ಬ್ರೇಕಿಂಗ್ ನ್ಯೂಸ್
02-03-21 11:18 am Source: FILMIBEAT ಸಿನಿಮಾ
ಬಿಗ್ ಬಾಸ್ ಕನ್ನಡ ಸೀಸನ್ 8ರ ಅಸಲಿ ಆಟ ಪ್ರಾರಂಭವಾಗಿದೆ. ಈಗಾಗಲೇ ಸ್ಪರ್ಧಿಗಳು 2ನೇ ದಿನದ ಆಟವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಪ್ರಾರಂಭದಲ್ಲಿ ಸಖತ್ ಜೋಶ್ ನಲ್ಲಿ ಇರುವ ಬಿಗ್ ಬಾಸ್ ಸ್ಪರ್ಧಿಗಳು ಟಾಸ್ಕ್ ಗಳನ್ನು ಅಷ್ಟೆ ಹುರುಪಿನಿಂದ ಮಾಡುತ್ತಿದ್ದಾರೆ.
ಮೊದಲ ದಿನ ಮನೆಯ ಕ್ಯಾಪ್ಟನ್ ನಡೆದಿದ್ದು, ಈ ಬಾರಿ ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿ ಬ್ರೋ ಗೌಡ ಆಯ್ಕೆಯಾಗಿದ್ದಾರೆ. ಜೊತೆಗೆ ನಾಮಿನೇಷನ್ ಪ್ರಕ್ರಿಯೆ ಸಹ ಪ್ರಾರಂಭವಾಗಿದ್ದು, ಸ್ಪರ್ಧಿಗಳು ನೇರ ನೇರ ಸಹ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಮೂಲಕ ಕೆಲವರ ಕೋಪಕ್ಕೆ ಕಾರಣರಾಗಿದ್ದಾರೆ.
ಸದ್ಯ ಬಿಗ್ ಬಾಸ್ ನಿಂದ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ. ಬಿಗ್ ಮನೆಯ ಸ್ಪರ್ಧಿಗಳು ಕೈಯಲ್ಲಿ ತಾವು ಗೆದ್ದು ಬೀಗಿದ ಪ್ರಶಸ್ತಿಯನ್ನು ಹಿಡಿದು ಭಾವುಕರಾಗಿದ್ದಾರೆ. ಹಳೆಯ ನೆನಪು, ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ನಟಿ ಶುಭಾ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾದ ಅತ್ಯುತ್ತಮ ನಟನೆಗೆ ಗೆದ್ದ ಪ್ರಶಸ್ತಿಯನ್ನು ಹಿಡಿದು ಆ ಕ್ಷಣವನ್ನು ಹಂಚಿಕೊಂಡಿದ್ದಾರೆ. 'ಈ ಪ್ರಶಸ್ತಿ ಬಳಿಕ ಒಂದು ಸಿಕ್ಕಿಲ್ಲ, ಬಳಿಕ ಎಲ್ಲಾ ಡಬ್ಬಾ ಆಕ್ಟಿಂಗ್ ಮಾಡಿರುತ್ತೇನೆ' ಎಂದು ಅವರನ್ನು ಅವರೇ ಗೇಲಿ ಮಾಡಿಕೊಂಡು ನಕ್ಕಿದ್ದಾರೆ.
ಇನ್ನು ನಟಿ ಚಂದ್ರಕಲಾ ಮೋಹನ್ ತಾನು ಗೆದ್ದ ಅವಾರ್ಡ್ ಹಿಡಿದು 'ಈ ಪ್ರಶಸ್ತಿ ಬಂದಾಗ ತನ್ನ ಕೊರಳಲ್ಲಿ ಮಾಂಗಲ್ಯ ಇರಲಿಲ್ಲ' ಎಂದು ಭಾವುಕರಾಗಿದ್ದಾರೆ. ಆ ಸಮಯದಲ್ಲಿ ಏನಾಗಿತ್ತು ಚಂದ್ರಕಲಾ ಅವರ ಕಣ್ಣೀರ ಕಥೆ ಏನು ಎನ್ನುವುದು ತಿಳಿಯಬೇಕೆಂದರೆ ಇವತ್ತಿನ ಎಪಿಸೋಡ್ ನೋಡಬೇಕು.
ನಟಿ ಗೀತಾ ಕೂಡ ತಾನು ಗೆದ್ದಿರುವ ಮೊದಲ ಅವಾರ್ಡ್ ಹಿಡಿದು ಭಾವುಕರಾಗಿದ್ದಾರೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಕೇವಲ ಮೂರು ಸ್ಪರ್ಧಿಗಳು ಪ್ರಶಸ್ತಿ ಗೆದ್ದ ಸಂಭ್ರಮ ಮತ್ತು ಭಾವುಕರಾದ ದೃಶ್ಯವನ್ನು ಮಾತ್ರ ರಿವೀಲ್ ಮಾಡಲಾಗಿದೆ. ಉಳಿದ ಸ್ಪರ್ಧಿಗಳು ಪ್ರಶಸ್ತಿ ಗೆದ್ದು ಬೀಗಿದ ನೆನಪನ್ನು ಹಂಚಿಕೊಳ್ಳುವುದನ್ನು ನೋಡಬೇಕೆಂದರೆ ಸಂಜೆವರೆಗು ಕಾಯಬೇಕು.
This News Article Is A Copy Of FILMIBEAT
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
10-08-26 11:00 pm
HK News Desk
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm