ಬ್ರೇಕಿಂಗ್ ನ್ಯೂಸ್
26-01-21 04:44 pm Source: FILMIBEAT Shruthi Gk ಸಿನಿಮಾ
ಇಂದು ದೇಶದಾದ್ಯಂತ 72ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಈ ಬಾರಿಯ ಗಣರಾಜ್ಯದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಧನಂಜಯ್ ಸದ್ಯ ರತ್ನನ್ ಪ್ರಪಂಚ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರತ್ನನ್ ಪ್ರಪಂಚ ಸಿನಿಮಾದ ಚಿತ್ರೀಕರಣ ಹಳ್ಳಿಯಲ್ಲಿ ನಡೆಯುತ್ತಿದೆ. ಚಿತ್ರೀಕರಣದ ನಡುವೆಯೂ ಧನಂಜಯ್ ಹಳ್ಳಿಯ ಶಾಲೆಯೊಂದರ ಗಣರಾಜ್ಯೋತ್ಸವ ಸಂಭ್ರಮಕ್ಕೆ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದಾರೆ.
ಈ ಸಮಯದಲ್ಲಿ ಮಕ್ಕಳ ಮುಂದೆ ಭಾಷಣ ಮಾಡಿದ ನಟ ಧನಂಜಯ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂವಿಧಾನ ಎಂದರೇನು? ಅಂತ ಸರಳವಾಗಿ ವಿವರಿಸಿದ ಧನಂಜಯ್ ಮಾತಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
ಗಣರಾಜ್ಯ ಎಂದರೇನು? ಧನಂಜಯ್ ಹೇಳ್ತಾರೆ ಕೇಳಿ
'ನಿಮ್ಮ ಜೊತೆ ಗಣರಾಜ್ಯ ದಿವಸ ಆಚರಿಸಿದ್ದು ತುಂಬಾ ಸಂತೋಷವಾಗುತ್ತಿದೆ. ಗಣರಾಜ್ಯ ಎಂದರೆ ತುಂಬಾ ಸರಳವಾಗಿ ಹೇಳಬೇಕು ಎಂದರೆ ಶಾಲೆ ನಡೆಸಲು ಒಂದು ರೀತಿ ನೀತಿ ಇರತ್ತೆ, ಎಲ್ಲರೂ ಒಂದೇ, ಎಲ್ಲರಿಗೂ ಸಮಾನ ಅವಕಾಶವಿದೆ. ದೇಶ ನಡೆಸಲು ಒಂದು ರೀತಿ ನೀತಿ ಇರಬೇಕಲ್ವಾ.' ಎಂದಿದ್ದಾರೆ.

ಅಂಬೇಡ್ಕರ್ ಮತ್ತು ಹಿರಿಯರು ಸೇರಿ ರಚಿಸಿದ ಗ್ರಂಥ
'ಅಂಬೇಡ್ಕರ್ ಅಂತ ಹಿರಿಯರು ಎಲ್ಲಾ ಸೇರಿ ದೇಶ ನಡೆಸಲು ಅದ್ಭುತವಾದ ಗ್ರಂಥ ಸಂವಿಧಾನವನ್ನು ರಚಿಸಿದ್ದಾರೆ. ಇದೇ ದೇಶದಲ್ಲಿ ಎಲ್ಲವನ್ನೂ ನೋಡಿ ಬೆಳೆದವರು ಅವರು, ಹಾಗಾಗಿ ಈ ದೇಶ ಅದ್ಭುತವಾಗಿ ನಡೆಸಬೇಕು ಎಂದು ರಚಿಸಿದ್ದಾರೆ. ನಾವೆಲ್ಲರೂ ಅದಕ್ಕೆ ಬದ್ಧರಾಗಿರಬೇಕು.'
ಪ್ರಜಾಪ್ರಭುತ್ವ ಎಂದರೇನು?
'ಪ್ರಜಾಪ್ರಭುತ್ವ ಎಂದರೆ ಎಲ್ಲರಿಗೂ ಗೊತ್ತಿದೆ. ಇನ್ನು ಸ್ವಲ್ಪ ವರ್ಷದಲ್ಲೇ ನೀವು ಓಟು ಮಾಡುತ್ತೀರಿ. ಆಗ ನಿಮಗೆ ಗೊತ್ತಿರಬೇಕು. ಪ್ರಜಾಪ್ರಭುತ್ವ ಎಂದರೇ ಏನು ಅಂತ. ಪ್ರಜೆ ಎಂದರೆ ಪ್ರಜೆಗಳು ಎಂದರೆ ನಾವು. ಪ್ರಭುತ್ವ ಎಂದರೆ ಆಳ್ವಿಕೆ. ನಾವು ಆಳಬೇಕು ಅಂದರೆ ಅಧಿಕಾರವನ್ನು ಕೊಡುವ ಮೂಲಕ. ನಾವು ಓಟು ಹಾಕುವ ಮೂಲಕ ಅಧಿಕಾರ ಕೊಡುತ್ತೀವಿ. ಆದರೀಗ ಅಧಿಕಾರ ತಗೊತಿದ್ದಾರೆ.
This News Article is a Copy of FILMIBEAT
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 07:06 pm
Mangaluru Staffer
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm