ಬ್ರೇಕಿಂಗ್ ನ್ಯೂಸ್
03-03-21 09:08 pm Source: FILMIBEAT ಸಿನಿಮಾ
ಸುಶಾಂತ್ ಸಿಂಗ್ ರಜಪೂತ್ ಹಾಗೂ ರಿಯಾ ಚಕ್ರವರ್ತಿ ಪರಸ್ಪರ ಪ್ರೇಮದಲ್ಲಿದ್ದಾಗ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಲು ತಯಾರಾಗಿದ್ದರು. ಕತೆ, ನಿರ್ಮಾಪಕರೂ ಓಕೆ ಆಗಿದ್ದರು. ಆದರೆ ಸಿನಿಮಾ ಸೆಟ್ಟೇರುವ ಹೊತ್ತಿಗೆ ಲಾಕ್ಡೌನ್ ಆಯಿತು, ಆ ನಂತರ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾದರು.
ಆದರೆ ಆಗ ನಿಂತಿದ್ದ ಸುಶಾಂತ್ ಸಿಂಗ್-ರಿಯಾ ಚಕ್ರವರ್ತಿ ಸಿನಿಮಾ ಈಗ ಮತ್ತೆ ಪ್ರಾರಂಭವಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಬದಲಿಗೆ ಬೇರೊಬ್ಬ ನಾಯಕನನ್ನು ಹಾಕಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ ನಿರ್ದೇಶಕರು.
ರಿಯಾ ಜೊತೆಗೆ ಈಗಾಗಲೇ 'ಚೆಹರೆ' ಸಿನಿಮಾ ಮಾಡಿರುವ ನಿರ್ದೇಶಕ ರೂಮಿ ಜಫ್ರಿ, ರಿಯಾ ಜೊತೆ ಮತ್ತೊಂದು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಿನಿಮಾದ ಕತೆಯೂ ಈಗಾಗಲೇ ತಯಾರಾಗಿದ್ದು, ನಾಯಕ-ನಾಯಕಿ ಪಾತ್ರವೂ ಸಹ ಅಂತಿಮವಾಗಿದೆಯಂತೆ.
ಸುಶಾಂತ್ ಸಿಂಗ್ ಹಾಗೂ ರಿಯಾ ಚಕ್ರವರ್ತಿ ಅವರೊಟ್ಟಿಗೆ ಲಾಕ್ಡೌನ್ ಗೂ ಮೊದಲೇ ಸಿನಿಮಾ ಯೋಜನೆ ಆಗಿತ್ತು. ಲಂಡನ್ನಲ್ಲಿ ನಡೆಯುವ ಪ್ರೇಮಕತಾ ಸಿನಿಮಾವನ್ನು ನಿರ್ಮಿಸುವ ಯೋಜನೆ ಮಾಡಿ ಇಬ್ಬರಿಗೂ ಕತೆ ಹೇಳಿ, ಅವರೂ ಸಹ ಒಪ್ಪಿಕೊಂಡಿದ್ದರು. ಆದರೆ ಈ ಲಾಕ್ಡೌನ್ ನಲ್ಲಿಯೇ ಬೇರೆಯೇ ನಡೆಯಿತು' ಎಂದಿದ್ದಾರೆ ರೂಮಿ ಜಫ್ರಿ.
ಸುಶಾಂತ್ ಸಿಂಗ್ ನಟಿಸಬೇಕಿದ್ದ ಸ್ಥಾನಕ್ಕೆ ಪ್ರತಿಭಾವಂತ ಸ್ಟಾರ್ ನಟನನ್ನೇ ಆಯ್ಕೆ ಮಾಡಿದ್ದಾರಂತೆ ರೂಮಿ. ಆದರೆ ಆ ನಾಯಕ ಯಾರು ಎಂದು ಮಾಧ್ಯಮಗಳ ಮುಂದೆ ಹೇಳಿಲ್ಲ. ಬದಲಿಗೆ ರಿಯಾ ಜೊತೆ ಕೆಲಸ ಮಾಡಲು ಆ ನಟನಿಗೆ ಬಹಳ ಇಷ್ಟವಿರುವುದಾಗಿ ಮಾತ್ರ ಹೇಳಿದ್ದಾರೆ. ನಾನು ಆ ನಟನಿಗೆ ಕತೆ ಹೇಳಿ ರಿಯಾ ಚಕ್ರವರ್ತಿ ನಾಯಕಿ ಎಂದು ಹೇಳಿದಾಗ, 'ನನಗೂ ಆಕೆಯೊಂದಿಗೆ ನಟಿಸಲು ಇಷ್ಟವಿದೆ.
ಆಕೆ ಸುಂದರ ಹಾಗೂ ಪ್ರತಿಭಾವಂತ ಹುಡುಗಿ. ಆಕೆ ಜಾಮೀನಿನ ಮೇಲಿದ್ದರೂ ನನಗೆ ಆಕೆಯೊಂದಿಗೆ ನಟಿಸಲು ಅಡ್ಡಿಯಿಲ್ಲ. ಸಂಜಯ್ ದತ್ ಸಹ ಜಾಮೀನಿನ ಮೇಲಿದ್ದಾಗ ಎಷ್ಟೋಂದು ಸಿನಿಮಾಗಳನ್ನು ಮಾಡಿದರು' ಎಂದು ಆ ನಟ ಹೇಳಿದ್ದಾರಂತೆ. ರಿಯಾ ಚಕ್ರವರ್ತಿ, ಅಮಿತಾಬ್ ಬಚ್ಚನ್, ಇಮ್ರಾನ್ ಅಶ್ಮಿ ಇನ್ನೂ ಹಲವರು ನಟಿಸಿರುವ 'ಚೆಹ್ರೆ' ಸಿನಿಮಾವು ಏಪ್ರಿಲ್ 30 ರಂದು ಬಿಡುಗಡೆ ಆಗುತ್ತಿದ್ದು, ಆ ಸಿನಿಮಾದ ಬಿಡುಗಡೆ ನಂತರ ರಿಯಾ ನಾಯಕಿಯಾಗಿರುವ ಹೊಸ ಸಿನಿಮಾ ಸೆಟ್ಟೇರಲಿದೆ. ಸಿನಿಮಾದ ನಿರ್ಮಾಣವನ್ನು ವಶು ಭಗ್ನಾನಿ ಮಾಡಲಿದ್ದಾರೆ.
This News Article Is A Copy Of FILMIBEAT
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 04:02 pm
Mangalore Correspondent
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm