ಬ್ರೇಕಿಂಗ್ ನ್ಯೂಸ್
20-11-24 06:37 pm Udupi Correspondent ಕರಾವಳಿ
ಉಡುಪಿ, ನ.20: ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂ ಗೌಡ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಾಡಲಾಗಿದ್ದು, ಆಬಳಿಕ ಮೃತದೇಹವನ್ನು ಆತನ ಕುಟುಂಬಕ್ಕೆ ಬಿಟ್ಟುಕೊಡಲಾಯಿತು. ಆತನ ಹುಟ್ಟೂರು ಕಬ್ಬಿನಾಲೆಯ ಕೂಡ್ಲು ಎಂಬಲ್ಲಿ ಹೆಬ್ರಿ ಪೊಲೀಸರ ಸಮ್ಮುಖದಲ್ಲಿ ಕುಟುಂಬಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ನ.18ರ ಮಧ್ಯರಾತ್ರಿ ನಾಡ್ಪಾಲು ಗ್ರಾಮದ ಪೀತ್ ಬೈಲ್ ಎಂಬಲ್ಲಿ ಎಎನ್ಎಫ್ ಪಡೆಯ ಗುಂಡಿಗೆ ನಕ್ಸಲ್ ವಿಕ್ರಂ ಗೌಡ ಹತನಾಗಿದ್ದ. ಆನಂತರ, ಮರುದಿನ ಸಂಜೆಯ ವರೆಗೂ ಆತನ ಶವ ಕಾಡಿನಲ್ಲಿಯೇ ಇತ್ತು. ಮಂಗಳವಾರ ಸಂಜೆಯ ವೇಳೆಗೆ ಫಾರೆನ್ಸಿಕ್ ತಜ್ಞರು ಮತ್ತು ಶ್ವಾನದಳ ತಪಾಸಣೆಯ ಬಳಿಕ ಶವವನ್ನು ಎತ್ತಿ ಮರಣೋತ್ತರ ಪರೀಕ್ಷೆಗೆ ಒಯ್ಯಲಾಗಿತ್ತು.


ಮಣಿಪಾಲ ಆಸ್ಪತ್ರೆಯಲ್ಲಿ ಬುದವಾರ ನಸುಕಿನಲ್ಲಿ ತಾಲೂಕು ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬುಧವಾರ ಬೆಳಗ್ಗೆ ಶವ ನೋಡುವುದಕ್ಕೆ ವಿಕ್ರಂ ಗೌಡನ ತಂಗಿ ಸುಗುಣ ಮತ್ತು ತಮ್ಮ ಸುರೇಶ್ ಗೌಡ ಆಗಮಿಸಿದ್ದಾರೆ. ಈ ವೇಳೆ, ತಂಗಿ ಸುಗುಣ, ಹುಟ್ಟೂರಿನಲ್ಲಿ ಅಣ್ಣ ವಿಕ್ರಂ ಗೌಡನಿಗೆ ಸೇರಿದ ಒಂದು ಎಕರೆ ಜಾಗ ಇದೆ. ಅಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಪೊಲೀಸರು ಅದಕ್ಕೆ ಒಪ್ಪಿದ್ದು ಕಳೇಬರವನ್ನು ಕುಟುಂಬಸ್ಥರ ವಶಕ್ಕೊಪ್ಪಿಸಿದ್ದಾರೆ. ಶವವನ್ನು ಆಂಬುಲೆನ್ಸ್ ನಲ್ಲಿಯೇ ಕಬ್ಬಿನಾಲೆಗೆ ಒಯ್ಯಲಾಗಿದ್ದು, ವಾಹನ ವೇಗದಲ್ಲಿ ಸಾಗುತ್ತಿದ್ದಾಗ ದನ ರಸ್ತೆಗೆ ಅಡ್ಡ ಬಂದಿದ್ದರಿಂದ ಚಾಲಕ ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಕ್ಕೆ ಇಳಿಸಿದ ಘಟನೆಯೂ ನಡೆಯಿತು. ಆನಂತರ, ಜೊತೆಗಿದ್ದ ಪೊಲೀಸರು ಮತ್ತು ಸ್ಥಳೀಯರು ಸೇರಿ ವಾಹನವನ್ನು ತಳ್ಳಿ ರಸ್ತೆಗೆ ತಂದಿದ್ದು, ಬಳಿಕ ಕಬ್ಬಿನಾಲೆಗೆ ತಲುಪಿತ್ತು.
ಕಬ್ಬಿನಾಲೆ ಗ್ರಾಮದ ಕೂಡ್ಲುವಿನಲ್ಲಿ ಕುಟುಂಬಸ್ಥರು ವಿಧಿ ವಿಧಾನ ಪೂರೈಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ವಿಕ್ರಂ ಗೌಡ 24 ವರ್ಷದ ಯುವಕನಿದ್ದಾಗ ಮನೆ ಬಿಟ್ಟು ಕಾಡು ಸೇರಿದ್ದು, ನಕ್ಸಲರ ಪಡೆಯನ್ನು ಕಟ್ಟಿಕೊಂಡಿದ್ದ. ಕೊಲೆ, ಪೊಲೀಸರ ವಾಹನಕ್ಕೆ ಬೆಂಕಿ ಹಾಕಿದ ಪ್ರಕರಣ ಸೇರಿ ಕೇರಳ, ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದಾನೆ.
Udupi Naxal leader Vikram gowda final rites performed by family members at home town Udupi. After postmortem at manipal Kmc the police have handed over his body to the family members after which the final rites were performed.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm