ಬ್ರೇಕಿಂಗ್ ನ್ಯೂಸ್
07-01-23 10:45 pm Mangalore Correspondent ಕರಾವಳಿ
ಮಂಗಳೂರು, ಜ.7: ಸಾರ್ವಜನಿಕರ ಭಾರೀ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಕಟೀಲು ದೇವಸ್ಥಾನದಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದಕ್ಕೆ ಮತ್ತೆ ಜಿಲ್ಲಾಧಿಕಾರಿ ತಡೆ ನೀಡಿದ್ದಾರೆ. ಹೀಗಾಗಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಕಾರ್ಯವನ್ನು ಶನಿವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ದಿಢೀರ್ ಆಗಿ ನಿಲ್ಲಿಸಲಾಗಿದೆ.
ಜನವರಿ 1ರಿಂದ ಕಟೀಲು ದೇವಸ್ಥಾನ ಪರಿಸರದಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹ ಆರಂಭಗೊಂಡಿತ್ತು. ಆದರೆ, ಕಟೀಲು ಭಾಗದ ಭಕ್ತರು ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ಕಳೆದ ಆಗಸ್ಟ್ ತಿಂಗಳಲ್ಲಿ ಇದೇ ರೀತಿ ಪೇ ಪಾರ್ಕಿಂಗ್ ಆರಂಭಿಸುವುದೆಂದು ನಿರ್ಧಾರ ಬಂದಾಗಲೇ ಭಕ್ತರಿಂದ ವಿರೋಧ ಕೇಳಿಬಂದಿತ್ತು. ಆನಂತರ, ಸಂಸದ ನಳಿನ್ ಕುಮಾರ್ ಸೂಚನೆಯಂತೆ ಶುಲ್ಕ ಸಂಗ್ರಹಿಸುವ ನಿರ್ಧಾರ ಮುಂದೂಡಲಾಗಿತ್ತು. ಆದರೆ, ಅದಕ್ಕೂ ಮೊದಲೇ ಪೇ ಪಾರ್ಕಿಂಗ್ ಬಗ್ಗೆ ಮಂಗಳೂರಿನ ವರಾಹ ಅಸೋಸಿಯೇಟ್ಸ್ ಹೆಸರಲ್ಲಿ ಪ್ರವೀಣ್ ಎಂಬ ವ್ಯಕ್ತಿ ಪೇ ಪಾರ್ಕಿಂಗ್ ಗುತ್ತಿಗೆ ಪಡೆದಿದ್ದರು. ಅದಕ್ಕಾಗಿ ಮುಜರಾಯಿ ಇಲಾಖೆಯಲ್ಲಿ 15 ಲಕ್ಷ ಡಿಪಾಸಿಟ್ ಇಟ್ಟು ಶುಲ್ಕ ಸಂಗ್ರಹಕ್ಕೆ ಮುಂದಾಗಿದ್ದರು. ಗುತ್ತಿಗೆ ಪಡೆದು ಐದಾರು ತಿಂಗಳಾದ್ರೂ ಒಂದೆಡೆ ತನ್ನ ಡಿಪಾಸಿಟ್ ಹಣ ಪೆಂಡಿಂಗ್ ಆಗಿದ್ದರಿಂದ ಗುತ್ತಿಗೆ ವಹಿಸಿಕೊಂಡಿದ್ದ ವ್ಯಕ್ತಿ ಕೋರ್ಟಿಗೆ ಹೋಗಿ ಕಟೀಲು ದೇವಸ್ಥಾನದ ಆಡಳಿತಕ್ಕೆ ನೋಟೀಸ್ ನೀಡಿದ್ದರು.

ಕೋರ್ಟ್ ಮೆಟ್ಟಿಲೇರಿದ್ದ ಗುತ್ತಿಗೆದಾರ
ಕೋರ್ಟ್ ಸೂಚನೆಯಂತೆ, ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದಕ್ಕೆ ದೇವಸ್ಥಾನದ ಕಮಿಟಿ ಇತ್ತೀಚೆಗೆ ಅನುಮತಿ ನೀಡಿತ್ತು. ಅದರಂತೆ, ಈ ಬಾರಿ ಹಠಾತ್ ಪಾರ್ಕಿಂಗ್ ಶುಲ್ಕ ಆರಂಭಗೊಂಡಿದ್ದರೆ, ಇತ್ತ ದೇವಸ್ಥಾನದ ಆಡಳಿತದ ಬಗ್ಗೆ ಭಾರೀ ಟೀಕೆ ಕೇಳಿಬಂದಿತ್ತು. ಯಾಕಂದ್ರೆ, ಕಳೆದ ಬಾರಿ ಬ್ರಹ್ಮಕಲಶದ ಸಂದರ್ಭದಲ್ಲಿ ಈಗ ಪಾರ್ಕಿಂಗ್ ಮಾಡಿರುವ ಜಾಗವನ್ನ ಖಾಸಗಿ ವ್ಯಕ್ತಿಗಳಿಂದ ಖರೀದಿ ಮಾಡಲಾಗಿತ್ತು. ಭೂದಾನ ಯೋಜನೆಯಡಿ ಮುಂಬೈನ ಉದ್ಯಮಿಗಳಿಂದ ಪಡೆದಿದ್ದ ದೇಣಿಗೆ ಮೊತ್ತದಲ್ಲಿ ಜಾಗ ಖರೀದಿಸಲಾಗಿತ್ತು. ಯೋಜನೆಗೆ ಹಲವಾರು ಭಕ್ತರು ದೇಣಿಗೆ ನೀಡಿದ್ದು, ಆ ಹಣದಲ್ಲಿ ಕಟೀಲು ಆಸುಪಾಸಿನಲ್ಲಿ ಎರಡು- ಮೂರು ಎಕರೆ ಭೂಮಿಯನ್ನು ಖರೀದಿಸಲಾಗಿದೆ. ಹಾಗಾಗಿ, ಭಕ್ತರ ಹಣದಲ್ಲಿ ಪಡೆದ ಜಾಗದಲ್ಲೀಗ ವಾಹನ ನಿಲ್ಲಿಸಲು ಸಾಮಾನ್ಯ ಭಕ್ತರಿಗೆ ಪಾರ್ಕಿಂಗ್ ಶುಲ್ಕ ವಿಧಿಸುವುದಕ್ಕೆ ಕಟೀಲಿನ ಭಕ್ತರಿಂದಲೇ ವಿರೋಧ ಬಂದಿತ್ತು.


ದೇವರು ಕೊಟ್ಟರೂ ಪೂಜಾರಿ ಬಿಡಲ್ಲ..
ಪಾರ್ಕಿಂಗ್ ಶುಲ್ಕದ ವಿಚಾರ ಇಷ್ಟು ಜಟಾಪಟಿಗೆ ಒಳಗಾಗಲು ಕಾರಣ ಸಂಸದ ನಳಿನ್ ಕುಮಾರ್ ಮತ್ತು ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಅನ್ನುವ ಮಾತುಗಳು ಕೇಳಿಬರುತ್ತಿವೆ. ಕಳೆದ ಬಾರಿ ಜನ ವಿರೋಧ ಬಂದಾಗಲೇ ಸಂಸದ ನಳಿನ್ ಕುಮಾರ್, ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದು ಬೇಡವೆಂದು ಮುಜರಾಯಿ ಇಲಾಖೆಯ ಆಯುಕ್ತರಿಗೂ ತಿಳಿಸಿದ್ದರು. ದೇವಸ್ಥಾನದ ಕಮಿಟಿಗೂ ಸೂಚನೆ ನೀಡಿದ್ದರು. ಆದರೆ ಈ ಬಗ್ಗೆ ಮುಜರಾಯಿ ಇಲಾಖೆಯಿಂದ ಪಾರ್ಕಿಂಗ್ ಶುಲ್ಕ ರದ್ದುಪಡಿಸಿ ಮರು ಆದೇಶ ಮಾಡಿರಲಿಲ್ಲ. ಮೊದಲಿಗೆ, ಬೇರೆಲ್ಲ ಸರಕಾರಿ ದೇವಸ್ಥಾನಗಳಲ್ಲಿರುವಂತೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಆದೇಶ ಮಾಡಿದ್ದೇ ಮುಜರಾಯಿ ಆಯುಕ್ತರಾಗಿದ್ದರಿಂದ ಅವರೇ ರದ್ದುಪಡಿಸಿ ಮರು ಆದೇಶ ನೀಡಬೇಕಿತ್ತು. ಆದರೆ, ಇಲ್ಲಿನ ಜನಪ್ರತಿನಿಧಿಗಳು ರೋಹಿಣಿ ಸಿಂಧೂರಿಗೆ ಒತ್ತಡ ಹೇರಿ ಮರು ಆದೇಶ ಹೊರಡಿಸುವಲ್ಲಿ ವಿಫಲರಾಗಿದ್ದರು. ಆಯುಕ್ತರು ನೀಡಿದ್ದ ಆದೇಶ ಹಾಗೆಯೇ ಉಳಿದುಕೊಂಡಿದ್ದರಿಂದ ಗುತ್ತಿಗೆ ವಹಿಸಿಕೊಂಡಿದ್ದ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿ ತನ್ನ ಕೆಲಸ ಮಾಡಿಸಿಕೊಂಡಿದ್ದರು. ಇದೀಗ ಜಿಲ್ಲಾಧಿಕಾರಿಯವರು ತಡೆಯಾಜ್ಞೆ ನೀಡಿದ್ದಾರೆ, ಇದು ಎಷ್ಟು ದಿನಕ್ಕೆ ಉಳಿದುಕೊಳ್ಳುತ್ತೆ ಕಾದು ನೋಡಬೇಕು.

ಪ್ರತಿಭಟನೆಗೆ ತಯಾರಾಗಿದ್ದ ಭಕ್ತರು
ಇದೇ ವೇಳೆ, ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ವಿರೋಧಿಸಿ ಸ್ಥಳೀಯ ಭಕ್ತರು ದೇವಸ್ಥಾನ ಕಮಿಟಿ ವಿರುದ್ಧ ಪ್ರತಿಭಟನೆಗೂ ತಯಾರಾಗಿತ್ತು. ಈ ಬಗ್ಗೆ ಹೆಡ್ ಲೈನ್ ಕರ್ನಾಟಕ ವರದಿಯನ್ನೂ ಮಾಡಿತ್ತು. ಒಂದೆಡೆ ಜನ ವಿರೋಧ, ಮತ್ತೊಂದೆಡೆ ಮಾಧ್ಯಮ ವರದಿಯಿಂದ ಎಚ್ಚೆತ್ತ ಜಿಲ್ಲಾಧಿಕಾರಿ ದೇವಸ್ಥಾನ ಕಮಿಟಿಯವರನ್ನ ಕರೆದು ಸಭೆ ನಡೆಸಿದ್ದರು. ಆನಂತರ, ದೇವಸ್ಥಾನ ಕಮಿಟಿಗೆ ಪಾರ್ಕಿಂಗ್ ಶುಲ್ಕ ತಾತ್ಕಾಲಿಕ ರದ್ದುಪಡಿಸಲು ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿ ಸೂಚನೆಯಂತೆ, ಗುತ್ತಿಗೆ ಪಡೆದಿದ್ದ ವರಾಹ ಅಸೋಸಿಯೇಟ್ಸ್ ಸಂಸ್ಥೆಗೆ ದೇವಸ್ಥಾನದ ಕಡೆಯಿಂದ ವರದಿ ಹೋಗುತ್ತಿದ್ದಂತೆ ಪಾರ್ಕಿಂಗ್ ಲೂಟಿ ನಿಂತುಬಿಟ್ಟಿದೆ.
Headline Karnataka news impact, collecting parking fees at Kateel temple in Mangalore held, Dc orders. There was a huge spark on social media about the collection of parking fees at the temple. Headline Karnataka had made a detailed report on the injustice to the devotees.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm