ಮಾಡಿ ಸಾವಿರಾರು ಮಂದಿಗೆ ವಂಚನೆ ಎಸಗಲಾಗಿತ್ತು. ಆನಂತರ, ಹೈಕೋರ್ಟಿನಿಂದ ಜುವೆಲ್ಲರಿಯನ್ನು ಜಪ್ತಿ ಮಾಡಿ ಗ್ರಾಹಕರಿಗೆ ಹಣ ಹಿಂತಿರುಗಿಸುವಂತೆ ಆದೇಶವೂ ಆಗಿತ್ತು. ಆದರೆ, ಕೆಲವು ಗ್ರಾಹಕರು ಈವರೆಗೂ ಹಣ ಸಿಗದೆ ಪರದಾಡುವ ಸ್ಥಿತಿಯಾಗಿದೆ.
ಡ್ರೀಮ್ ಡೀಲ್ ಹೆಸರಿನಲ್ಲಿ ಲಕ್ಕಿ ಸ್ಕೀಂ ನಡೆಸುವ ಮಂದಿಯೂ ಜುವೆಲ್ಲರಿ ಸೇರಿದಂತೆ ಬೇರೆ ಬೇರೆ ವಹಿವಾಟು ನಡೆಸುತ್ತಾರೆ ಎನ್ನಲಾಗುತ್ತಿದೆ. ಹಾಗಾಗಿ, ಇದೇ ಮಾದರಿಯ ಯೋಜನೆಯನ್ನು ಇಡೀ ದೇಶಾದ್ಯಂತ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ರಾಜ್ಯದಾದ್ಯಂತ ನಮ್ಮ ಯೋಜನೆಯಿದ್ದು, 15 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಆಗಿರುವ ತಪ್ಪಿನಲ್ಲಿ ಸಂಸ್ಥೆಯ ಪಾಲುದಾರಿಕೆ ಇಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕಾಗಿ ಪೊಲೀಸ್ ದೂರು ನೀಡಿದ್ದೇವೆ ಎಂದಿದ್ದಾರೆ.
Mangalore Dream deal group company fraud, video goes viral, cheating exposed during lucky draw Live event. Dream deal group offers cheating plan in the name of savings plan.
15-08-25 07:15 pm
Bangalore Correspondent
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
Home Minister Parameshwar: ದ್ವೇಷ ಭಾಷಣ ಮಾಡುವವರ...
14-08-25 03:51 pm
DK Shivakumar, Dharmasthala, Virendra Heggade...
14-08-25 03:49 pm
15-08-25 01:32 pm
HK News Desk
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm