ಬ್ರೇಕಿಂಗ್ ನ್ಯೂಸ್
03-09-22 07:19 pm Source: Vijayakarnataka ಡಾಕ್ಟರ್ಸ್ ನೋಟ್
ತರಕಾರಿಗಳು ಪ್ರತಿಯೊಂದು ಗುಣ ನಮ್ಮ ಆರೋಗ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯಕವಾಗಿರುತ್ತವೆ. ಅದಕ್ಕೆ ಹಿರಿಯರು ಹೇಳುವುದು ಅದು ಕಹಿ, ಅದು ಒಗರು ಎಂದು ಮೂಗು ಮುರಿಯುವ ಬದಲು ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಬೇಕು ಎಂದು.
ಸೋರೆಕಾಯಿ ಕೂಡ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ತರಕಾರಿ. ಇದು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದರೆ ನೀವು ನಂಬಲೇಬೇಕು. ಈ ಲೇಖನದಲ್ಲಿ ಸೋರೆಕಾಯಿಯ ಗುಣವೇನು, ಅದು ಯಾವ ರೀತಿ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಅವರು ತಿಳಿಸಿದ್ದಾರೆ ಇಲ್ಲಿದೆ ನೋಡಿ.
ಸೋರೆಕಾಯಿ
ಸೌತೆಕಾಯಿ ಪ್ರಬೇಧಕ್ಕೆ ಸೇರಿರುವ ಸೋರೆಕಾಯಿ ಕಹಿ ರುಚಿಯನ್ನು ಹೊಂದಿದ್ದು ದೇಹಕ್ಕೆ ಲಘು ಆಹಾರವಾಗಿದೆ. ಇದು ದೇಹಕ್ಕೆ ಶೀತವನ್ನು ನೀಡುತ್ತದೆ. ಜೊತೆಗೆ ವಾತ ಮತ್ತು ಪಿತ್ತ ಗುಣವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ.
ಆದರೆ ನೆನಪಿಡಿ ಹೆಚ್ಚು ಸೋರೆಕಾಯಿ ಸೇವನೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ವಾಕರಿಕೆಯ ಅನುಭವ ನೀಡುತ್ತದೆ. ಜೊತೆಗೆ ಹೃದಯಕ್ಕೆ ಸೋರೆಕಾಯಿ ಒಳ್ಳೆಯದಲ್ಲ. ಹೀಗಾಗಿ ಹೃದಯದ ಕಾಯಿಲೆ ಇದ್ದವರು ಸೋರೆಕಾಯಿಯನ್ನು ಕಡಿಮೆ ಸೇವನೆ ಮಾಡುವುದು ಉತ್ತಮ. ಉಳಿದವರಿಗೆ ಸೋರೆಕಾಯಿ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ದೇಹದಲ್ಲಿನ ವಿಷವನ್ನು ನಿವಾರಿಸುತ್ತದೆ
ಕೆಲವೊಮ್ಮೆ ನಾವು ಸೇವಿಸುವ ಆಹಾರಗಳು ದೇಹದಲ್ಲಿ ವಿಷವಾಗಿ ಮಾರ್ಪಾಡಾಗಬಹುದು. ಅಂತಹ ಸಂದರ್ಭದಲ್ಲಿ ಸೋರೆಕಾಯಿಯನ್ನು ಸೇವನೆ ಮಾಡುವುದು ಒಳ್ಳೆಯದು.
ಸೋರೆಕಾಯಿಯ ವಿಷಾಗ್ನಿ ಗುಣವನ್ನು ಹೊಂದಿರುತ್ತದೆ. ಹೀಗಾಗಿ ದೇಹವನ್ನು ನಿರ್ವಿಷಗೊಳಿಸಲು (ಶುದ್ಧಗೊಳಿಸಲು) ಸಹಾಯ ಮಾಡುತ್ತದೆ. ಸೋರೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದು ಒಳ್ಳೆಯದು.
ಲಿವರ್ನ ಆರೋಗ್ಯಕ್ಕೆ ಒಳ್ಳೆಯದು
ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ 5 ಎಂಎಲ್ನಷ್ಟು ಸೋರೆಕಾಯಿ ಜ್ಯೂಸ್ ಸೇವನೆ ಮಾಡುವುದರಿಂದ ಲಿವರ್ನ ಆರೋಗ್ಯ ಉತ್ತಮವಾಗಿರುತ್ತದೆ.
ಅಲ್ಲದೆ ಸೋರೆಕಾಯಿಯ ಜ್ಯೂಸ್ ಸೇವನೆಯಿಂದ ಬಾಯಿಯ ಕುಹರವೂ ಆರೋಗ್ಯವಾಗಿರುತ್ತದೆ. ಹೀಗಾಗಿ ತಾಜಾ ಸೋರೆಕಾಯಿಯನ್ನು ತಂದು ಬಳಕೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಚರ್ಮದ ಆರೋಗ್ಯಕ್ಕೆ
ಹುಳುಗಳು ಕಚ್ಚಿದರೆ, ಗಾಯವಾದರೆ ಅಥವಾ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದರೆ ಸೋರೆಕಾಯಿಯ ಪೇಸ್ಟ್ ಅಥವಾ ಸೋರೆಕಾಯಿ ಬಳ್ಳಿಯ ಎಲೆಯನ್ನು ಪೇಸ್ಟ್ ಮಾಡಿ ಹಚ್ಚಿದರೆ ಕಲೆಗಳಿಲ್ಲದಂತೆ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.
ಸೋರೆಕಾಯಿಯು ರಕ್ತವನ್ನು ಶುದ್ಧೀಕರಿಸಿ ಚರ್ಮವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ.
ಹೊಟ್ಟೆ ಹುಳುಗಳ ಸಮಸ್ಯೆ ಇದ್ದರೆ
ಹೊಟ್ಟೆಯಲ್ಲಿ ಕೆಲವೊಮ್ಮೆ ಹುಳುಗಳು ಉಂಟಾಗುತ್ತವೆ. ಇವು ಹೊಟ್ಟೆ ನೋವು, ವಾಂತಿಗೆ ಕಾರಣವಾಗುತ್ತವೆ. ಇವುಗಳನ್ನು ನಿವಾರಣೆ ಮಾಡಲು ಸೋರೆಕಾಯಿ ಅತ್ಯುತ್ತಮವಾಗಿದೆ. ಸೋರೆಕಾಯಿ ಜ್ಯೂಸ್ ಸೇವನೆ ಅಥವಾ ಪದಾರ್ಥದಲ್ಲಿ ಸೋರೆಕಾಯಿಯನ್ನು ಬಳಸುವುದರಿಂದ ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತದೆ.
ಇನ್ನು ಆಯುರ್ವೇದದಲ್ಲಿ ಸೋರೆಕಾಯಿಯನ್ನು ಪಂಚಕರ್ಮ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ದೇಹವನ್ನು ಶುದ್ಧಿಕರಿಸುವಲ್ಲಿ ಸೋರೆಕಾಯಿ ಆಯುರ್ವೇದ ಪದ್ಧತಿಯಲ್ಲಿ ಹೆಚ್ಚು ಬಳಕೆಯಾಗುತ್ತದೆ.
Doctor Explain Bottle Gourd Health Benefits.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
05-08-25 10:39 pm
Bangalore Correspondent
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm