ಬ್ರೇಕಿಂಗ್ ನ್ಯೂಸ್
06-11-23 12:09 pm Mangalore Correspondent ಕರಾವಳಿ
ಉಳ್ಳಾಲ, ನ.6: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಐದು ವರ್ಷದ ಹೆಣ್ಮಗಳ ಚಿಕಿತ್ಸೆಗಾಗಿ ಉಳ್ಳಾಲದ ಟೀಮ್ ಹನುಮಾನ್ ಸಂಘಟನೆಯ ಉತ್ಸಾಹಿ ಯುವಕರ ತಂಡವು ನವರಾತ್ರಿಯಂದು ವೇಷ ಧರಿಸಿ ಕುಣಿದು ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ದುಡ್ಡನ್ನು ದೇಣಿಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಉಳ್ಳಾಲ ಧರ್ಮನಗರ ನಿವಾಸಿ ರಂಜಿನಿ ಎಂಬವರ ಐದು ವರ್ಷದ ಮಗಳು ಶ್ರೇಯಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಲಿದೆ. ರಂಜಿನಿ ಅವರ ಕುಟುಂಬ ಆರ್ಥಿಕವಾಗಿ ಸೊರಗಿದ್ದು ಮಗಳ ಕಾಯಿಲೆಯ ಚಿಕಿತ್ಸೆಗೆ ಹಣ ಭರಿಸಲು ಅಶಕ್ತವಾಗಿದೆ. ಶ್ರೇಯಾಳ ಚಿಕಿತ್ಸೆಗೆ ಸಹಕರಿಸಲು ಮುಂದಾದ ಸ್ಥಳೀಯ ಟೀಮ್ ಹನುಮಾನ್ ತಂಡದ ಎಳೆಯ ಪ್ರಾಯದ ಯುವಕರು ಕಳೆದ ನವರಾತ್ರಿಯಂದು ಯಕ್ಷಗಾನ ಶೈಲಿಯ ವೇಷ ಧರಿಸಿ ಮನೆ ಮನೆಗೆ ತೆರಳಿ ಕುಣಿದು ಹಣ ಸಂಪಾದಿಸಿದ್ದಾರೆ.



ಅಲ್ಲದೆ, ಉಳ್ಳಾಲ ಶಾರದೋತ್ಸವಕ್ಕೂ ಟ್ಯಾಬ್ಲೋ ಇಳಿಸಿ ಶೋಭಾಯಾತ್ರೆಗೆ ಮೆರುಗು ನೀಡಿದ್ದಾರೆ. ವೇಷ ತೊಟ್ಟು ಕ್ರೋಢೀಕರಿಸಿದ ಒಟ್ಟು 1,67,649 ರೂಪಾಯಿಗಳ ಚೆಕ್ಕನ್ನ ಧರ್ಮ ನಗರದ ನಾಗ ಸಾನಿಧ್ಯದಲ್ಲಿ ಟೀಮ್ ಹನುಮಾನ್ ಯುವಕರು ಹಿರಿಯರ ಕೈಯಿಂದ ರಂಜಿನಿ ಅವರಿಗೆ ಹಸ್ತಾಂತರಿಸಿದ್ದಾರೆ. ಕಳೆದ ವರ್ಷವೂ ಯುವಕರು ನವರಾತ್ರಿಗೆ ವೇಷ ಧರಿಸಿ ಸಂಗ್ರಹಗೊಂಡ 1,26,000 ರೂ.ಗಳನ್ನ ಮೂಡುಬಿದಿರೆಯ ಐದು ವರ್ಷದ ಕ್ಯಾನ್ಸರ್ ಪೀಡಿತ ಬಾಲಕಿ ಶ್ರೇಯಾ ಎಂಬವಳಿಗೆ ನೀಡಿದ್ದು ಆಕೆ ಈಗ ಕ್ಯಾನ್ಸರ್ ನಿಂದ ಗುಣಮುಖವಾಗಿ ಶಾಲೆಗೆ ತೆರಳುತ್ತಿರುವುದು ಖುಷಿ ಕೊಟ್ಟಿದೆ ಎಂದು ತಂಡದ ಮುಖ್ಯಸ್ಥ ಜಗದೀಶ್ ಗೋಳಿಯಾಡಿ ತಿಳಿಸಿದ್ದಾರೆ.
ಸರಕಾರಿ ಆಸ್ಪತ್ರೆಯ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿರುವ ಖಾಸಗಿ ಮೆಡಿಕಲ್ ಮಾಫಿಯಾಗಳ ಮುಂದೆ ಬಡ ಜನರು ಕಾಯಿಲೆ ಗುಣಪಡಿಸಲು ದಿನನಿತ್ಯವೂ ಭಿಕ್ಷೆ ಬೇಡುವ ಸ್ಥಿತಿ ಬಂದೊದಗಿದೆ. ಇಂತಹ ಕಾಲ ಘಟ್ಟದಲ್ಲಿ ಪರರ ಕಣ್ಣೀರೊರೆಸಲು ವೇಷ ಧರಿಸಿ ಹಣ ಸಂಗ್ರಹಿಸುವ ಯುವಕರ ಉದಾರತೆಗೆ ಶಹಬಾಷ್ ಎನ್ನಲೇ ಬೇಕು.
Ullal Five year old girl suffers from Heart issue, Youths collect money by dancing for Dasara, donate 1.70 lakhs in Mangalore.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm