ಬ್ರೇಕಿಂಗ್ ನ್ಯೂಸ್
10-10-24 11:19 pm Mangalore Correspondent ಕರಾವಳಿ
ಮಂಗಳೂರು, ಅ.10: ತುಳು ಕರಾವಳಿ ಜನರ ಆಡು ಭಾಷೆಯಾಗಿದ್ದು, ಇಲ್ಲಿನ ಜನಪದ, ಸಂಸ್ಕೃತಿ, ಇತಿಹಾಸ, ಭಾಷಾ ಜ್ಞಾನದ ಬಗ್ಗೆ ತಿಳಿಯುವ ಉದ್ದೇಶದಿಂದ ಎಂಎ ಸ್ನಾತಕೋತ್ತರ ಅಧ್ಯಯನಕ್ಕೆ ವಿದ್ಯಾರ್ಥಿಗಳು ಬರುತ್ತಾರೆ ವಿನಾ ಯಾವುದೇ ಉದ್ಯೋಗದ ಭರವಸೆಯಿಂದಲ್ಲ. ಆದರೆ, ತುಳುನಾಡನ್ನು ಪ್ರತಿನಿಧಿಸುವ ಮಂಗಳೂರು ವಿವಿಯಲ್ಲಿ ತುಳು ಎಂಎ ಅಧ್ಯಯನಕ್ಕೆ ಏಕಾಏಕಿ ಶುಲ್ಕವನ್ನು ದುಪ್ಪಟ್ಟುಗೊಳಿಸಿದ್ದು ವಿದ್ಯಾರ್ಥಿಗಳಿಗೆ ತೀವ್ರ ಹೊರೆಯಾಗಿಸಿದೆ ಎಂದು ತುಳು ಎಂಎ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಕಣ್ವತೀರ್ಥ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುಳು ಅಕಾಡೆಮಿ ಸ್ಥಾಪನೆಯಿಂದಾಗಿ ತುಳು ಭಾಷಾ ಚಳವಳಿಗೆ ಸಂಘಟನಾತ್ಮಕ ನೆಲೆ ದೊರಕಿತ್ತು. 2018ರಲ್ಲಿ ತುಳು ಅಕಾಡೆಮಿಯ ಒತ್ತಾಸೆಯಿಂದಲೇ ಮಂಗಳೂರು ವಿವಿಯ ಸಂಧ್ಯಾ ಕಾಲೇಜಿನಲ್ಲಿ ತುಳು ಎಂಎ ತರಗತಿ ಆರಂಭಿಸಲಾಗಿತ್ತು. ಆರಂಭದಲ್ಲಿ 15 ಸಾವಿರ ಶುಲ್ಕ ಇದ್ದುದನ್ನು ಸ್ಥಳೀಯ ಭಾಷಾ ಅಧ್ಯಯನಕ್ಕೆ ಮಂಗಳೂರು ವಿವಿಯಿಂದ ವಿಶೇಷ ರಿಯಾಯಿತಿ ನೀಡಬೇಕೆಂದು ಮನವಿ ಮಾಡಿದ್ದಕ್ಕೆ 2021ರಲ್ಲಿ ಮತ್ತೆ 4 ಸಾವಿರ ಕಡಿತ ಮಾಡಲಾಗಿತ್ತು. ಆದರೆ, ಈತನಕ 11 ಸಾವಿರ ಇದ್ದ ವಾರ್ಷಿಕ ಶುಲ್ಕವನ್ನು ಈ ಬಾರಿ 22 ಸಾವಿರಕ್ಕೆ ಏರಿಸಲಾಗಿದೆ.
ಇದಲ್ಲದೆ, ಕೋರ್ಸ್ ಮುಂದುವರಿಸಲು ಕನಿಷ್ಠ 15 ಮಂದಿ ವಿದ್ಯಾರ್ಥಿಗಳ ಮಾನದಂಡವನ್ನು ಕಡ್ಡಾಯ ಮಾಡಿದ್ದಾರೆ. ಇದರಿಂದಾಗಿ ತುಳು ಭಾಷಾ ಅಧ್ಯಯನಕ್ಕೆ ತೀವ್ರ ತೊಡಕಾಗಿದೆ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು, ರಾಜ್ಯದಲ್ಲಿ ದ್ವಿತೀಯ ಅಧಿಕೃತ ಭಾಷೆಯಾಗಿಸಬೇಕು ಎನ್ನುವ ನೆಲೆಯಲ್ಲಿ ಬಲವಾದ ಆಗ್ರಹ ಕೇಳಿಬರುತ್ತಿರುವಾಗಲೇ ತುಳು ಭಾಷೆಯ ಉನ್ನತ ಶಿಕ್ಷಣದ ಅವಕಾಶವನ್ನು ಕಡಿತಗೊಳಿಸುವ ಸ್ಥಿತಿಯಾಗಿದೆ. ಈ ಬಗ್ಗೆ ಮಂಗಳೂರು ವಿವಿಯ ಕುಲಪತಿಗಳು ಹಾಗೂ ಸಿಂಡಿಕೇಟ್ ಸದಸ್ಯರ ಗಮನಕ್ಕೂ ತರಲಾಗಿದೆ ಎಂದರು.
ತುಳು ಎಂಎ ವಿದ್ಯಾರ್ಥಿಗಳ ಶುಲ್ಕವನ್ನು ಭರಿಸಲು ದಾನಿಗಳು ಮುಂದೆ ಬರಬೇಕು, ಭಾಷಾ ಅಧ್ಯಯನಕ್ಕೆ ತೊಡಕಾಗದಂತೆ ಶಾಸಕರು, ಸಂಸದರು ಕ್ರಮ ವಹಿಸಬೇಕು ಎಂಬ ಒತ್ತಾಯವನ್ನೂ ಮಾಡುತ್ತಿದ್ದೇವೆ. ಈತನಕ ತುಳು ಎಂಎ ಕಲಿಕೆಯಲ್ಲಿ 81 ಮಂದಿ ಸ್ನಾತಕ ಪದವಿ ಪಡೆದಿದ್ದಾರೆ. ಉನ್ನತ ಶಿಕ್ಷಣ ಸಾಧ್ಯವಾದರೆ, ಪಿಯುಸಿ, ಪದವಿಗಳಲ್ಲಿ ತುಳು ಕಲಿಕೆಯನ್ನು ಪ್ರಚುರಪಡಿಸಬಹುದು ಎನ್ನುವ ದೃಷ್ಟಿಯಿಂದ ತುಳು ಎಂಎ ಆರಂಭಿಸಲಾಗಿತ್ತು. ಆದರೆ, ಮಂಗಳೂರು ವಿವಿಯಲ್ಲಿ ಆರ್ಥಿಕ ಮುಗ್ಗಟ್ಟು ಎಂಬ ಕಾರಣಕ್ಕೆ ತುಳು ಭಾಷೆಯ ಎಂಎ ಕಲಿಕೆಗೆ ಅಡ್ಡಿ ತರುವುದು ಎಷ್ಟು ಸರಿ ಎಂದು ಸುಭಾಶ್ಚಂದ್ರ ಕಣ್ವತೀರ್ಥ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ತುಳು ಎಂಎ ಹಳೆ ವಿದ್ಯಾರ್ಥಿ ಸಂಘದ ಚಂದ್ರಹಾಸ ಕಣಂತೂರು, ಹರೀಶ್ ಅಮೈ, ಪ್ರಶಾಂತಿ ಶೆಟ್ಟಿ ಇರುವೈಲು ಉಪಸ್ಥಿತರಿದ್ದರು.
Tulu MA degree fee double is a big burden for students slams alumni student in Mangalore.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm