ಬ್ರೇಕಿಂಗ್ ನ್ಯೂಸ್
28-06-22 05:45 pm Mangalore Correspondent ಕರಾವಳಿ
ಮಂಗಳೂರು, ಜೂನ್ 28: ನಗರದ ಪಂಪ್ವೆಲ್ ಮೇಲ್ಸೇತುವೆಯ ಅಡಿಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಹಠಾತ್ತಾಗಿ ರಸ್ತೆ ಕುಸಿದು ನೀರು ಚಿಮ್ಮತೊಡಗಿದ್ದು ಸ್ಥಳೀಯರು ಏನಾಗುತ್ತಿದೆ ಎಂದು ತಿಳಿಯದೆ ಗಲಿಬಿಲಿ ಒಳಗಾಗಿದ್ದಾರೆ. ಕೆಲವು ಜನರು ಸ್ಥಳದಲ್ಲಿ ಭೂಕುಸಿತ ಆಗುತ್ತೋ ಅನ್ನುವ ಭಯಕ್ಕೆ ಒಳಗಾಗಿದ್ದಾರೆ. ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಕೂಡಲೇ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದಾರೆ. ಬಳಿಕ ಮಹಾನಗರ ಪಾಲಿಕೆಯ ನೀರು ಸರಬರಾಜು ಇಲಾಖೆಯ ಸಿಬಂದಿಗೆ ವಿಷಯ ತಿಳಿಸಿದ್ದಾರೆ.
ತುಂಬೆ ಅಣೆಕಟ್ಟಿನಿಂದ ಮಂಗಳೂರು ನಗರಕ್ಕೆ ಪೂರೈಕೆಯಾಗುವ ನೀರಿನ ಪೈಪ್ ಲೈನ್ ಪಂಪ್ವೆಲ್ ರಸ್ತೆಯ ಅಡಿ ಭಾಗದಿಂದ ಬೆಂದೂರುವೆಲ್ ಪಂಪ್ ಹೌಸ್ ಗೆ ಸಂಪರ್ಕ ಹೊಂದಿದೆ. ಅದರಲ್ಲಿ ಒಂದು 38 ಇಂಚ್ ವ್ಯಾಸದ ನೀರಿನ ಪೈಪ್ ಲೈನ್ ಆಗಿದ್ದರೆ, ಇನ್ನೊಂದು ಪಡೀಲ್ ಪಂಪ್ ಹೌಸ್ ನಿಂದ ಸಬ್ ಆಗಿ ಲೇಡಿಹಿಲ್ ಪಂಪ್ ಹೌಸ್ಗೆ ಪೂರೈಕೆಯಾಗುತ್ತಿರುವ 18 ಇಂಚು ವ್ಯಾಸದ ನೀರಿನ ಪೈಪ್ ಲೈನ್. ಮಳೆಯಿಂದಾಗಿ ರಸ್ತೆ ಸಡಿಲಗೊಂಡು ಹೆದ್ದಾರಿಯಲ್ಲಿ ಭಾರದ ವಾಹನಗಳು ಸಾಗುತ್ತಿದ್ದಾಗ ಅಡಿಭಾಗದಲ್ಲಿ ಸಾಗಿದ್ದ 18 ಇಂಚು ವ್ಯಾಸದ ಪೈಪ್ ಲೈನ್ ಒಡೆದು ಹೋಗಿದ್ದು, ನೀರಿನ ರಭಸಕ್ಕೆ ರಸ್ತೆಯನ್ನೇ ಮೇಲಕ್ಕೆ ಚಿಮ್ಮುತ್ತಾ ನೀರು ಹೊರಬಂದಿದೆ.




ಕಂಕನಾಡಿ ಕಡೆಯಿಂದ ಬರುವ ವಾಹನಗಳು ಸೇತುವೆಯ ಅಡಿಭಾಗದಿಂದಾಗಿ ಗರೋಡಿಯತ್ತ ಸಾಗಲು ನಡುವಿನ ಸರ್ಕಲ್ ದಾಟುವಲ್ಲಿಯೇ ನಾಲ್ಕೈದು ಮೀಟರ್ ವ್ಯಾಪ್ತಿಯಲ್ಲಿ ನೀರು ಚಿಮ್ಮತೊಡಗಿತ್ತು. ಆನಂತರ, ನೀರಿನ ಪೈಪ್ ಲೈನನ್ನು ಬಂದ್ ಮಾಡಿದ್ದು, ಪೈಪ್ ಒಡೆದಿರುವುದು ಎಲ್ಲಿ ಅನ್ನುವುದನ್ನು ಪತ್ತೆ ಹಚ್ಚಲು ಕಾಮಗಾರಿ ಆರಂಭಿಸಿದ್ದಾರೆ. ಹಿಂದೆ ಈ ಭಾಗದಲ್ಲಿ ನೀರಿನ ತೋಡು ಇತ್ತು. ಅದರ ಬದಿಯಲ್ಲೇ ನೀರಿನ ಪೈಪ್ ಲೈನ್ ಹಾಕಲಾಗಿತ್ತು. ಆನಂತರ ರಸ್ತೆ ವಿಸ್ತರಣೆಯಾದ ಸಂದರ್ಭದಲ್ಲಿ ಅದರ ಮೇಲ್ಗಡೆ ಮಣ್ಣು ಮುಚ್ಚಿ ರಸ್ತೆ ಮಾಡಲಾಗಿತ್ತು. ರಸ್ತೆಯಾಗಿ ಎರಡು ವರ್ಷ ಆಗುತ್ತಲೇ ನೀರಿನ ಪೈಪ್ ಲೈನ್ ಒಡೆದು ಹೋಗಿದೆ.



ಸದ್ಯಕ್ಕೆ ಲೇಡಿಹಿಲ್ ಪಂಪ್ ಹೌಸ್ ಗೆ ಪೂರೈಕೆಯಾಗುವ 18 ಇಂಚು ವ್ಯಾಸದ ನೀರಿನ ಪೈಪ್ ಲೈನನ್ನು ಮಾತ್ರ ಕಡಿತ ಮಾಡಲಾಗಿದೆ. ಇದರಿಂದ ಸುಲ್ತಾನ್ ಬತ್ತೇರಿ, ಉರ್ವಾ, ಮಣ್ಣಗುಡ್ಡ, ಲೇಡಿಹಿಲ್, ಕಾಪಿಕಾಡು, ಚಿಲಿಂಬಿ, ಕೋಡಿಕಲ್ ಆಸುಪಾಸಿನ ವ್ಯಾಪ್ತಿಯ ಏಳು ಕಾರ್ಪೊರೇಟರ್ ಏರಿಯಾಗಳಿಗೆ ನೀರಿನ ಪೂರೈಕೆ ಸ್ಥಗಿತ ಆಗಿದೆ. ಪೈಪ್ ಒಡೆದಿದ್ದು ಎಲ್ಲಿ ಅನ್ನೋದು ಪತ್ತೆಯಾದಲ್ಲಿ ಇಂದು ರಾತ್ರಿಯೇ ಸರಿಪಡಿಸಲಾಗುವುದು, ಇಲ್ಲದೇ ಹೋದಲ್ಲಿ ಒಂದು ದಿನ ವಿಳಂಬ ಆಗಬಹುದು ಎಂದು ಕಾಮಗಾರಿ ಸ್ಥಳದಲ್ಲಿದ್ದ ನೀರಾವರಿ ಇಲಾಖೆಯ ಸಿಬಂದಿ ತಿಳಿಸಿದ್ದಾರೆ.
As the water pipeline connecting from Thumbe to Bendorewell got damaged at Pumpwell, heavy water spillage and traffic snarl was witnessed near the flyover here on Tuesday June 28.The incident created inconvenience to the vehicular movement. Due to the incident, water is flowing on the road which led to cracks on the tar road under the flyover.
30-05-26 06:45 pm
HK News Staffer
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
30-05-26 09:52 pm
HK News Desk
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am