ಬ್ರೇಕಿಂಗ್ ನ್ಯೂಸ್
 
            
                        11-02-21 12:28 pm Source: FILMIBEAT Bharath Kumar K ಸಿನಿಮಾ
 
            2020ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಪಟ್ಟವನ್ನು ತೆಲಂಗಾಣ ಮೂಲದ ಮಾನಸ ವಾರಣಾಸಿ ಮುಡಿಗೇರಿಸಿಕೊಂಡಿದ್ದಾರೆ. ಫೆಬ್ರವರಿ 11 ರಂದು ಸಂಜೆ ಮಿಸ್ ಇಂಡಿಯಾ ವಿನ್ನರ್ ಹೆಸರು ಪ್ರಕಟಿಸಲಾಯಿತು. 2019ರ ಮಿಸ್ ಇಂಡಿಯಾ ರಾಜಸ್ಥಾನದ ಸುಮನ್ ರತನ್ ಸಿಂಗ್ ರಾವ್ ಅವರು ನೂತನ ಮಿಸ್ ಇಂಡಿಯಾ ಮಾನಸ ಅವರಿಗೆ 'ಮಿಸ್ ಇಂಡಿಯಾ 2020' ಪಟ್ಟಾಭಿಷೇಕ ಮಾಡಿದರು. ಮಾನಸ ವಾರಣಾಸಿ ತೆಲಂಗಾಣದ ಹೈದರಾಬಾದ್ನಲ್ಲಿ ನೆಲೆಸಿದ್ದು, ಬುಧವಾರ ರಾತ್ರಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಇಂಜಿನಿಯರ್ ಪದವಿ ಮುಗಿಸಿರುವ ಮಾನಸ ವೃತ್ತಿಯಲ್ಲಿ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕಿ ಆಗಿದ್ದಾರೆ.

ಮಿಸ್ ವರ್ಲ್ಡ್ ಸ್ಪರ್ಧೆಗೆ ಪ್ರವೇಶ
2021ರ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಮಿಸ್ ವರ್ಲ್ಡ್ ಸ್ಪರ್ಧೆಗೆ ಭಾರತದಿಂದ 23 ವರ್ಷದ ಮಾನಸ ವಾರಣಾಸಿ ಆಯ್ಕೆಯಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯುವ ಐತಿಹಾಸಿಕ 70ನೇ ವರ್ಷದ ಮಿಸ್ ವರ್ಲ್ಡ್ ವೇದಿಕೆಯಲ್ಲಿ ಮಾನಸ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮಾನಸ ವಾರಣಾಸಿ ಕುರಿತು
ಮಾನಸ ವಾರಣಾಸಿ ಪುಸ್ತಕಗಳನ್ನು ಓದುವುದು, ಸಂಗೀತ ಮತ್ತು ಯೋಗ ಅಭ್ಯಾಸ ಸೇರಿದಂತೆ ಹಲವು ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಾನಸಾ ಬಹಳ ನಾಚಿಕೆ ಸ್ವಭಾವದ ಮಗುವಾಗಿದ್ದಳು. ಬೆಳೆಯುತ್ತಿದ್ದಂತೆ ಭರತನಾಟ್ಯ ಮತ್ತು ಸಂಗೀತಕ್ಕೆ ಹೆಚ್ಚು ಆದ್ಯತೆ ನೀಡಿದರು. ಈ ಕಲಾ ಪ್ರಕಾರಗಳು ಮಾನಸಾ ಅವರ ಜೀವನದಲ್ಲಿ ಧೈರ್ಯ ಮತ್ತು ಸ್ವಯಂ ಆತ್ಮವಿಶ್ವಾಸ ಹೆಚ್ಚಾಗಲು ಸಹಕಾರಿಯಾಗಿದೆ ಹಾಗೂ ಪ್ರಮುಖ ಪಾಠಗಳನ್ನು ಕಲಿಸಿದೆ ಎಂದು ಮಿಸ್ ಇಂಡಿಯಾ ವರದಿ ಮಾಡಿದೆ.

ರನ್ನರ್ ಅಪ್ ಯಾರು?
ಮಾನಸ ವಾರಣಾಸಿ ಮಿಸ್ ಇಂಡಿಯಾ ವಿನ್ನರ್ ಆಗಿದ್ದರೆ, ಹರಿಯಾಣದ ಮಾನಿಕಾ ಶಿಯೋಕಾಂಡ್ 'ಮಿಸ್ ಗ್ರ್ಯಾಂಡ್ ಇಂಡಿಯಾ 2020' ಪಟ್ಟ ಪಡೆದುಕೊಂಡರು. ಮತ್ತು ಉತ್ತರ ಪ್ರದೇಶದ ಮಾನ್ಯಾ ಸಿಂಗ್ 'ಮಿಸ್ ಇಂಡಿಯಾ 2020 ರನ್ನರ್ ಅಪ್' ಆಗಿ ಕಿರೀಟವನ್ನು ಪಡೆದುಕೊಂಡರು.

ಜ್ಯೂರಿಗಳು ಯಾರಿದ್ದರು?
ಅಂದ್ಹಾಗೆ, ಮಿಸ್ ಇಂಡಿಯಾ 2020 ಸ್ಪರ್ಧೆಗೆ ತೀರ್ಪುಗಾರರಾಗಿ ನಟಿ ನೇಹಾ ಧೂಪಿಯಾ, ಚಿತ್ರಾಂಗದ ಸಿಂಗ್, ಪುಲ್ಕಿತ್ ಸಾಮ್ರಾಟ್ ಮತ್ತು ಖ್ಯಾತ ಡಿಸೈನರ್ ಡ್ಯೂ ಫಾಲ್ಗುನಿ ಮತ್ತು ಶೇನ್ ಪೀಕಾಕ್ ಅವರಂತಹ ಸೆಲೆಬ್ರಿಟಿಗಳನ್ನು ಒಳಗೊಂಡಿತ್ತು. ಈ ಐವರ ಸಮಿತಿಯೂ ಮಿಸ್ ಇಂಡಿಯಾ ಫಲಿತಾಂಶ ನಿರ್ಧರಿಸಿದೆ.
Photo Gallery: 'ಮಿಸ್ ಇಂಡಿಯಾ 2020' ಪ್ರಶಸ್ತಿ ಗೆದ್ದ ತೆಲಂಗಾಣ ಸುಂದರಿ ಮಾನಸ
This News Article is a Copy of FILMIBEAT
 
            
            
             
    
            
             30-10-25 11:00 pm
                        
            
                  
                Bangalore Correspondent    
            
                    
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
 
    ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             30-10-25 11:16 pm
                        
            
                  
                Mangalore Correspondent    
            
                    
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
 
    ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
 
    
            
             29-10-25 10:43 pm
                        
            
                  
                Mangalore Correspondent    
            
                    
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
 
    ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm