ಬ್ರೇಕಿಂಗ್ ನ್ಯೂಸ್
19-06-23 09:01 pm Mangalore Correspondent ಕರಾವಳಿ
ಮಂಗಳೂರು, ಜೂನ್ 19: ಕೇಂದ್ರ ಸರಕಾರ ಅಕ್ಕಿ ಕೊಡದೆ ಬಡವರ ಹೊಟ್ಟೆಗೆ ಕಲ್ಲು ಹಾಕಿದೆ. ಪುಕ್ಸಟ್ಟೆ ಅಲ್ಲ, ದುಡ್ಡು ಕೊಟ್ಟರೂ ಕೊಡಲ್ಲ ಅನ್ನುವ ಬಿಜೆಪಿ ಸರಕಾರದ ನಡೆ ಖಂಡನೀಯ. ಈ ರೀತಿಯ ನಡೆಯನ್ನು ಖಂಡಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದು, ಬಂಟ್ವಾಳದಲ್ಲಿ ನಾವು ಅನ್ನದ ಬಟ್ಟಲಿಗೆ ಬಡಿದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಹಿಂದೆ ಕೊಲ್ಲೂರು ದೇವಸ್ಥಾನದಿಂದ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿ ಹಣ ಕಲ್ಲಡ್ಕದ ಎರಡು ಶಾಲೆಗಳಿಗೆ ಹೋಗುತ್ತಿದ್ದುದನ್ನು ತಡೆದಿದ್ದೆ. ನಾವು ಶಾಲೆಗೆ ಅಕ್ಕಿ ಕೊಡುವುದನ್ನು ತಡೆದಿಲ್ಲ. ದೇವಸ್ಥಾನದ ಅಭಿವೃದ್ಧಿಗೆ ವಿನಿಯೋಗ ಆಗಬೇಕಿದ್ದ ಹಣ ಶಾಲೆಗೆ ಸಂದಾಯ ಆಗುತ್ತಿದ್ದುದನ್ನು ತಡೆದಿದ್ದೆ. ಆದರೆ ನಾನು ಅಕ್ಕಿ ಕಸಿದಿದ್ದೇನೆಂದು ಹೇಳಿ ಶಾಲಾ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ಅನ್ನದ ಬಟ್ಟಲು ಒಡೆದು ಪ್ರತಿಭಟನೆ ನಡೆಸಿದ್ದರು. ಈಗ ಅದೇ ನೀತಿಯನ್ನು ನಾವು ಕೇಂದ್ರ ಸರಕಾರದ ವಿರುದ್ಧ ಪ್ರಯೋಗ ಮಾಡುತ್ತೇವೆ ಎಂದು ಹೇಳಿದರು.
ಬಿಪಿಎಲ್ ಅಂದರೆ ಬಡವರಿಗೆ ಅಕ್ಕಿ ನೀಡುವುದಕ್ಕೆ ಕೇಂದ್ರದ ಬಿಜೆಪಿ ಸರಕಾರ ತಡೆ ಹಾಕಿದೆ. ಫುಡ್ ಕಾರ್ಪೊರೇಶನ್ ಸಂಸ್ಥೆಯವರು ಅಕ್ಕಿ ಕೊಡುತ್ತೇವೆ ಎಂದರೂ, ರಾಜಕೀಯ ಕಾರಣಕ್ಕೆ ತಡೆದಿದ್ದಾರೆ. ಹಿಂದೆ ಯುಪಿಎ ಸರಕಾರ ಇದ್ದಾಗ ಛತ್ತೀಸ್ಗಢದಲ್ಲಿ ರಮಣಸಿಂಗ್ ಸರ್ಕಾರ ಒಂದು ರೂಪಾಯಿಗೆ ಅಕ್ಕಿ ನೀಡುವುದಾಗಿ ಹೇಳಿದ್ದರು. ಅದಕ್ಕೆ ಯುಪಿಎ ಸರಕಾರ ತಡೆ ಹಾಕಲಿಲ್ಲ. ಆನಂತರ, 2013ರಲ್ಲಿ ಸಿದ್ದರಾಮಯ್ಯ ಸರಕಾರ ಏಳು ಕೆಜಿ ಅಕ್ಕಿಯನ್ನು ಯುಪಿಎ ಸರಕಾರ ಇದ್ದಾಗಲೇ ಆರಂಭಿಸಿತ್ತು. ಆನಂತರ, ಮೋದಿ ಸರಕಾರ ಬಂದ ಮೇಲೆ ನಾವು ಅಕ್ಕಿ ಕೊಡುತ್ತಿದ್ದುದನ್ನು ಮೋದಿ ಕೊಡುವ ಅಕ್ಕಿಯೆಂದು ಬಿಜೆಪಿಯವರು ಪ್ರಚಾರ ಮಾಡಿದ್ದರು. ಈಗ ಅಕ್ಕಿ ಕೊಡುವುದಕ್ಕೇ ಬಿಜೆಪಿ ಅಡ್ಡಿ ಮಾಡಿದ್ದಾರೆ ಎಂದರು ರಮಾನಾಥ ರೈ.
ಬಿಟ್ ಕಾಯಿನ್ ಹಗರಣ ಸೇರಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನು ಕಾಂಗ್ರೆಸ್ ಸರಕಾರ ತನಿಖೆ ನಡೆಸುತ್ತಿಲ್ಲ ಎಂಬ ಬಿಜೆಪಿ ಸಂಸದ ಪ್ರತಾಪಸಿಂಹ ಹೇಳಿಕೆಯ ಬಗ್ಗೆ ಕೇಳಿದ್ದಕ್ಕೆ, ಕಾಂಗ್ರೆಸ್ ಸರಕಾರ ಬಂದು ಎಷ್ಟು ತಿಂಗಳಾಯ್ತು, ಎಲ್ಲ ತನಿಖೆಯೂ ಆಗತ್ತೆ. ನಾವು ಯಾವುದೇ ಅಡ್ಜಸ್ಟ್ ರಾಜಕಾರಣ ಮಾಡೋದಿಲ್ಲ ಎಂದರು. ಮಂಗಳೂರಿನಲ್ಲಿ ಉಚಿತ ಸರ್ಕಾರಿ ಬಸ್ ಯೋಜನೆಯ ಫಲ ಹತ್ತು ಪರ್ಸೆಂಟ್ ಜನರಿಗೂ ಲಭಿಸಿಲ್ಲ, ನಗರ ಭಾಗದಲ್ಲಿ ನರ್ಮ್ ಬಸ್ ಕೂಡ ಪೂರ್ತಿಯಾಗಿ ಓಡಾಟ ನಡೆಸುತ್ತಿಲ್ಲ. ಈ ಬಗ್ಗೆ ಒತ್ತಾಯ ಮಾಡುತ್ತೀರಾ ಎಂಬ ಪ್ರಶ್ನೆಗೆ, ಅದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದರು.
Union Govt Trying to Scuttle Karnataka's Free Rice Scheme, poor people are suffering slams Ramanth Rai in Mangalore.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
22-08-25 10:00 pm
HK News Desk
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
23-08-25 03:04 pm
Mangalore Correspondent
Mervin Mendonca Accident, Udupi, Mangalore: ರ...
23-08-25 01:29 pm
ಹಿಂದುಗಳ ಹಬ್ಬ, ಆಚರಣೆಗೆ ತೊಂದರೆ ಇಲ್ಲ, ಬಿಜೆಪಿ ಶಾಸ...
22-08-25 05:07 pm
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
23-08-25 11:11 am
Mangaluru Correspondent
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm