ಬ್ರೇಕಿಂಗ್ ನ್ಯೂಸ್
18-11-24 11:01 pm Giridhar Shetty, Mangalore Correspondent ಕರಾವಳಿ
ಮಂಗಳೂರು, ನ.18: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಬಾರಿ ಆರ್ಥಿಕ ಹೊರೆ ಸರಿದೂಗಿಸಲು ಹಲವು ಸ್ನಾತಕೋತ್ತರ ಅಧ್ಯಯನ ವಿಭಾಗಗಳನ್ನು ಮುಚ್ಚಲಾಗಿದೆ. ಮಾಹಿತಿ ಪ್ರಕಾರ, 10ಕ್ಕೂ ಹೆಚ್ಚು ಅಧ್ಯಯನ ವಿಭಾಗಕ್ಕೆ ಈ ಬಾರಿ ಪ್ರಥಮ ವರ್ಷಕ್ಕೆ ಅಡ್ಮಿಶನ್ ಮಾಡಿಕೊಂಡಿಲ್ಲ. ಇದರಿಂದಾಗಿ ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಿದ್ದ ಬೋಧಕ ವರ್ಗಕ್ಕೆ ಪೆಟ್ಟು ಬಿದ್ದಿದೆ. ಖಾಲಿ ಬಿದ್ದ ಬೋಧಕ ವರ್ಗಕ್ಕೆ ವೇತನ ನೀಡಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳುತ್ತಿದ್ದು, ಅಲ್ಲಿರುವ ಬೋಧಕ, ಬೋಧಕೇತರ ಸಿಬಂದಿ ಡೆಪ್ಯುಟೇಶನ್ ಮೇಲೆ ಬದಲಿ ಉದ್ಯೋಗ ಪಡೆಯಲು ಲಾಬಿ ಆರಂಭಿಸಿದ್ದಾರೆ.
ಪ್ರತಿ ವಿಭಾಗದಲ್ಲಿ ಕನಿಷ್ಠ 15 ವಿದ್ಯಾರ್ಥಿಗಳು ಇರಲೇಬೇಕೆಂದು ಎರಡು ತಿಂಗಳ ಹಿಂದೆ ಮಂಗಳೂರು ವಿವಿಯ ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರವಾಗಿತ್ತು. ವಿದ್ಯಾರ್ಥಿಗಳು ಕಡಿಮೆಯಿದ್ದ ವಿಭಾಗವನ್ನು ತಾತ್ಕಾಲಿಕವಾಗಿ ಮುಚ್ಚುವುದಕ್ಕೂ ನಿರ್ಧಾರ ಕೈಗೊಳ್ಳಲಾಗಿತ್ತು. ಆನಂತರ, 15 ವಿದ್ಯಾರ್ಥಿಗಳ ಕನಿಷ್ಠ ಮಾನದಂಡ ದುಬಾರಿಯಾಗುವ ಲಕ್ಷಣ ತೋರಿದಾಗ, ಅದನ್ನು ಹತ್ತಕ್ಕೆ ಇಳಿಸಲಾಗಿತ್ತು. ಆದರೂ ಪರಿಸರ ವಿಜ್ಞಾನ, ಸ್ಟಾಟಿಸ್ಟಿಕ್ಸ್, ಇಲೆಕ್ಟ್ರಾನಿಕ್ಸ್, ಎಂ.ಇಡಿ, ಎಂಎಸ್ ಡಬ್ಲ್ಯು, ಜಿಯೋ ಇನ್ಫಾರ್ಮೆಟಿಕ್ಸ್, ಮೆಟೀರಿಯಲ್ ಸೈನ್ಸ್, ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗ, ಕೊಂಕಣಿ ಎಂಎ ಸಹಿತ 10ಕ್ಕೂ ಹೆಚ್ಚು ಅಧ್ಯಯನ ವಿಭಾಗವನ್ನು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿದೆ. ಇದರಿಂದಾಗಿ ಇಲ್ಲಿ ಬೋಧನೆ ಮಾಡುತ್ತಿದ್ದ ಪರ್ಮನೆಂಟ್ ಉದ್ಯೋಗಿಗಳಿಗೂ ಸಂಕಷ್ಟ ಎದುರಾಗಿದೆ.
ಆಂತರಿಕ ಸಂಘರ್ಷಕ್ಕೆ ಗುಣಮಟ್ಟ ಕುಸಿತ
ರಾಜ್ಯದ ಬೇರೆ ಕಡೆಯ ವಿವಿಗಳಲ್ಲಿ ವಿವಿಧ ಕೋರ್ಸ್ ಗಳನ್ನು ಆರಂಭಿಸಲು ಬೇಡಿಕೆ ಇದ್ದರೂ, ಬೋಧನಾ ವರ್ಗದ ಅಸಮರ್ಪಕ ಕಾರ್ಯ ನಿರ್ವಹಣೆಯಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ. ವಿಭಾಗದೊಳಗಿನ ಅಧ್ಯಾಪಕರ ಆಂತರಿಕ ಸಂಘರ್ಷ, ಬೋಧನಾ ಗುಣಮಟ್ಟ ಇಳಿಕೆ, ಗುಣಮಟ್ಟ ರಹಿತ ಪಿಎಚ್ ಡಿ ಅಧ್ಯಯನಗಳು, ಬೋಧನೆ ಬಿಟ್ಟು ಬೇರೆ ಕೆಲಸಗಳ ಉಸ್ತುವಾರಿ ಇತ್ಯಾದಿ ಕಾರಣದಿಂದಾಗಿ ಮಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಿರುವುದನ್ನು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಂಡುಕೊಂಡಿದ್ದು, ಬೋಧನಾ ವರ್ಗದ ವೈಫಲ್ಯವೇ ಇದಕ್ಕೆಲ್ಲ ಕಾರಣ ಎಂಬ ವರದಿ ಪಡೆದಿದೆ ಎನ್ನುವ ಮಾಹಿತಿ ಲಭಿಸಿದೆ. ಈ ವರದಿ ಆಧರಿಸಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗದೇ ಇದ್ದರೆ ಸ್ವಯಂ ನಿವೃತ್ತಿ ಪಡೆಯುವಂತೆ ಬೋಧಕ ಸಿಬಂದಿಗೆ ಖಡಕ್ ಸೂಚನೆ ನೀಡಲಾಗಿದೆ.
ಬೇರೆ ವಿವಿಗಳಲ್ಲಿ ಉನ್ನತ ಹುದ್ದೆಗಳತ್ತ ಲಾಬಿ
ಇದರ ಬೆನ್ನಲ್ಲೇ ಅಧ್ಯಯನ ವಿಭಾಗ ಮುಚ್ಚಿದ್ದರಿಂದ ಕೆಲಸ ಕಳಕೊಳ್ಳುವ ಭೀತಿ ಎದುರಿಸುತ್ತಿರುವ ಬೋಧಕ ವರ್ಗದ ಸಿಬಂದಿ ಬೇರೆ ವಿವಿಗಳಿಗೆ, ರಾಜ್ಯದ ಇತರೇ ಪ್ರಥಮ ದರ್ಜೆ ಕಾಲೇಜುಗಳಿಗೆ ಡೆಪ್ಯುಟೇಶನ್ ಮೇಲೆ ತೆರಳುವುದಕ್ಕೆ ಲಾಬಿ ನಡೆಸಿದ್ದಾರೆ. ಇದಲ್ಲದೆ, ಸಿಂಡಿಕೇಟ್ ಮಂಡಳಿಯ ಶಿಫಾರಸು ಪಡೆದು ಬೇರೆ ಇಲಾಖೆಗಳಿಗೆ ತೆರಳುವುದಕ್ಕೂ ಯೋಚನೆ ಮಾಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ವರ್ಗಾವಣೆ ಪಡೆಯುವುದಕ್ಕೂ ಸಾಧ್ಯವಿದೆ. ಮಂಗಳೂರು ವಿವಿಯ 5-6 ಪ್ರಾಧ್ಯಾಪಕ ಹುದ್ದೆಯಲ್ಲಿದ್ದವರು ರಾಜ್ಯದ ಬೇರೆ ವಿವಿಗಳಲ್ಲಿ ಪರೀಕ್ಷಾಂಗ ಕುಲಸಚಿವ, ಹಣಕಾಸು ಅಧಿಕಾರಿ ಹುದ್ದೆಗಳತ್ತ ಲಾಬಿ ನಡೆಸುತ್ತಿದ್ದಾರೆ. ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲಿದ್ದವರು ಗಣಿ ಇಲಾಖೆ, ಕಂದಾಯ, ನೀರಾವರಿ ಇಲಾಖೆಯ ಪ್ರಮುಖ ಆಡಳಿತಾತ್ಮಕ ಹುದ್ದೆಗಳತ್ತ ಕಣ್ಣಿಟ್ಟಿದ್ದು, ಉನ್ನತ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.
ಸ್ವಯಂ ನಿವೃತ್ತಿ ಪಡೆಯಲು ಸೂಚನೆ
ರಾಜ್ಯದ ಬಹುತೇಕ ವಿವಿಗಳಲ್ಲಿ 50 ಶೇಕಡಾದಷ್ಟು ಖಾಯಂ ಹುದ್ದೆಗಳ ಕೊರತೆಯಿದ್ದು, ಶೈಕ್ಷಣಿಕ ವ್ಯವಸ್ಥೆಯನ್ನು ಸಂಭಾಳಿಸಲು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿದೆ. ಪ್ರಸ್ತುತ ಕೆಲವು ಕೋರ್ಸುಗಳನ್ನು ಮುಚ್ಚಿರುವುದರಿಂದ ಅಲ್ಲಿದ್ದ ಅತಿಥಿ ಉಪನ್ಯಾಸಕರ ಕೆಲಸಕ್ಕೂ ಕತ್ತರಿ ಬಿದ್ದಿದೆ. ಹಾಲಿ ಎರಡನೇ ವರ್ಷದ ಸ್ನಾತಕೋತ್ತರ ಅಧ್ಯಯನಕ್ಕೆ ವಿದ್ಯಾರ್ಥಿಗಳಿರುವಲ್ಲಿ ಖಾಯಂ ಹುದ್ದೆಯ ಪ್ರಾಧ್ಯಾಪಕರಿಗೆ ಬೋಧನೆಗೆ ಒಂದು ವರ್ಷದ ಅವಧಿ ಇರುತ್ತದೆ. ಮುಂದಿನ ವರ್ಷಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು ಅಥವಾ ಸರಕಾರಿ ಕೆಲಸಕ್ಕೆ ಸ್ವಯಂ ನಿವೃತ್ತಿ ಪಡೆಯಲೇಬೇಕು. ಇದಕ್ಕಾಗಿ ಈಗಲೇ ಬೇರೆ ಕಡೆ ಹುದ್ದೆಗಳಿದ್ದರೆ, ತಮ್ಮ ಸ್ಥಾನ ಖಚಿತಪಡಿಸಿಕೊಳ್ಳಲು ಲಾಬಿ ಶುರು ಮಾಡಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ. ಶಿಕ್ಷಣ ಸಂಸ್ಥೆಗಳಲ್ಲಿ ಇರುವವರಿಗೆ ಡೆಪ್ಯುಟೇಶನ್ ಮೇಲೆ ಬೇರೆ ಇಲಾಖೆಯಲ್ಲಿ ಆಡಳಿತಾತ್ಮಕ ಹುದ್ದೆಗಳನ್ನು ಪಡೆಯಲು ಅವಕಾಶ ಇರುವುದರಿಂದ ನಿವೃತ್ತಿ ಅಂಚಿನಲ್ಲಿರುವವರೂ ಇಲಾಖೆ ಬದಲಾಯಿಸುವ ಯೋಚನೆಯಲ್ಲಿದ್ದಾರೆ.
Mangalore More than 10 courses at Mangalore University cancelled, cut in salary of lectures
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 07:15 pm
Mangalore Correspondent
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
Paakashala Resturant, Mangalore: ಮಂಗಳೂರಿನಲ್ಲು...
05-05-25 11:22 am
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm